ಮಹಾಲಿಂಗಪುರ ; ಸ್ಥಳೀಯ ಡಬಲ್ ರಸ್ತೆಯಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅವಿರತ ಪೌಂಡೇಶನನವರು ಸುಮಾರು ೧೩೧ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ನೋಟಬುಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಈರಣ್ಣ ಹಲಗತ್ತಿ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಅತಿ ಕಡುಬಡತನದವರಾಗಿರುತ್ತಾರೆ. ಇಂಥ ಮಕ್ಕಳ ಓದಿಗೆ ಯಾವುದೇ ತೊಂದರೆಯಾಗದಂತೆ ಪ್ರತಿವರ್ಷ ಇಂತ ಸಂಘಟನೆಗಳು ಯಾವುದಾದರೋಂದು ತೀರಿಯಲ್ಲಿ ಅವರಿಗೆ ಪುಸ್ತಕ, ನೋಟಬುಕ್, ಪೆನ್, ಡ್ರೆಸ್, ಶೂಸ್ ಇನ್ನೂ ಅನೇಕ ವಸ್ತುಗಳನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳ ಓದಿಗೆ ಹೆಚ್ಚಿನ ಸಹಕಾರ ಕೊಡುತ್ತಿರುವ ಇಂಥ ಸಂಸ್ಥೆಗಳು ಇರುವುದರಿಂದಲೇ ಬಡಮಕ್ಕಳು ಓದಿ ಮುಂದೆ ಬರಲು ಸಾಧ್ಯವಾಗುತ್ತಿದೆ. ಕಾರಣ ಸಂಘ, ಸಂಸ್ಥೆಯಾವುದಾದರೇನು ವಿದ್ಯೆ ಕಲಿಯುವುದಕ್ಕಾಗಿ ಸಹಾಯ ಮಾಡುವ ಮನೋಭಾವನೆ ಇದೆಯಲ್ಲ ಇದು ದೊಡ್ಡದು ಇಂಥ ಸಂಘ ಂಸ್ಥೆಗಳು ಎಲ್ಲ ಊರು ಗ್ರಾಮಗಳಲ್ಲಿಯು ಬೆಳೆಬೇಕು ಅಂದಾಗ ಮಾತ್ರ ಬಡಮಕ್ಕಳ ಹೆಚ್ಚು ಹೆಚ್ಚು ಓದಿ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅವಿರತ ಪೌಂಡೇಶನ ದಾನಿಗಳಾದ ಮಹೇಶ ಅಮ್ಮಣಗಿ, ಪ್ರವೀಣ ನಡಕಟ್ನಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಾಹಿರಾ ಪೆಂಡಾರಿ, ಶ್ರೀಶೈಲ ದಾವಲತ್ತಿ. ಪ್ರಾಚಾರ್ಯ ಶ್ರೀಮತಿ ತಂಬೂರಿ ಶಿಕ್ಷಕರಾದ ಎಂ.ಆರ್. ಚಿತ್ರಗಾರ, ಲತಾ ಪೂಜೇರಿ, ಸವಿತಾ ಗದಗ, ಗುರುಲಿಂಗ ಪೂಜೇರಿ ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದರು.
ಫೋಟೊ; ೩ ಎಂ.ಎಲ್.ಪಿ ೨
ಮಹಾಲಿಂಗಪುರ ; ಸ್ಥಳೀಯ ಸರ್ಕಾರಿ ಕನ್ನಡ ಮಾದ್ಯಮ ಪ್ರಾಥಮಿಕ ಶಾಲೆಯಲ್ಲಿ ನಡೆದ ಪುಸ್ತಕ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.
