ಶಿರಹಟ್ಟಿ. ಕಳೆದ 34 ವರ್ಷಗಳ ಕಾಲ ಅಗ್ನಿಶಾಮಕ ಇಲಾಖೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ,ಇಂದು ಸಹಾಯಕ ಠಾಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂಡುತ್ತಿರುವ ಶಂಕರ ಬಿ ಶೇಗುಣಸಿ ಅವರು ಇಲಾಖೆಗೆ ಸಲ್ಲಿಸಿದ ಕಾರ್ಯ ಶ್ಲಾಘನೀಯ ಎಂದು ಗದಗ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ವಿಜಯಕುಮಾರ ಎಚ್ ಜಿ ಹೇಳಿದರು.
ಅವರು ಗುರುವಾರದಂದು ಸೇವಾ ನಿವೃತ್ತಿ ಹೊಂಡುತ್ತಿರುವ ಅಗ್ನಿಶಾಮಕ ಸಹಾಯಕ ಠಾಣಾ ಅಧಿಕಾರಿಗಳಾದ ಶಂಕರ ಬಿ ಶೇಗುಣಸಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ಕಳೆದ 15 ವರ್ಷಗಳ ಹಿಂದೆ ಇಲಾಖೆ ಸೇವೆ ಕಠಿಣ ಇತ್ತು, ಆಗ ಜಿಲ್ಲೆಯಲ್ಲಿ ಕೆಲವು ಠಾಣೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು, ಆದರೆ ಈಗ ತಾಲೂಕಿಗೊಂದು ಅಗ್ನಿಶಾಮಕ ಠಾಣೆ ಅಗಿದ್ದು ಸಹಕಾರಿ ಆಗಿದೆ ಎಂದರು.
ಶಿರಹಟ್ಟಿ ಅಗ್ನಿಶಾಮಕ ಠಾಣಾ ಅಧಿಕಾರಿಗಳಾದ ಬಿ ವಾಯ್ ಬಂಗಾರಪ್ಪ ತುರನೂರ ಮಾತನಾಡಿ ಶೇಗುಣಸಿ ಅವರು ಶಿಸ್ತು , ಅಚ್ಚುಕಟ್ಟಾಗಿ ಸರ್ಕಾರಿ ಸೇವೆಯನ್ನು ಸಲ್ಲಿಸಿ ಎಲ್ಲರಿಗೂ ಮಾರ್ಗದರ್ಶಕರಾಗಿ ಇಂದು ನಿವೃತ್ತಿ ಹೊಂಡುತ್ತಿದ್ದಾರೆ ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದರು.
ಸಹಾಯಕ ಠಾಣಾ ಅಧಿಕಾರಿ ಶಂಕರ ಶೇಗುಣಸಿ ಮಾತನಾಡಿ ಎಲ್ಲ ಅಧಿಕಾರಿಗಳ, ಸಹೋದ್ಯೋಗಿಗಳ ಸಹಕಾರದಿಂದ ಯಶಸ್ವಿಯಾಗಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಆಗುತ್ತಿದ್ದೇನೆ. ನಾವು ಸಾರ್ವಜನಿಕರಿಗೆ, ಅಧಿಕಾರಿಗಳಿಗೆ, ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಮಹಾದೇವಿ ಶೇಗುಣಸಿ, ಶ್ರೀಮತಿ ರೇಖಾ ಪಾಟೀಲ, ಠಾಣೆಯ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ರಶೀದ್ ಮಸೂತಿ, ವಂದನಾರ್ಪಣೆ ಜಗದೀಶ ಎಮ್ ಸಿ, ಸ್ವಾಗತವನ್ನು ಈರಪ್ಪ ಗೂಳಿ ನೆರವೇರಿಸಿದರು.