Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇವಸ್ಥಾನಗಳನ್ನು ಮರು ನಿರ್ಮಿಸಿ ಹಿಂದೂ ಧರ್ಮ ರಕ್ಷಿಸಿದ ರಾಜಮಾತೆ ಹೊಳಕರ : ಶ್ರೀಮಂತ ಮಹಾರಾಜ್ 


ಮಹಾಲಿಂಗಪುರ : ಅಖಂಡ ಭಾರತ ದೇಶದ ದೇವಸ್ಥಾನಗಳನ್ನೂ ಹಾಳು ಮಾಡಿದ್ದರು ಅವುಗಳನ್ನು ೧೧೧ ವರ್ಷಗಳ ನಂತರ ೩೫೦೦ ಕ್ಕೂ ಹೆಚ್ಚು ದೇವಸ್ಥಾನಗಳನ್ನು ಪುನಃ ನಿರ್ಮಾಣ ಮಾಡಿದ್ದು ರಾಜಮಾತೇ ಅಹಲ್ಯಬಾಯಿ ಹೊಳಕರ ಎಂದು ಮಾರಾಪುರದ ಶ್ರೀಮಂತ ಮಹಾರಾಜರು ಹೇಳಿದರು.
 ನಗರದ ಕೆಂಗೇರಿ ಮಡ್ಡಿಯಲ್ಲಿರುವ ಬೀರಸಿದ್ದೇಶ್ವರ ದೇವಸ್ಥಾನದ ನಡೆದ ಅಹಲ್ಯಬಾಯಿ ಹೊಳಕರ ಅವರ ೩೦೧ ನೇ ಜಯಂತಿ ಕಾರ್ಯಕ್ರಮವನ್ನು ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಸಿ ಮಾತನಾಡಿ ಇಂದು ನಾವು ಸುಂದರ್ ಕಾಶಿ ವಿಶ್ವನಾಥ ದೇವಾಲಯವನ್ನು ಭಾರತದ ದೇವಾಲಯಗಳ ಹೃದಯ ಮಂದಿರ ಎಂದು ಕರೆಯುತ್ತೇವೆ ಅದು ಹಿಂದೆ ಪರಕಿಯರ ಆಡಳಿತಕ್ಕೆ ಸಿಕ್ಕು ಹಾಳಾಗಿತ್ತು. ಅದನ್ನು ಪುನಃ ಜಿರ್ನೋದ್ಧಾರ ಮಾಡಿ ಭಾರತೀಯರ ಹೃದಯ ಗೆದ್ದ ಧೀಮಂತ ನಾಯಕಿ ರಾಜಮಾತೇ ಅಹಲ್ಯಬಾಯಿ ಹೊಳಕರ. ಅವರನ್ನು ಪುಣ್ಯಶ್ಲೋಕ ಎಂದು ಕರೆಯುತ್ತಾರೆ.ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ದೇವಸ್ಥಾನಗಳ ಜಿರ್ನೋದ್ದಾರಕ್ಕೆ ಧನ ಸಹಾಯ ಮಾಡಿ ದೇವರ ಪ್ರಿತಿಯ್ ಲೋಕಮಾತೆಯಾಗಿ ಭಾರತೀಯರ ಹೃದಯ ಸಾಮ್ರಾಜ್ಞಯಾಗಿ, ದಂತ ಕತೆಯಾಗಿ ಜನರ ಮನಸ್ಸಿನಲ್ಲಿ ಸ್ಥಿರಸ್ತಾಯಿಯಾಗಿದ್ದಾರೆ ಎಂದರು.
ನಂತರ ಮಾತನಾಡಿದ ಯುವ ಆಧ್ಯಾತ್ಮ ಚಿಂತಕರಾದ ಮಹೇಶ ಇಟಕ್ಕನವರ ಇವರ ಹೆಸರಿನಲ್ಲಿ ಇಂದಿಗೂ ಇಂದೋರನಲ್ಲಿರುವ ವಿಶ್ವವಿದ್ಯಾಲಯಕ್ಕೆ ಮತ್ತು ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಟ್ಟು ಗೌರವಿಸಲಾಗಿದೆ. ಸೋಲಾಪುರದ ಪುಣ್ಯಶ್ಲೋಕ ಅಹಲ್ಯದೇವಿ ಹೊಳಕರ ವಿಶ್ವವಿದ್ಯಾಲಯ ಎಂದು ಹೆಸರಿಡಲಾಗಿದೆ. ಅವರು ಜಿರ್ನೋದ್ದಾರ ಮಾಡಿದ ದೇವಸ್ಥಾಗಳಲ್ಲಿ ಅವರ ಪ್ರತಿಮೆಗಳು ಇವೆ ಎಂದರು. 
ನಂತರ ಮಾತನಾಡಿದ ಮಾಧವಾನಂದ ಟ್ರಸ್ಟ್ ಅಧ್ಯಕ್ಷರಾದ ಡಾ. ಸಂಗಮೇಶ ಹಿಡಕಲ್ ಮರಾಠಾ ಸಾಮ್ರಾಜ್ಯದ ಮಾಳವ ಪ್ರಾಂತ್ಯದ ದಕ್ಷ ಆಡಳಿತಗಾರ್ತಿಯಾಗಿ ರಾಜ್ಯಭಾರ ಮಾಡಿ ಅನೇಕ ನದಿ ಘಾಟಗಳು ಧರ್ಮಶಾಲೆಗಳನ್ನು ನಿರ್ಮಿಸಿದರು ಬಾಲ್ಯ ವಿವಾಹ ಮತ್ತು ಸತಿ ಸಹಗಮನ ಪದ್ಧತಿಯಂತಹ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿದರು.
