LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಶಾಲಾ ಸಂಸತ್ತ ರಚನೆ

ತಾಳಿಕೋಟೆ : -   ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸನ್ ೨೦೨೬ ೨೭ ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಸೋಮವಾರ ಯಶಸ್ವಿಯಾಗಿ ಜರಗಿತು.

ವಿದ್ಯಾರ್ಥಿಗಳಲ್ಲಿ ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಚುನಾವಣೆಯನ್ನು ತಂತ್ರಜ್ಞಾನ ಬಳಸಿ ಸುಗಮವಾಗಿ ನಡೆಸಲಾಯಿತು. ಮತದಾನ ಜಾಗೃತಿಯ ಕುರಿತು ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ವಿದ್ಯಾರ್ಥಿಗಳಿಗೆ ಮನ ಮುಟ್ಟವ ಹಾಗೆ ತಿಳಿಸಿದರು.

ಮತಗಟ್ಟೆ ಅಧಿಕಾರಿಯಾಗಿ ಶಾಲೆಯ ಮುಖ್ಯಗುರುಗಳಾದ ಸಂತೋಷ್ ಪವಾರ ಕಾರ್ಯನಿರ್ವಹಿಸಿದರು. ಸಹಾಯಕರಾಗಿ ರಾಜು ಜವಳಗೇರಿ, ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ಮತ್ತು ಶಾಲೆಯ ಸರ್ವ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸಿದರು.

ಮತದಾನದ ನಂತರ ನಡೆದ ಮತ ಎಣಿಕೆ ಕಾರ್ಯವನ್ನು ನೆರವೇರಿಸಿ ಚುನಾವಣೆಯಲ್ಲಿ ಕನ್ನಡ ಮಾಧ್ಯಮದಲ್ಲಿ, ನಾಲ್ಕನೇ ತರಗತಿ ಪ್ರತಿನಿಧಿಯಾಗಿ ಶ್ರೇಯಾ ಕುಂಬಾರ, ೫ನೇ ತರಗತಿಗೆ ಸಮರ್ಥ ಚಳೇಕಾರ, ೬ನೇ ತರಗತಿಗೆ ಅಭಿಷೇಕ್ ಚಿನಗುಡಿ, ೭ನೇ ತರಗತಿಯಲ್ಲಿ ಸಮರ್ಥ ಬನ್ನಿ, ೮ನೇ ತರಗತಿಗೆ ನಿರೀಕ್ಷಿತ ಚಿನಗುಡಿ, ೯ನೇ ತರಗತಿ ವಿಭಾಗದಲ್ಲಿ ಅ ವಿಭಾಗದಲ್ಲಿ  ಸೃಷ್ಟಿ ಬಿರಾದಾರ, ಬಿ ವಿಭಾಗದಲ್ಲಿ ಶಿವಕುಮಾರ ಪೂಜಾರಿ, ೧೦ನೇ ತರಗತಿ ಅ ವಿಭಾಗದಲ್ಲಿ ಯಶ್‌ರಾಜ್ ರಾಥೋಡ್, ಬಿ ವಿಭಾಗದಲ್ಲಿ ಚನ್ನಬಸವ ಸಜ್ಜನ್ ಆಯ್ಕೆಯಾದರು. ಆಂಗ್ಲ ಮಾಧ್ಯಮ ವಿಭಾಗದಲ್ಲಿ ನಾಲ್ಕನೇ ತರಗತಿಯಲ್ಲಿ ನಾನಾಗೌಡ ದೇಸಾಯಿ, ೫ನೇ ತರಗತಿಯಲ್ಲಿ ಹುಜೆರ್ ಹಚ್ಚಾಳ, ೬ನೇ ತರಗತಿಯಲ್ಲಿ, ಸಂಗೀತ ದುಮಗೊಂಡಿ, ನಾರಾಯಣ ಸಿಂಗ್ ದೇವಿ, ೭ನೇ ತರಗತಿಯಲ್ಲಿ ಸಮರ್ಥ್ ಹೂಗಾರ, ೮ನೇ ತರಗತಿಯಲ್ಲಿ ಚನ್ನಬಸವ ಚಣಗಿ, ೯ನೇ ತರಗತಿ ಅ ವಿಭಾಗದಲ್ಲಿ ಆರಾಧ್ಯ ಗೋನಾಳ, ಬಿ ವಿಭಾಗದಲ್ಲಿ ಆದಿನಾಥ ಜೋಶಿ, ೧೦ನೇ ತರಗತಿ ಶ್ರೇಯಾ ಕದಂ, ಬಿ ವಿಭಾಗದಲ್ಲಿ ಸಚಿನ್ ಬಾಗೇವಾಡಿ ವಿದ್ಯಾರ್ಥಿಗಳು ಆಯ್ಕೆಯಾದರು.

ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ ಚುನಾವಣೆಯ ಪ್ರಮಾಣ ವಚನವನ್ನು ಬೋಧಿಸಲಾಯಿತು. ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಲಾಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 *ಕಾರ್ಯಕ್ರಮದಲ್ಲಿ ಡಾ. ರಾಮಕೃಷ್ಣ ರೆಡ್ಡಿಯವರಿಗೆ ಗೌರವ, ಸನ್ಮಾನ,,* 15 ವರ್ಷಗಳ ಬಳಿಕ ಮಾರಿಹಾಳದಲ್ಲಿ ಮಹಾಲಕ್ಷ್ಮಿ ಜಾತ್ರೆ: ಜಾತ್ರೆಯ ಸಿದ್ಧತೆ, ಭಕ್ತರ ಅನುಕೂಲಕ್ಕೆ ಅಗತ್ಯ ವ್ಯವಸ್ಥೆ ಕುರಿತು ಲಕ್ಷ್ಮೀ ಹೆಬ್ಬಾಳಕರ್ ಸಭೆನಾಳೆ ಶ್ರೀ ದ್ಯಾಮವ್ವ, ದುರಗಮ್ಮ ದೇವಿಯರ ಅದ್ದೂರಿ ಮೇರವಣಿಗೆ: ರಾಜು ಖಾನಪ್ಪನವರಮಾಧ್ಯಮ ಮಿತ್ರರು ಕ್ರೀಡೆಯಲ್ಲಿ ಭಾಗವಹಿಸಿದ್ದು ಉತ್ತಮ ಬೆಳವಣಿಗೆಕೊಪ್ಪಳ ತಾ.ಪಂ. ಇಒ ಎತ್ತಂಗಡಿಗೆ ಆಗ್ರಹಿಸಿ ಆ. 31ಕ್ಕೆ ಬೃಹತ್ ಪ್ರತಿಭಟನೆಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳಸಪ್ಟೆಂಬರ್ 23 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ: ಜಿಲ್ಲೆಯಲ್ಲಿ 13,53,946 ಮತದಾರರ ಕರಡು ಪಟ್ಟಿ ಪ್ರಕಟ30ರಂದು  ಶ್ರೀ ಬಾಳುಮಾಮಾ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿತ್ಯ ನೇಮ ಉಪಾಷಣೆಯಿಂದ ನೆಮ್ಮದಿ ಜೀವನ.....ಪ್ರಭುಜಿ   ಮಹಾರಾಜ.ಮಳೆ ದೇವರು ಕೊಡುತ್ತಾನೆ, ಅದರ ಹಂಚಿಕೆ ಸರ್ಕಾರ ಮಾಡಬೇಕು  : ಮಹಾಂತೇಶ ದೊಡ್ಡಗೌಡರ