ರಾಜ್ಯದ ಸಮಸ್ಯೆಗಳಿಗೆ ಕೇಂದ್ರದಲ್ಲಿ ಧ್ವನಿ ಎತ್ತಲು ತುಕರಾಂಗೆ ಮತ ನೀಡಿ: ರಾಮಲಿಂಗಾರೆಡ್ಡಿ

Ravi Talawar
ರಾಜ್ಯದ ಸಮಸ್ಯೆಗಳಿಗೆ ಕೇಂದ್ರದಲ್ಲಿ ಧ್ವನಿ ಎತ್ತಲು ತುಕರಾಂಗೆ ಮತ ನೀಡಿ: ರಾಮಲಿಂಗಾರೆಡ್ಡಿ
WhatsApp Group Join Now
Telegram Group Join Now
ಬಳ್ಳಾರಿ, ಮೇ.03: ರಾಜ್ಯಾದ್ಯಂತ ಬರ ಪರಿಸ್ಥಿತಿ ಆವರಿಸಿದ್ದರೂ, ಕರ್ನಾಟಕದ  25 ಬಿಜೆಪಿ ಸದಸ್ಯರು ಕೇಂದ್ರದಲ್ಲಿ ಚಕಾರ ಎತ್ತಲಿಲ್ಲ. ಜಿಲ್ಲೆಯ, ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರದಲ್ಲಿ ಸಮರ್ಥವಾಗಿ ಧ್ವನಿ ಎತ್ತಲು ಲೋಕಾಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಮ್ ಅವರನ್ನು  ಗೆಲ್ಲಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತದಾರರಲ್ಲಿಮನವಿ ಮಾಡಿದ್ದಾರೆ.
 ನಗರದ ಪಕ್ಷದ ಜಿಲ್ಲಾ ಕಚೇರಿಯಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಮಳೆಯ ಕೊರತೆಯಿಂದ ರಾಜ್ಯಾದ್ಯಂತ ಬರ ಪರಿಸ್ಥಿತಿ ಆವರಿಸಿತು. ರಾಜ್ಯದ 236 ತಾಲೂಕುಗಳ ಪೈಕಿ 224 ತಾಲೂಕುಗಳು ಬರ ಪೀಡಿತವಾಗಿದ್ದವು.‌ಆದರೆ ಏಳು ತಿಂಗಳಾದರೂ ಕೇಂದ್ರ ಸರ್ಕಾರ ಬರ ಪರಿಹಾರದ ಅನುದಾನ ಬಿಡುಗಡೆ ಮಾಡಲಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ 25 ಬಿಜೆಪಿ, ಬೆಂಬಲಿತ ಇಬ್ಬವರು ಸೇರಿ 27 ಸಂಸದರು ಕೇಂದ್ರದಲ್ಲಿ ಚಕಾರ ಎತ್ತಲಿಲ್ಲ. ಮುಖ್ಯ ಮಂತ್ರಿಗಳು ಸರ್ವ ಪಕ್ಷದ ಸಭೆ ಕರೆದರೂ ಯಾರು ಬರುತ್ತಿರಲಿಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಯ್ತು.
ಈ ಹಿನ್ನೆಲೆಯಲ್ಲಿ ರಾಜ್ಯದ ಬೇಡಿಕೆಯಷ್ಟು ನೀಡದೆ,  ಸ್ವಲ್ಪ ಅನುದಾನ ಅಂದರೆ  3454 ಕೋಟಿ ರೂ. ಬರಪರಿಹಾರಕ್ಕೆ ಬಿಡುಗಡೆ ಮಾಡಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗುವ ಮುನ್ನ ಎಲ್ಲ ಪಕ್ಷಗಳು ಒಟ್ಟಾಗಿ ಹೋಗಿ ಪ್ರಧಾನಿಗಳನ್ನು ಭೇಟಿ ಮಾಡುತ್ತಿದ್ದೆವು. ಈಗ ಆ ಕಾಲ ಬದಲಾಗಿದೆ. ಯಾರು ಕೂಡ ಪರಿಹಾರ ಕೇಳಲು ಮುಂದೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು  ಎಸ್ ಐಟಿ ತನಿಖೆಗೆ ವಹಿಸಲಾಗಿದ್ದು ತನಿಖೆ ಹಂತದಲ್ಲಿ ಆ ಬಗ್ಗೆ ಮಾತನಾಡೋದು ಸೂಕ್ತವಲ್ಲ. ಪ್ರಕರಣ ಮೇಲೆ ಪ್ರಭಾವ ಬೀರಲ್ಲ ಎಂದು ತಿಳಿಸಿದರು.
ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಘಟನೆ ನಡೆದರೂ ಕುಮಾರ ಸ್ವಾಮಿ, ಮಹಾನಾಯಕ ಅಂತ ನೂರು ಬಾರಿ ಹೇಳ್ತಾರೆ. ಯುಪಿಎ ಸರ್ಕಾರದ ಅವಧಿಯಲ್ಲೂ ಅಣ್ಣಾ ಹಜಾರೆ ಹೋರಾಟ ಮಾಡಿದರು. 2ಜಿ ಹಗರಣ, ಕಲ್ಲಿದ್ದಲು ಹಗರಣ ಅಂತ ಹೇಳಿದರು. ಕೊನೆಗೆ ಏನಾಯಿತು. ಎಲ್ಲವು ಕ್ಲೀನ್ ಚಿಟ್ ಸಿಕ್ಕಿತು. ಆದರೆ, ಸರ್ಕಾರವೇ ಬದಲಾಯಿತು ಎಂದು ತಿಳಿಸಿದರು.
ಕುಕ್ಕೆ ಸುಬ್ರಹ್ಮಣ್ಯಂ ದೇವಸ್ಥಾನಕ್ಕೆ ನೇಮಕ ಮಾಡಿರುವ ಎಇಒ ಯೇಸುರಾಜ್ ಕ್ರಿಶ್ಚಿಯನ್ ಅಲ್ಲ. ಆದರೂ  ಪರಿಶಿಷ್ಟ ಜಾತಿಯ ಹಿಂದು. ಏಸುಕ್ರಿಸ್ತು ಜನಿಸಿದ ಡಿಸೆಂಬರ್ 25ರಂದು ಜನಿಸಿದ್ದ ಹಿನ್ನೆಲೆಯಲ್ಲಿ ಅವರ ಪೋಷಕರು ಯೇಸುರಾಜ್ ಎಂದು ಹೆಸರಿಟ್ಟಿದ್ದಾರೆ. ಅದನ್ನೇ ವಿಕೃತ ಮನಸ್ಥಿತಿಯ ಬಿಜೆಪಿವರು, ಹಿಂದೂ, ಮುಸ್ಲಿಂ ಅಂತ ಅಪ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ವಿಕೃತ ಮನೋಭಾವ ಬಿಡಬೇಕು. ಎಲ್ಲ ಜನರು ಒಂದೇ ಅಂತಾ ತಿಳಿದುಕೊಳ್ಳಬೇಕು. ಬಿಜೆಪಿಯವರಿಗೆ ಎಲ್ಲ ಸಮುದಾಯಗಳ ಮತಗಳು ಬೇಕು ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಜಿಲ್ಲಾ ಅಧ್ಯಕ್ಷ ಅಲ್ಲಂ ಪ್ರಶಾಂತ್,  ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ವೆಂಕಟೇಶ್ ಹೆಗಡೆ ಸೇರಿ ಹಲವರು ಇದ್ದರು.
WhatsApp Group Join Now
Telegram Group Join Now
Share This Article