ಏಕಾಏಕಿ ಹೊತ್ತಿಕೊಂಡ ಬೆಂಕಿಗೆ ಧಗ.ಧಗ.. ಹೊತ್ತಿ ಉರಿದ ಮಳಿಗೆಗಳು

Ravi Talawar
ಏಕಾಏಕಿ ಹೊತ್ತಿಕೊಂಡ ಬೆಂಕಿಗೆ ಧಗ.ಧಗ.. ಹೊತ್ತಿ ಉರಿದ ಮಳಿಗೆಗಳು
WhatsApp Group Join Now
Telegram Group Join Now

ಕೊಪ್ಪಳ,ಮೇ20: ನಗರದ ಕೇಂದ್ರೀಯ ಬಸ್ ನಿಲ್ದಾಣ ಬಳಿಯಲ್ಲಿ ಅಗ್ನಿ ದುರಂತ ಸಂಭವಿಸಿದೆ. ಮಳಿಗೆಗೆಗಳು ಸಾಲಾಗಿ ಭಾರೀ ಅಗ್ನಿಯ ಕೆನ್ನೆಲಿಗೆಗೆ ಧಗ..ಧಗ ಹೊತ್ತಿ ಉರಿದಿವೆ.

ಬಸ್ ನಿಲ್ದಾಣದ ರಾಯಲ್ ಪೇಂಟ್ಸ್‌ನಲ್ಲಿ ಮೊದಲಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ನಂತರ ಬೆಂಕಿಯ ಕೆನ್ನಾಲಿಗೆ ಪಕ್ಕದ ಮಳಿಗೆಗಳಿಗೂ ಆವರಿಸಿಕೊಂಡಿದೆ. ಭೀಕರ ಬೆಂಕಿಯ ಆರ್ಭಟವನ್ನು ತಹಬದಿಗೆ ತರುವುದಕ್ಕಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಕೊಪ್ಪಳದ ಎಸ್‌ಪಿ ಯಶೋದ ವಂಟಗೂಡಿ ಸ್ಥಳಕ್ಕೆ ದೌಡಾಯಿಸಿ ಸ್ಥಿತಿ ನಿಯಂತ್ರಣಕ್ಕಾಗಿ ಸಿಬ್ಬಂದಿಗೆ ಸಲಹೆ, ಸೂಚನೆಗಳನ್ನು ನೀಡಿದರು. ಭಾರೀ ಬೆಂಕಿಗೆ ಮಳಿಗೆಗಳಲ್ಲಿಯ ವಸ್ತುಗಳು ಆಹುತಿಯಾಗಿದೆ. ಹೀಗಾಗಿ ಅಂಗಡಿಗಳ ಮಾಲೀಕರ ಬೆಂಕಿಯ ರೌದ್ರ ನರ್ತನಕ್ಕೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

WhatsApp Group Join Now
Telegram Group Join Now
Share This Article