ತಾಳಿಕೋಟೆ : - ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸನ್ ೨೦೨೬ ೨೭ ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಸೋಮವಾರ ಯಶಸ್ವಿಯಾಗಿ ಜರಗಿತು.
ವಿದ್ಯಾರ್ಥಿಗಳಲ್ಲಿ ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಚುನಾವಣೆಯನ್ನು ತಂತ್ರಜ್ಞಾನ ಬಳಸಿ ಸುಗಮವಾಗಿ ನಡೆಸಲಾಯಿತು. ಮತದಾನ ಜಾಗೃತಿಯ ಕುರಿತು ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ವಿದ್ಯಾರ್ಥಿಗಳಿಗೆ ಮನ ಮುಟ್ಟವ ಹಾಗೆ ತಿಳಿಸಿದರು.
ಮತಗಟ್ಟೆ ಅಧಿಕಾರಿಯಾಗಿ ಶಾಲೆಯ ಮುಖ್ಯಗುರುಗಳಾದ ಸಂತೋಷ್ ಪವಾರ ಕಾರ್ಯನಿರ್ವಹಿಸಿದರು. ಸಹಾಯಕರಾಗಿ ರಾಜು ಜವಳಗೇರಿ, ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ಮತ್ತು ಶಾಲೆಯ ಸರ್ವ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸಿದರು.
ಮತದಾನದ ನಂತರ ನಡೆದ ಮತ ಎಣಿಕೆ ಕಾರ್ಯವನ್ನು ನೆರವೇರಿಸಿ ಚುನಾವಣೆಯಲ್ಲಿ ಕನ್ನಡ ಮಾಧ್ಯಮದಲ್ಲಿ, ನಾಲ್ಕನೇ ತರಗತಿ ಪ್ರತಿನಿಧಿಯಾಗಿ ಶ್ರೇಯಾ ಕುಂಬಾರ, ೫ನೇ ತರಗತಿಗೆ ಸಮರ್ಥ ಚಳೇಕಾರ, ೬ನೇ ತರಗತಿಗೆ ಅಭಿಷೇಕ್ ಚಿನಗುಡಿ, ೭ನೇ ತರಗತಿಯಲ್ಲಿ ಸಮರ್ಥ ಬನ್ನಿ, ೮ನೇ ತರಗತಿಗೆ ನಿರೀಕ್ಷಿತ ಚಿನಗುಡಿ, ೯ನೇ ತರಗತಿ ವಿಭಾಗದಲ್ಲಿ ಅ ವಿಭಾಗದಲ್ಲಿ ಸೃಷ್ಟಿ ಬಿರಾದಾರ, ಬಿ ವಿಭಾಗದಲ್ಲಿ ಶಿವಕುಮಾರ ಪೂಜಾರಿ, ೧೦ನೇ ತರಗತಿ ಅ ವಿಭಾಗದಲ್ಲಿ ಯಶ್ರಾಜ್ ರಾಥೋಡ್, ಬಿ ವಿಭಾಗದಲ್ಲಿ ಚನ್ನಬಸವ ಸಜ್ಜನ್ ಆಯ್ಕೆಯಾದರು. ಆಂಗ್ಲ ಮಾಧ್ಯಮ ವಿಭಾಗದಲ್ಲಿ ನಾಲ್ಕನೇ ತರಗತಿಯಲ್ಲಿ ನಾನಾಗೌಡ ದೇಸಾಯಿ, ೫ನೇ ತರಗತಿಯಲ್ಲಿ ಹುಜೆರ್ ಹಚ್ಚಾಳ, ೬ನೇ ತರಗತಿಯಲ್ಲಿ, ಸಂಗೀತ ದುಮಗೊಂಡಿ, ನಾರಾಯಣ ಸಿಂಗ್ ದೇವಿ, ೭ನೇ ತರಗತಿಯಲ್ಲಿ ಸಮರ್ಥ್ ಹೂಗಾರ, ೮ನೇ ತರಗತಿಯಲ್ಲಿ ಚನ್ನಬಸವ ಚಣಗಿ, ೯ನೇ ತರಗತಿ ಅ ವಿಭಾಗದಲ್ಲಿ ಆರಾಧ್ಯ ಗೋನಾಳ, ಬಿ ವಿಭಾಗದಲ್ಲಿ ಆದಿನಾಥ ಜೋಶಿ, ೧೦ನೇ ತರಗತಿ ಶ್ರೇಯಾ ಕದಂ, ಬಿ ವಿಭಾಗದಲ್ಲಿ ಸಚಿನ್ ಬಾಗೇವಾಡಿ ವಿದ್ಯಾರ್ಥಿಗಳು ಆಯ್ಕೆಯಾದರು.
ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ ಚುನಾವಣೆಯ ಪ್ರಮಾಣ ವಚನವನ್ನು ಬೋಧಿಸಲಾಯಿತು. ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಲಾಯಿತು.
