ಬೀಳಗಿ:೮-ಬಾಡಗಂಡಿ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನ(ರಿ) ಶ್ರೀಮತಿ ಶಾಂತಾದೇವಿ ಸ್ಮರಣಾರ್ತ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಜುಲೈ ೧೦ ರಂದು ಶುಕ್ರವಾರ ಮುಜಾಂನೆ ೧೦ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ನಡೆಯಲಿದ್ದು ಅವಳಿ ಜಿಲ್ಲೆಯ ಜನರು ಇದರ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಕಾರ್ಯದರ್ಶಿಗಳಾದ ಎಮ್.ಎನ್.ಪಾಟೀಲ ಹೇಳಿದರು
ಬಾಡಗಂಡಿಯ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಭಾಭವನದಲ್ಲಿ ಬುಧುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಎಸ್.ಆರ್.ಪಾಟೀಲರು ಈ ಭಾಗದ ಜನರು ಆರೋಗ್ಯವಾಗಿರಬೇಕು ಮತ್ತು ಸುರಕ್ಷಿತವಾಗಿರಬೇಕೆನ್ನುವ ಉದ್ದೇಶದಿಂದ ಗ್ರಾಮೀಣ ಮಟ್ಟದಲ್ಲಿ ಹೈಟೆಕ್ ಆಸ್ಪತ್ರೆ ತೆರೆಯುವ ಮೂಲಕ ಈ ಭಾಗದ ಜನರಿಗೆ ಆರೋಗ್ಯ ಸಂಜೀವಿನಿಯಾಗಿದ್ದಾರೆ. ನಮ್ಮ ಸಂಸ್ಥೆಯ ಆಯುರ್ವೇದಿಕ ಆಸ್ಪತ್ರೆಯಲ್ಲಿ ಎಲ್ಲ ಮೂಲಭೂತ ಸೌಲಭ್ಯವನ್ನು ಹೊಂದಿದ್ದು ಅನುಭವಿ ಹಾಗೂ ನುರಿತ ತಜ್ಞ ವೈದ್ಯರಿಂದ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ. ಅಂಧತ್ವ ನಿವಾರಣೆಗಾಗಿ ಕಣ್ಣಿನ ರಕ್ಷಣೆ ಹಾಗೂ ಮಹಿಳಾ ತಾಯಿಂದಿಯರ ಉಚಿತ ಹೆರಿಗೆ ಸೇವೆ ನಿತಂರವಾಗಿ ನಡೆಯುತ್ತಿದೆ. ಈಗಾಗಲೇ ಈ ಎರಡು ಆಸ್ಪತ್ರೆಗಳಲ್ಲಿ ಲಕ್ಷಾಂತರ ಜನರು ವೈದ್ಯಕೀಯ ಸೇವೆ ಪಡೆದ ಗುಣಮುಖರಾಗಿದ್ದಾರೆ. ಆಯರ್ವೇದಿಕ್ ಆಸ್ಪತ್ರೆಯಲ್ಲಿ ಆಯ್ದ ರೋಗಗಳಿಗೆ ಉಚಿತ ಪಂಚಕರ್ಮ ಮತ್ತು ಶಾಸ್ತ್ರ ಚಿಕಿತ್ಸೆ ನೀಡಲಾಗುತ್ತದೆ ಇದರ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಉಚಿತ ಶಿಬಿರದಲ್ಲಿ:- ಸೋರಿಯಾಸಿಸ್ ಕತ್ತು ನೋವು, ಬೆನ್ನು ನೋವು ನರ ರೋಗವು ಚಿಕ್ಕ ಮಕ್ಕಳು ಹೊಟ್ಟೆ ನೋವು ಬೊಜ್ಜು ಸೊಂಟ ಅಸ್ತಮಾ ದೃಷ್ಟಿ ಮಧ್ಯತೆ ಹಾಗೂ ಇನ್ನು ಅನೇಕ ಕಾಯಿಲೆಗಳನ್ನು ಪರೀಕ್ಷೆಗೆ ಒಳಪಡಿಸಿ ಉಚಿತವಾಗಿ ಸೇವೆ ಮಾಡಲಾಗುವುದು ಎಂದು ಹೇಳಿದರು.
