ತಾಳಿಕೋಟೆ, ನಗರದ ರಜಪೂತ ಸಮಾಜದ ಇಂದಿರಾಬಾಯಿ ಭವನಸಿಂಗ್ ಹಜೇರಿ ಜೆಇಇ ಪರಿಕ್ಷೆಯಲ್ಲಿ ೨೨೭ನೇ ರ್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದ್ದಕ್ಕೆ ರಜಪೂತ ಸಮಾಜದ ವತಿಯಿಂದ ಸೋಮವಾರರಂದು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸಲಾಯಿತು..
ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ ಮಾತನಾಡಿ ಇಂದಿರಾಬಾಯಿ ಭವನಸಿಂಗ್ ಹಜೇರಿ ಚಿಕ್ಕವಳಿದ್ದಾಗಿನಿಂದಲೂ ಶಿಕ್ಷಣದ ಮೇಲಿನ ತನ್ನ ಆಸಕ್ತಿ ಹೆಚ್ಚಿಸಿಕೊಳ್ಳುತ್ತಾ ಬಂದವಳಾಗಿದ್ದಳು ಅವಳ ಓದಿನೊಂದಿಗೆ ಸಾಧಸಬೇಕೆಂಬ ಛಲ ದೇಶದ ಅತ್ಯುನ್ನತ ಪರಿಕ್ಷೆ ಜೆಇಇಯಲ್ಲಿ ದೇಶಕ್ಕೆ ೨೨೭ನೇ ರ್ಯಾಂಕ್ ಪಡೆಯುವದರೊಂದಿಗೆ ಹೆತ್ತವರ ಮತ್ತು ಕಲಿಸಿದ ಶಿಕ್ಷಣ ಸಂಸ್ಥೆಯ ಜೊತೆಗೆ ರಜಪೂತ ಸಮಾಜದ ಹೆಸರನ್ನು ಬೆಳಗಿಸಿದ್ದಾಳೆ ಅವರ ಈ ಸಾಧನೆ ಮುಂದುವರೆಯಲಿ ಮತ್ತು ಅವಳ ಛಲ ರಾಜ್ಯಕ್ಕೆ ಒಳ್ಳೆಯ ಕೊಡುಗೆಯಾಗಿ ಬೆಳೆಯಲಿ ಎಂದರು.
ಇನ್ನೋರ್ವ ರಜಪೂತ ಸಮಾಜದ ಉಪಾಧ್ಯಕ್ಷ ರತನಸಿಂಗ್ ಕೊಕಟನೂರ ಮಾತನಾಡಿ ಇಂದಿರಾಬಾಯಿ ಹಜೇರಿ ಸಾಧನೆಯು ಯಾರ ಸ್ವತ್ತಲ್ಲಾವೆಂಬುದನ್ನು ತನ್ನ ಕಲಿಕೆಯ ಶಿಕ್ಷಣದ ಮೂಲಕ ತೋರಿಸಿಕೊಟ್ಟಿದ್ದಾಳೆ ಮತ್ತು ಇತರರಿಗೆ ಮಾದರಿಯಾಗಿದ್ದಾಳೆ ಜೆಇಇ ಅತ್ಯುನ್ನತ ಪರಿಕ್ಷೆಯಲ್ಲಿ ಉತ್ತಮ ಸಾಧನೆ ತೋರಿ ಮಾದರಿಯ ಹಾದಿಯಲ್ಲಿ ಸಾಗಿರುವ ಇಂದಿರಾಬಾಯಿಯ ಕನಸ್ಸು ನನಸ್ಸಾಗಲಿ ಎಂದು ಹಾರೈಸಿದರು.
ಈ ಸಮಯದಲ್ಲಿ ರಜಪೂತ ಸಮಾಜದ ಮುಖಂಡರುಗಳಾದ ಭರತಸಿಂಗ್ ವಿಜಾಪೂರ, ರಘುರಾಮಸಿಂಗ್ ಹಜೇರಿ, ವಿಜಯಸಿಂಗ್ ಹಜೇರಿ, ಜಯಸಿಂಗ್ ಮೂಲಿಮನಿ, ವಿಠ್ಠಲಸಿಂಗ್ ಹಜೇರಿ(ಬೇಕಿನಾಳ), ರಮೇಶ ಗೌಡಗೇರಿ, ನಾರಾಯಣಸಿಂಗ್ ಕೊಕಟನೂರ, ಅರುಣಸಿಂಗ್ ಧಡೇದ, ಸುರೇಶ ಹಜೇರಿ ಮೊದಲಾದವರು ಉಪಸ್ಥಿತರಿದ್ದರು.
