Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೆಇಇಯಲ್ಲಿ ಸಾಧನೆಗೈದ ಇಂದಿರಾಬಾಯಿಗೆ ಸನ್ಮಾನ

ತಾಳಿಕೋಟೆ,   ನಗರದ ರಜಪೂತ ಸಮಾಜದ ಇಂದಿರಾಬಾಯಿ ಭವನಸಿಂಗ್ ಹಜೇರಿ ಜೆಇಇ ಪರಿಕ್ಷೆಯಲ್ಲಿ ೨೨೭ನೇ ರ್‍ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದ್ದಕ್ಕೆ ರಜಪೂತ ಸಮಾಜದ ವತಿಯಿಂದ ಸೋಮವಾರರಂದು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸಲಾಯಿತು..
ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ ಮಾತನಾಡಿ ಇಂದಿರಾಬಾಯಿ ಭವನಸಿಂಗ್ ಹಜೇರಿ ಚಿಕ್ಕವಳಿದ್ದಾಗಿನಿಂದಲೂ ಶಿಕ್ಷಣದ ಮೇಲಿನ ತನ್ನ ಆಸಕ್ತಿ ಹೆಚ್ಚಿಸಿಕೊಳ್ಳುತ್ತಾ ಬಂದವಳಾಗಿದ್ದಳು ಅವಳ ಓದಿನೊಂದಿಗೆ ಸಾಧಸಬೇಕೆಂಬ ಛಲ ದೇಶದ ಅತ್ಯುನ್ನತ ಪರಿಕ್ಷೆ ಜೆಇಇಯಲ್ಲಿ ದೇಶಕ್ಕೆ ೨೨೭ನೇ ರ್‍ಯಾಂಕ್ ಪಡೆಯುವದರೊಂದಿಗೆ ಹೆತ್ತವರ ಮತ್ತು ಕಲಿಸಿದ ಶಿಕ್ಷಣ ಸಂಸ್ಥೆಯ ಜೊತೆಗೆ ರಜಪೂತ ಸಮಾಜದ ಹೆಸರನ್ನು ಬೆಳಗಿಸಿದ್ದಾಳೆ ಅವರ ಈ ಸಾಧನೆ ಮುಂದುವರೆಯಲಿ ಮತ್ತು ಅವಳ ಛಲ ರಾಜ್ಯಕ್ಕೆ ಒಳ್ಳೆಯ ಕೊಡುಗೆಯಾಗಿ ಬೆಳೆಯಲಿ ಎಂದರು.
      ಇನ್ನೋರ್ವ ರಜಪೂತ ಸಮಾಜದ ಉಪಾಧ್ಯಕ್ಷ ರತನಸಿಂಗ್ ಕೊಕಟನೂರ ಮಾತನಾಡಿ ಇಂದಿರಾಬಾಯಿ ಹಜೇರಿ ಸಾಧನೆಯು ಯಾರ ಸ್ವತ್ತಲ್ಲಾವೆಂಬುದನ್ನು ತನ್ನ ಕಲಿಕೆಯ ಶಿಕ್ಷಣದ ಮೂಲಕ ತೋರಿಸಿಕೊಟ್ಟಿದ್ದಾಳೆ ಮತ್ತು ಇತರರಿಗೆ ಮಾದರಿಯಾಗಿದ್ದಾಳೆ ಜೆಇಇ ಅತ್ಯುನ್ನತ ಪರಿಕ್ಷೆಯಲ್ಲಿ ಉತ್ತಮ ಸಾಧನೆ ತೋರಿ ಮಾದರಿಯ ಹಾದಿಯಲ್ಲಿ ಸಾಗಿರುವ ಇಂದಿರಾಬಾಯಿಯ ಕನಸ್ಸು ನನಸ್ಸಾಗಲಿ ಎಂದು ಹಾರೈಸಿದರು.
      ಈ ಸಮಯದಲ್ಲಿ ರಜಪೂತ ಸಮಾಜದ ಮುಖಂಡರುಗಳಾದ ಭರತಸಿಂಗ್ ವಿಜಾಪೂರ, ರಘುರಾಮಸಿಂಗ್ ಹಜೇರಿ, ವಿಜಯಸಿಂಗ್ ಹಜೇರಿ, ಜಯಸಿಂಗ್ ಮೂಲಿಮನಿ, ವಿಠ್ಠಲಸಿಂಗ್ ಹಜೇರಿ(ಬೇಕಿನಾಳ), ರಮೇಶ ಗೌಡಗೇರಿ, ನಾರಾಯಣಸಿಂಗ್ ಕೊಕಟನೂರ, ಅರುಣಸಿಂಗ್ ಧಡೇದ, ಸುರೇಶ ಹಜೇರಿ ಮೊದಲಾದವರು ಉಪಸ್ಥಿತರಿದ್ದರು.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೆಇಇಯಲ್ಲಿ ಸಾಧನೆಗೈದ ಇಂದಿರಾಬಾಯಿಗೆ ಸನ್ಮಾನಪಂ. ಪಂಚಾಕ್ಷರ ಗವಾಯಿ ಪಂ. ಪುಟ್ಟರಾಜ ಗವಾಯಿಗಳ ಹಾಗೂ ಎಲಿವಾಳ ಸಿದ್ದಯ್ಯ ಸ್ವಾಮಿಗಳ 19ನೇ ವರ್ಷದ ಜಾತ್ರಾ ಮಹೋತ್ಸವ. ಟ್ರೀ ಪಾರ್ಕನ್ನು ಅತ್ಯುತ್ತಮವಾದ ಹೈಟೇಕ್ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು : ಸಿ.ಎಸ್.ನಾಡಗೌಡಕೆ.ಎಲ್.ಇ. ಸಂಸ್ಥೆಯ ನೂತನ ಕಾರ್ಯದರ್ಶಿಯಾಗಿ ಡಾ. ಸುನೀಲ ಜಲಾಲಪುರೆ ಸರ್ವಾನುಮತದಿಂದ ಆಯ್ಕೆಅಕ್ರಮ ಕಟ್ಟಡ ತೆರವು ವಿಚಾರ : ಮುಂದುವರಿದ ಧರಣಿ ಹೋರಾಟಸಮಗ್ರ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷರಣೆ : ಶೇ. ೬೯.೯೭ ರಷ್ಟು ಫಾರ್‍ಮಗಳ ಹಂಚಿಕೆಪ್ರವಾಸಿ ತಾಣದ ಫುಡ್ ಪ್ಲಾಜಾ" ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಶಾಸಕ ಗವಿಯಪ್ಪ.ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರ ಪೋಟೋ  ಬ್ಯಾನರ್ ನಲ್ಲಿ ಇಲ್ಲ.ಶಾಸಕ ಗವಿಯಪ್ಪ ಅವರಿ ಎಚ್ಚರಿಕೆ ನೀಡಿದ ಮಾದಿಗ ಸಮುದಾಯ.ಉಚಿತ ಫ್ಯಾಷನ್ ಡಿಸೈನಿಂಗ್ ಮತ್ತು ಉದ್ಯಮಶೀಲತಾ ತರಬೇತಿ: ಅರ್ಜಿ ಆಹ್ವಾನಹಾಸನ ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ  ಅಕ್ರಮ ಬೀಜ ದಾಸ್ತಾನು ಜಪ್ತಿ