ಅಥಣಿ: ಗ್ರಾಮ ಪಂಚಾಯತ್ ಕಟ್ಟಡವು ಗ್ರಾಮೀಣ ಆಡಳಿತದ ಕೇಂದ್ರವಾಗಿದ್ದು, ಜನಸಾಮಾನ್ಯರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಆಧುನಿಕ ಸೌಕರ್ಯಗಳ ಅಗತ್ಯವಿದೆ. ಹೊಸ ಕಟ್ಟಡ ನಿರ್ಮಾಣದಿಂದ ಗ್ರಾಮಸ್ಥರಿಗೆ ಸರಕಾರದ ವಿವಿಧ ಯೋಜನೆಗಳ ಸೇವೆಗಳು ಸುಲಭವಾಗಿ ಲಭ್ಯವಾಗಲಿವೆ ಎಂದು ಶಾಸಕ ಲಕ್ಷö್ಮಣ ಸವದಿ ಹೇಳಿದರು
ಅಥಣಿ ತಾಲೂಕಿನ ಸಂಕೊನಹಟ್ಟಿ ಗ್ರಾಮ ಪಂಚಾಯತ (ಅಥಣಿ ಗ್ರಾಮೀಣ) ೧ ಕೋಟಿ ರೂ.ಗಳ ನೂತನ ಕಟ್ಟಡ ಕಾಮಗರಿಗೆ ಮಂಗಳವಾರ ಶಾಸಕ ಲಕ್ಷö್ಮಣ ಸವದಿ ಭೂಮಿ ನೇರವೇರಿಸಿ ಮಾತನಾಡಿದ ಅವರು ಈ ಯೋಜನೆ ಗ್ರಾಮಾಭಿವೃದ್ಧಿಗೆ ಉತ್ತೇಜನ ನೀಡುವುದರ ಜೊತೆಗೆ, ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಸಹಕಾರಿಯಾಗಲಿದೆ. ಕಟ್ಟಡದಲ್ಲಿ ಕಚೇರಿ ಕೊಠಡಿಗಳು, ಸಭಾಂಗಣ, ದಾಖಲೆ ಸಂಗ್ರಹಣೆ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು. ಗ್ರಾಮಾಭಿವೃದ್ಧಿ ಕಾರ್ಯಗಳಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಗ್ರಾಮವು ಅಭಿವೃದ್ಧಿಯ ದಾರಿಯಲ್ಲಿ ಸಾಗುತ್ತದೆ ಎಂದು ಹೇಳಿದರು
ಈ ವೇಳೆ ಮಾಜಿ ಗ್ರಾಂ.ಪ ಅಧ್ಯಕ್ಷ ಶಂಕರ ಗಡದೆ, ಮಾಜಿ ಸದಸ್ಯರಾದ ಬರಮು ಸೋನಕರ, ಸಂಜಯ ಹಣಮಾಪುರೆ, ಅರುಣ ಬಾಸಿಂಗಿ, ಪರಸರಾಮ ಪೋಳ, ಪುಟ್ಟು ಸಿಂಧೆ, ಅಣ್ಣಪ್ಪ ಬಸರಿಖೋಡಿ, ಅಶೋಕ ಕೌಜಲಗಿ, ಮುಖಂಡರಾದ ಸುರೇಶ ಘೋಳಪ್ಪನವ, ಶಿವಾನಂದ ದಿವಾನಮಳ, ರಾಮಣ್ಣ ಧರಿಗೌಡರ, ನರಸು ಬಡಕಂಬಿ, ಅಧಿಕಾರಿಗಳಾದ ಶಿವಾನಂದ ಕಲ್ಲಾಪೂರ, ಪ್ರವೀಣ ಹುನಸಿಕಟ್ಟಿ, ಬೀರಪ್ಪ ಕಡಗಂಚಿ ಸೇರಿದಂತೆ ಗ್ರಾಮ ಪಂಚಾಯತ ಸಿಬ್ಬಂಧಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು