ಹೊಸಪೇಟೆ : ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಹೆಚ್ಚಿನ ಮಟ್ಟದಲ್ಲಿ ಶ್ರಮವಹಿಸಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸರ್ಕಾರ ತರಲು ಎಲ್ಲರೂ ಸೇರಿ ಶ್ರಮವಹಿಸಿ ಬೇಕೆಂದು . ತೆಲಂಗಾಣ ರಾಜ್ಯ ಸಲಹೆಗಾರ, ಎಐಸಿಸಿ ಉಸ್ತುವಾರಿ ಹರಕರ್ ವೇಣುಗೋಪಾಲ್ ರಾವ್ ಕಾಂಗ್ರೇಸ್ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು. ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೃಜನ್ ಅಭಿಯಾನ, ಕಾರ್ಯಕ್ರಮ ದಲ್ಲಿ ಭಾಗವಹಿದಸಿ ಮಾತನಾಡಿದರು. , , ಶಾಸಕರು ಆಡಳಿತದ ಬಗ್ಗೆ ಕಾರ್ಯಕರ್ತರು ಜಿಲ್ಲಾ ಪದಾಧಿಕಾರಿಗಳ, ವಿವಿಧ ಮೂಂಚೂಣಿ ಘಟಕಗಳ ಜಿಲ್ಲಾಧ್ಯಕ್ಷರ , ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸೇರಿದಂತೆ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಸಲುವಾಗಿ ಅಭಿಪ್ರಾಯ ಸಂಗ್ರಹ, ಜಿಲ್ಲಾಧ್ಯಕ್ಷರ ನೇಮಕಾತಿ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಯಾವ ಯೋಜನೆ ಜಾರಿಗೆ ತರಬೇಕೆನ್ನುವ ಬಗ್ಗೆ ಮಾಹಿತಿಯನ್ನು ಸಂಗ್ರಹ ಮಾಡಲಾಯಿತು.ಇದಕ್ಕೂ ಮುನ್ನ ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗಾರ ರೊಂದಿಗೆ ಪ್ರಸ್ತುತ ದೇಶದ ಯುವ ಜನರಿಗಾದ ತೊಂದರೆಗೆ ವಿಷಾದಿಸಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಗವಿಯಪ್ಪ ಉಪಸ್ಥಿತರಿದ್ದರು. ಕಾಂಗ್ರೆಸ್ ಕಚೇರಿ ಯಲ್ಲಿ ನಡೆದ ಸಭೆಯಲ್ಲಿ ಶಾಸಕ ಗವಿಯಪ್ಪ ಹಾಜರಿರಲಿಲ್ಲ.ಉಳಿದಂತೆ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್ ರವರು, ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಾದ ಅಟವಾಳಿಗಿ ಕೋಟ್ರೇಶ್, ಕ್ಷಾಲ್ವಿ ಹನುಮಂತಪ್ಪ, ಗುರು ಸಿದ್ದನಗೌಡ, ಕುಮಾರ್ ಗೌಡ, ಎಂ.ವಿ .ಅಂಜಿನಪ್ಪ, ಕುಬೇರಪ್ಪ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ತಮ್ಮನ್ನೆಳ್ಳಪ್ಪ, ಕೆಪಿಸಿಸಿ ಸಧ್ಯಸ್ಯೆ ಶ್ರೀಮತಿ ಜಿಂಕಲ್ ನಾಗಮಣಿ, ಮುಖಂಡರಾದ ಶ್ರೀಮತಿ ರಶ್ಮಿ ರಾಜಶೇಖರ್ ಹಿಟ್ನಾಳ್, ಜಿಲ್ಲಾ ಉಪಾಧ್ಯಕ್ಷ ಕೆ ರಮೇಶ್, ಸೇವಾದಳದ ಜಿಲ್ಲಾ ಸಂಘಟಕ ಬಿ.ಮಾರೆಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಕೆ.ಅನಂತಸ್ವಾಮಿ , ಶ್ರೀಮತಿ ಎಂ ಪಿ.ವೀಣಾ ಮಹಾಂತೇಶ ಮತ್ತಿತರರು ಇದ್ದರು.
