ಕಾಗವಾಡ : ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹುಟ್ಟುಹಬ್ಬದ ಅಂಗವಾಗಿ ಕಾಗವಾಡ ತಾಲೂಕು ಕರವೇ ಘಟಕವು ಬುಧವಾರ ರಂದು ತಾಲೂಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು
ಕರವೇ ಉಪಾಧ್ಯಕ್ಷ ಗಣೇಶ್ ಕೊಳಕರ ಮಾತನಾಡಿ, ಕರವೇ ನಾಡು ನುಡಿ, ನೆಲ, ಜಲ ರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದು, ಕಾಗವಾಡ ಕರವೇ ತಾಲೂಕು ಘಟಕವು ಪ್ರತಿ ವರ್ಷವೂ ಸಹ ರೋಗಿಗಳಿಗೆ ಹಣ್ಣು ವಿತರಣೆ ಮಾಡುವುದರ ಮೂಲಕ ಜನ್ಮದಿನ ವಿಶೇಷವಾಗಿ ಆಚರಣೆ ಮಾಡುತ್ತಾ ಬಂದಿದೆ.
ನೂರಾರು ಕಾರ್ಯಕರ್ತರು ಹೋರಾಟದ ಜೊತೆಗೆ ಈ ರೀತಿಯ ಸಮಾಜ ಸೇವಾ ಕಾರ್ಯಕ್ರಮಗಳನ್ನು ಮಾಡುವುದು ಅವಶ್ಯಕ ಎಂದು ಹೇಳಿದರು.ಸಿದ್ದು ಒಡಿಯರ ಮಾತಾನಾಡಿ, ನಾಡು, ನುಡಿಗೆ ಅನ್ಯಾಯವಾದ ತಕ್ಷಣ ಬೀದಿಗಿಳಿದು ಕರವೇ ಹೋರಾಟ ಮಾಡುತ್ತದೆ ಎಂದರು.
ಈ ಸಮಯದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಪುಷ್ಪಲತಾ ಸುಣ್ಣದಕಲ್ಲ , ಕರವೇ ತಾಲೂಕಾಧ್ಯಕ್ಷ ಸಿದ್ದು ಒಡಿಯರ, ತಾಲೂಕ ಉಪಾಧ್ಯಕ್ಷ ಗಣೇಶ ಕೊಳ್ಳೇಕರ, ಫಾರೂಕ್ ಅಲಾಸ್ಕರ್, ಹಸನ್ ಪಾನರಿ, ಸಚಿನ ಗಾವಡೆ, ಬಾಬಾಸಾಬ ಕೊತ್ತಲಗೆ ಉಪಸ್ಥಿತರಿದ್ದರು.