ಬ್ರಿಟಿಷ ಇತಿಹಾಸಕಾರ ಜಾನ ಮಾಲ್ಕಮ್ ಅವರು ಇವರ ಆಡಳಿತವನ್ನು ಅತ್ಯಂತ ದಕ್ಷ ಆದರ್ಶಪ್ರಾಯ ಪರಿಶುದ್ಧ ಆಡಳಿತಗಾರ್ತಿ ಎಂದು ಬರೆದಿದ್ದು ಅವರ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
ಈ ಸಂಧರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಶೇಖರ ಅಂಗಡಿ,, ಮುಖ್ಯಧಿಕಾರಿ ನಾಮದೇವ ಲಮಾಣಿ, ಮಹಾಲಿಂಗಪ್ಪ ಲಾತುರ, ಶ್ರೀಶೈಲ್ ಕಾರಜೋಳ ಮಾತನಾಡಿದರು ಮಹಾಲಿಂಗಪ್ಪ ಜಕ್ಕಣ್ಣವರ, ಸಿದ್ದರಾಮ ಯರಗಟ್ಟಿ, ಮಲ್ಲಪ್ಪ ಸಿಂಗಾಡಿ, ಸದಾಶಿವ ಕಂಬಳಿ, ಯಲ್ಲಣ್ಣಗೌಡ ಪಾಟೀಲ, ಮುಖಂಡರಾದ ಗಂಗಾಧರ ಮೇಟಿ, ಪರಶುರಾಮ್ ಬಂಡಿ, ಯಲ್ಲಪ್ಪ ಪಟ್ಟಣಕೋಡಿ, ಆನಂದ ಸನದಿ ಲಕ್ಷ್ಮಣ ಪಟ್ಟಣಕೋಡಿ, ಕರೆಪ್ಪ ಹುಣಶೀಕಟ್ಟಿ, ಅರ್ಜುನ್ ಮೇಟಿ, ಕರೆಪ್ಪ ಮೇಟಿ, ಪರಶು ಕೊಣ್ಣೂರ, ಲಕ್ಕಪ್ಪ ಲಾತುರ, ಮಲ್ಲಪ್ಪ ಲಾತುರ, ಅನಿಲ್ ದೇಸಾಯಿ, ಮಹದೇವ್ ಕೋಳಿಗುಡ್ಡ, ಬಸು ಓಲೇಕಾರ, ಪ್ರಭು ಪೂಜೇರಿ, ಬಸು ಬಂಡಿ, ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು ಪತ್ರಕರ್ತ ಲಕ್ಷ್ಮಣ ಕಿಶೋರ್ ನಿರೂಪಿಸಿ ವಂದಿಸಿದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜುಲೈ ೧೧ ರಂದು ರಾಮದುರ್ಗ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ಅಕ್ರಮ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕರವೇ ಧರಣಿ ಮಳೆರಾಯನ ಅನುಗ್ರಹಕ್ಕಾಗಿ ಪ್ರಾರ್ಥಿಸಿದ ಗ್ರಾಮಸ್ಥರು ಹಡಪದ ಅಪ್ಪಣ್ಣ ಸಮುದಾಯ ಭವನ ಅಭಿವೃದ್ಧಿಗೆ ಚಾಲನೆ.ಪ್ರತಿಯೊಬ್ಬರೂ ಎಸ್‌ಐಆರ್ ಮಾಹಿತಿಗೆ ಸ್ಪಂದಿಸಿ: ಆರ್ ಬಿ ತಿಮ್ಮಾಪೂರ ಮಹಿಳೆಯರ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ಶಾಸಕ ಆಸೀಫ್ ಸೇಠ್ವೈದ್ಯರು ರೋಗಿಗಳನ್ನು ದೇವರಂತೆ ಕಾಣಬೇಕು: ಡಾ. ಜಿ.ಎಸ್. ಗಲಗಲಿ  ಇಂದಿನ ತಂತ್ರಜ್ಞಾನ ಯುಗದಲ್ಲಿ ಜೀವನಕ್ಕೆ ಅಗತ್ಯ : ಜಿ.ಬಿ.ವಡವಡಗಿದೇವಸ್ಥಾನಗಳನ್ನು ಮರು ನಿರ್ಮಿಸಿ ಹಿಂದೂ ಧರ್ಮ ರಕ್ಷಿಸಿದ ರಾಜಮಾತೆ ಹೊಳಕರ : ಶ್ರೀಮಂತ ಮಹಾರಾಜ್ ಪುಸ್ತಕವಿತರಣೆಯಿಂದ ಬಡ ವಿದ್ಯಾರ್ಥಿಗಳ ಓದಿಗೆ ಪ್ರೇರಣೆ- ಈರಣ್ಣ ಹಲಗತ್ತಿ