ಹೊಸಪೇಟೆ : ನಗರದಲ್ಲಿ ನ ಎಲ್ಲ ರಸ್ತೆಯ ವೃತ್ತ ಗಳು ಸೌಂದರ್ಯ ಕ್ಕೆ ಸಾಕ್ಷಿಯಾಗಲಿವೆ. ಸಾರ್ವಜನಿಕ ರು ,ರಸ್ತೆಯ ಮೂಲೆಗಳಲ್ಲಿ ಹಾಗು ಮುಖ್ಯ ವೃತ್ತ ಗಳಲ್ಲಿ ಬೇಕಾಬಿಟ್ಟಿ ಕಸವನ್ನು ಬೀಸಾಡುವುದರಿಂದ , ಅಲ್ಲದೆ ಮೂರ್ತ ವಿಸರ್ಜನೆ ಮಾಡುವುದರಿಂದ ನಗರದ ಸೌಂದರ್ಯ ಹಾಳಾಗುವುದರ ಜೊತೆಗೆ ನೈರ್ಮಲ್ಯ ಹೆಚ್ಚಿ ಅನಾರೋಗ್ಯಕ್ಕೆ ಕಾರಣ ವಾಗುವುದನ್ನು ತಡಗಟ್ಟಲು ,ಹೊಸಪೇಟೆ ನಗರಸಭೆ ಪೌರಾಯುಕ್ತ" ಶಿವಕುಮಾರ್ " ನೂತನ ವಿಧಾನವನ್ನು ಅಳವಡಿಸಿ ಕೊಂಡಿದ್ದಾರೆ ಎನ್ನಬಹುದು.
ನಗರದ ಬಸ್ ನಿಲ್ದಾಣದಿಂದ ಹೊರ ಬಂದರೆ ,ಪೈ ಹೊಟೆಲ್ ಮುಂಭಾಗ ಹಾಗು ಪುನಿತ್ ರಾಜಕುಮಾರ್ ವೃತ್ತ ದಿಂದ ರೈಲ್ವೆ ರಸ್ತೆಯಲ್ಲಿ ಕಸದಿಂದ ರಸ ಮಾಡಿದ್ದಾರೆ. ಅವರು ನಿರುಪಯುಕ್ತ ಲಾರಿ ಹಾಗು ಜೀಪ್ ಟಯರ್ ಗಳನ್ನು ಅಲಂಕರಿಸಿ, ಮಿಕ್ಕಿ ಮೌಸ್, ಗಡಿಯಾರ, ಹಾಗು ಹೆಬ್ಬಾವು ಗಳನ್ನು ಚಿತ್ರೀಕರಿ ಸಿದ್ದಾರೆ.ಇದರಿಂದ ನಗರಕ್ಕೆ ಬರುವ ವಿದೇಶಿ ಹಾಗು ಸ್ವದೇಶಿ ಜನರಿಗೆ ರಸ್ತೆಗಳು ಸುಂದರವಾಗಿ ಕಾಣುವುದಲ್ಲದೆ, ಹೊಸಪೇಟೆ ನಗರ ಜನರ ಮೆಚ್ಚುಗೆಗೆ ಪಾತ್ರವಾಗಲಿದೆ .
