ರಾಜ್ಯ ರೈತೋದಯ ಹಸಿರು ಸೇನೆ ಜಿಲ್ಲಾಧ್ಯಕ್ಷರಾಗಿ ಬಸವರಾಜ ಬಿರಾದಾರ ಪಾಟೀಲ ನೇಮಕ 

Ravi Talawar
ರಾಜ್ಯ ರೈತೋದಯ ಹಸಿರು ಸೇನೆ ಜಿಲ್ಲಾಧ್ಯಕ್ಷರಾಗಿ ಬಸವರಾಜ ಬಿರಾದಾರ ಪಾಟೀಲ ನೇಮಕ 
WhatsApp Group Join Now
Telegram Group Join Now
ಅಂಕಲಗಿ: ಕರ್ನಾಟಕ ರಾಜ್ಯ ರೈತೋ ದಯ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾಗಿ ಸಮೀಪದ ಉರಬಿನಹಟ್ಟಿ ಗ್ರಾಮದ ಬಸವರಾಜ  ಬಿರಾದಾರ ಪಾಟೀಲ ನೇಮಕಗೊಂಡಿದ್ದಾರೆ.
ಇವರ ಈ ನೇಮಕವನ್ನು ಸೇನೆಯ ರಾಜ್ಯಧ್ಯಕ್ಷರಾದ ಬಿ.ಟಿ. ಭೋವಿ ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಸೇನೆಯ ಸಭೆಯಲ್ಲಿ ಖಚಿತ ಪಡಿಸಿ ಆದೇಶ ಹೊರಡಿಸಿದ್ದಾರೆ. ಬಸವರಾಜ ಬಿರಾದಾರಪಾಟೀಲ ಅವರಲ್ಲಿಯ ರೈತ ಪರ ಕಾಳಜಿ ಮತ್ತು ಅನ್ಯಾಯದ ವಿರುದ್ಧ ಹೋರಾಟ ಪ್ರವ್ರತ್ತಿ ಗಮನಿಸಿ ಅವರಿಗೆ ಈ ಹುದ್ದೆ ನೀಡಲಾಗಿದೆ ಎಂದು ರಾಜ್ಯಧ್ಯಕ್ಷ ಬಿ.ಟಿ. ಚಂದ್ರಶೇಖರ ಭೋವಿ ತಿಳಿಸಿದ್ದಾರೆ.
ಬಸವರಾಜ ಬಿರಾದಾರ ಪಾಟೀಲ ಅವರು ರೈತರ ಧ್ವನಿಯಾಗಿ ನಿಲ್ಲುವದಾಗಿ ಹೇಳಿದ್ದಾರೆ. ಬಸವರಾಜ ಬಿರಾದಾರ ಪಾಟೀಲ ಅವರ ಈ ನೇಮಕದಿಂದ ಕುಂದರನಾಡಿನ ರೈತರಲ್ಲಿ ಮತ್ತು ಅಭಿಮಾನಿಗಳಲ್ಲಿ ತೀವ್ರ ಹರ್ಷ ವ್ಯಕ್ತವಾಗಿದೆ.
WhatsApp Group Join Now
Telegram Group Join Now
Share This Article