ಇಂಡಿ : ತಾಲೂಕಿನ ಝಳಕಿ ರೇಣುಕಾ ಎಲ್ಲಮ್ಮ ದೇವಸ್ಥಾನ ಗ್ರಾಮದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿರುದ್ಧಿ ಬಿ. ಸಿ. ಟ್ರಸ್ಟ್ ಇವರ ನೇತೃತ್ವದಲ್ಲಿ ಹೈನುಗಾರಿಕೆ ಸಮಾಲೋಚನೆ ಸಭೆಯನ್ನುದ್ದೇಶಿಸಿ ಕೃಷಿ ಮೇಲ್ವಿಚಾರಕ ಸುದೀಪ ಮಾತನಾಡಿದರು.
ಹೈನುಗಾರಿಕೆ ಕೇವಲ ವ್ಯಾಪಾರವಲ್ಲ ಇದು ನಮ್ಮ್ ಸಂಪ್ರದಾಯ ಕೃಷಿ ಮೇಲ್ವಿಚಾರಕ ಸುದೀಪ. ಹೈನುಗಾರಿಕೆಯಿಂದ ರೈತರು, ಸಾಮನ್ಯ ಜನರು ತಮ್ಮ ಜೀವನದಲ್ಲಿ ದಿನನಿತ್ಯದ ಬದುಕು ಕಟ್ಟಿಕೊಂಡಿರುವದು ಸಂತೋ?ದ ವಿ?ಯ, ಹೈನುಗಾರಿಕೆ ಕೇವಲ ವ್ಯಾಪಾರವಲ್ಲ ಇದು ನಮ್ಮ್ ಭರತ ದೇಶದ ಸಂಪ್ರದಾಯ ಕೃಷಿ ಎಂದು ಮೇಲ್ವಿಚಾರಕ ಸುದೀಪ ತಿಳಿಸಿದರು.
ಹಸು, ಎಮ್ಮೆ ಹೈನುಗಾರಿಕೆ ಪ್ರಾಣಿಗಳು ರೈತರ, ಬಡಜನರ ವಡೆತನದಲ್ಲಿ, ಬಹುತೇಕ ಕುಟುಂಬಗಳು ಹಸು ಮತ್ತು ಎಮ್ಮೆಗಳನ್ನೇ ಅವಲಂಬಿತವಾಗಿರುವದನ್ನು ಕಾಣುತ್ತೆವೆ, ಹಸುವನ್ನು ನಮ್ಮ ಸಂಪ್ರದಾಯಲ್ಲಿ ಮುಕ್ಕೋಟಿ ದೇವರ ದೇವಸ್ಥಾನ ಎಂದು ಕರೆಯಲ್ಪಡುತ್ತದೆ, ಇಂತಹ ಹಸುವಿನ ಹಾಲು ನಮಗೆ ದೇವರ ನೈವೇದ್ಯವು ಹೌದು ಜೀವನ ನಡೆಸಲು ವ್ಯಾಪಾರ ಕೂಡಾ ಆಗಿದೆ, ಧರ್ಮಸ್ಥಳ ಯೋಜನೆಯು ಕೇವಲ ವ್ಯಾಪಾರ, ಉದ್ಯೋಗಕ್ಕೆ ಸಾಲ ಕೊಡೋಲ್ಲ, ಇಂತಹ ಹೈನುಗಾರಿಕೆ, ಕುರಿಗಳ ಸಾಲ ಕೂಡಾ ಕೊಡುತ್ತದೆ ಎಂದರು.
ವಲಯದ ಮೇಲ್ವಿಚಾರಕರಾದ ಅರ್ಜುನ ಪಾಟೀಲ್ ಸರ ಮಾತನಾಡಿ ಧರ್ಮಸ್ಥಳ ಯೋಜನೆಯು ಬರಿ ಸಾಲ ಕೊಡಿಸುವ ಸಂಸ್ಥೆ ಅಲ್ಲ ಇಂತಹ ಹಲವಾರು ಯೋಜನೆಗಳನ್ನ ಸಂಸ್ಥೆಯ ಸದಸ್ಯರಿಗೆ ತಲುಪಿಸುವ ಗುರಿ ಯೋಜನೆಯು ಇಂತಹ ಕೆಲಸಗಳನ್ನು ಮಾಡುತ್ತಾ ಬಂದಿದೆ ಮತ್ತು ಈ ಸಂದರ್ಭದಲ್ಲಿ ಯೋಜನೆಯ ಸದಸ್ಯರಿಗೆ ಸಂಘದ ಮಹತ್ವ ವಾರದ ಸಭೆ ಮಾಡುವದು ಮತ್ತು ಯೋಜನೆಯ ಹಲವಾರು ವಿಷಯದ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಒಕ್ಕೂಟ ಅಧ್ಯಕ್ಷರು ಮಲ್ಲಮ್ಮ, ಸಂಘದ ಸದಸ್ಯರು, ಸೇವಾ ಪ್ರತಿನಿಧಿಗಳು ಸಿ. ಎಸ್. ಸಿ. ಸೇವಾದಾರರು ಹಾಗೂ ರೈತರು ಉಪಸ್ಥಿತರಿದ್ದರು.