ನೇಸರಗಿ: ದೇಶ ಕಾಯುವ ಸೈನಿಕರು ನಮ್ಮ ರಕ್ಷಕರು ಅವರಿಗೆ ನಾವು ಪ್ರೀತಿ, ಪ್ರೇಮದಿಂದ ಆಧರದಿಂದ, ಗೌರವಯುತವಾಗಿ ನಮ್ಮೊಂದಿಗೆ ಬೆಳೆಸಿಕೊಳ್ಳಬೇಕೆಂದು ನಿವೃತ್ತ ಶಿಕ್ಷಕರಾದ ಸಿ ವಿ. ಕಟ್ಟಿಮನಿ ಹೇಳಿದರು.
ಅವರು ಕಳೆದ 24 ವರ್ಷಗಳಿಂದ ಮದ್ರಾಸ ರಿಜಿಮೆಂಟ್ ಸೈನಿಕ ಸೇವೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಗ್ರಾಮಕ್ಕೆ ಆಗಮಿಸಿದ ಪ್ರಯುಕ್ತ ಗ್ರಾಮದ ಶ್ರೀ ಚನ್ನವ್ರಷಬೆಂದ್ರ ದೇವರಕೊಂಡ ಅಜ್ಜನವರ ಲೀಲಾ ಮಠದಲ್ಲಿ ಆಯೋಜಿಸಲಾಗಿದ್ದ ನಿವೃತ್ತ ಸೈನಿಕ ಆಡಿವಪ್ಪ ಚನ್ನಪ್ಪ. ಮೆನಸಿನಕಾಯಿ ಅವರು ಸೇವಾ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೋಮನವರ,ಸದಸ್ಯರು, ಕುಟುಂಬದ ಸದಸ್ಯರು, ನಿವೃತ್ತ, ಸೇವಾ ನಿರತ ಸೈನಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.