ಬೀಳಗಿ- ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮಹಿಳಾ ಶಾಖೆ ಬಾಗಲಕೋಟೆ ಅವರ ನೇತೃತ್ವದಲ್ಲಿ ಬೀಳಗಿ ತಾಲೂಕಾ ದಲಿತ ಸಂಘರ್ಷ ಸಮಿತಿಯ ನೂತನ ಮಹಿಳಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ತಾಲೂಕ ಮಹಿಳಾ ಸಂಚಾಲಕರಾಗಿ ಜಯಶ್ರೀ ಹಲಗಣಿ. ತಾಲೂಕ ಸಂಘಟನಾ ಸಂಚಾಲಕರಾಗಿ ಕಸ್ತೂರಿ ಕೋಲಾರ್. ಕಸ್ತೂರಿ ಜಾನಮಟ್ಟಿ. ಕೀರ್ತಿ ಚೌವ್ಹಾಣ್. ತಾಲೂಕ ಖಜಾಂಚಿಯಾಗಿ ಯಮನವ್ವ ಸಿರಗನ್ನವರ್ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಸಂಚಾಲಕ ಪರಶುರಾಮ್ ಕಾಂಬ್ಳೆ ,ಜಿಲ್ಲಾ ಸಂಘಟನಾ ಸಂಚಾಲಕ ಬಸವರಾಜ್ ಹಳ್ಳದಮನಿ. ಜಿಲ್ಲಾ ಸಂಘಟನಾ ಸಂಚಾಲಕ ರಮೇಶ್ ಅನಗವಾಡಿ, ಮಹಿಳಾ ಜಿಲ್ಲಾ ಸಂಚಾಲಕಿ ರೇಷ್ಮಾ ಬೇಗ ಬಿರಾದರ್. ಅಲ್ಪಸಂಖ್ಯಾತರ ಜಿಲ್ಲಾ ಸಂಚಾಲಕ ಕಾಸಿಂ ಗೋಠೆ, ನಗರ ಸಂಚಾಲಕ ಚಿನ್ನಪ್ಪ ಬಂಡಿವಡ್ಡರ್, ತಾಲೂಕು ಸಂಚಾಲಕ ಪ್ರಕಾಶ್ ಕಾತರಕಿ ಸೇರಿದಂತೆ ಇತರರು ಇದ್ದರು.