ಹುನಗುಂದ: ಬಾಗಲಕೋಟೆ ವಿಶ್ವ ವಿದ್ಯಾಲಯ ಜಮಖಂಡಿಯ ಈ ಸಲದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದ ಇಳಕಲ್ಲಿನ ಗುರುಮಹಾಂತ ಶ್ರೀಗಳಿಗೆ ಹುನಗುಂದದ ಲೇಖಕರ ಬಳಗದಿಂದ ಗೌರವ ಸಲ್ಲಿಸಲಾಯಿತು.
ಇಲಕಲ್ಲಿನ ಶ್ರೀಮಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹಿರಿಯ ಲೇಖಕ ಎಸ್ಕೆ ಕೊನೆಸಾಗರ ಮಾತನಾಡಿ ಶ್ರೀಗಳ ಬಸವತತ್ವ ನಿಷ್ಟ, ಬಸವಾದಿ ಶರಣರ ವಚನಗಳ ಸಾರ ಮತ್ತು ಆದರ್ಶಗಳ ಅನು?ನದಲ್ಲಿ ಅವರ ಶ್ರಮ ಶ್ಲಾಘನೀಯ. ಇವರ ಸರಳ ಬದುಕು ಹಾಗೂ ವೈಚಾರಿಕ ನಿಲುವುಗಳು ನಾಡಿಗೆ ಮಾದರಿ ಎಂದರು. ಲೇಖಕರಾದ ಶರಣಪ್ಪ ಹೂಲಗೇರಿ, ವೀರಭದ್ರಯ್ಯ ಶಶಿಮಠ ಮತ್ತು ಐ.ಎಚ್.ನಾಯಕ ಉಪಸ್ಥಿತರಿದ್ದರು.
