ರನ್ನ ಬೆಳಗಲಿ: ಜು.೨೯., ಪಟ್ಟಣದ ಶ್ರೀ ಬಂದ ಲಕ್ಷ್ಮಿ ದೇವಸ್ಥಾನದ. ಕವಿ ಚಕ್ರವರ್ತಿ ರನ್ನ ಸಾಂಸ್ಕೃತಿಕ ಭವನದಲ್ಲಿ. ಬುಧವಾರ ದಂದು ಶ್ರೀ ಗುರು ಮಹಾಲಿಂಗೇಶ್ವರ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯದ. ಪ್ರಥಮ ವ?ದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ.ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭ ಜರಗಿತು.
ಮುಖ್ಯ ಅತಿಥಿಗಳಾದ ಎಸ್ ಬಿ ಮಾಟೋಳಿ ನಿವೃತ್ತ ಪ್ರಾಂಶುಪಾಲರು. ಶ್ರೀ ತಮ್ಮನಪ್ಪ ಚಿಕ್ಕೋಡಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ಬನಹಟ್ಟಿ. ಮಾತನಾಡಿ ನಿರಂತರ ಓದು ಸಾಧನೆಗೆ ಪೂರಕ ವಾಗುತ್ತದೆ.ಚಂದ ಕಣ್ಣು ಕುಕ್ಕಿದರೆ ಗಂಧ ಹೃದಯ ಗೆಲ್ಲುತ್ತದೆ. ಅಂದರೆ ಅಂದವು ಶಾಶ್ವತವಲ್ಲ,ನಿರಂತರ ಶ್ರಮ ಪಟ್ಟು ಪ್ರತಿಭೆಗಳನ್ನು ಬೆಳೆಸಿಕೊಂಡು ಬೆಳೆಯುವ ವಿದ್ಯಾರ್ಥಿ ಸಾಧಕನಾಗುತ್ತಾನೆ. ಅದು ಹೃದಯವನ್ನ ಗೆಲ್ಲುತ್ತದೆ. ಉತ್ತಮವಾಗಿ ಗ್ರಹಿಸುವ, ಓದುವ, ಸಕ್ರಿಯವಾಗಿ ಪಾಲ್ಗೊಂಡು ಸ್ವಯಂ ಅಧ್ಯಾಯನ ಶೀಲನಾಗುವ ವ್ಯಕ್ತಿ ಉತ್ತಮ ವಿದ್ಯಾರ್ಥಿಯಾಗುತ್ತಾನೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಧರಪ್ಪ ಸಾಂಗ್ಲೀಕರ.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ಮಹಾವಿದ್ಯಾಲಯದ ಸಾಧನೆಯು ವ?ದಿಂದ ವ?ಕ್ಕೆ. ಉನ್ನತ ಮಟ್ಟವನ್ನು ತಲುಪುತ್ತಿದೆ. ಕ್ರಿಯಾಶೀಲ ಶಿಕ್ಷಕ ಬಳಗ, ಮೂಲಭೂತ ಸಂಪನ್ಮೂಲಗಳನ್ನು ಪೂರೈಸುವ ಆಡಳಿತ ಮಂಡಳಿ. ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಮೆಟ್ಟಿಲಾಗಿವೆ ಎಂದು ತಿಳಿಸಿ. ಗುರುವೃಂದಕ್ಕೆ ಗುರುಪೂರ್ಣಿಮೆಯ ಶುಭಾಶಯಗಳನ್ನು ಕೋರಿದರು.
ಚೇರ್ಮನ್ನರಾದ ಪಿ ಬಿ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು. ಉಪಾಧ್ಯಕ್ಷರಾದ ಚಿಕ್ಕಪ್ಪ ನಾಯಕ, ಶ್ರೀಮಂತ ಒಂಟಗೋಡಿ,ಕಾಡಯ್ಯ ಗಣಾಚಾರಿ,ಪಾಂಡಪ್ಪ ಪೆಟ್ಲೂರ, ಮುತ್ತಪ್ಪ ಹೊಸಪೇಟಿ,ಎಸ್ ಬಿ ಬಿಪಾಟೀಲ,ಪಿ ಜಿ ಸನ್ನಟ್ಟಿ, ಜಿ ಎ ಧಡೂತಿ ಮತ್ತು ಪ್ರಾಚಾರ್ಯರಾದ ಪರಶುರಾಮ ನಾಯಕ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಎಂ ಪಟ್ಟಣಶೆಟ್ಟಿ ನಿರೂಪಿಸಿದರು.ಎಂ ಎಂ ಗರಗದ ವಂದಿಸಿದರು. ಉಪನ್ಯಾಸಕ ವೃಂದ,ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿ ಬಳಗ ಊರಿನ ಗಣ್ಯರು ಉಪಸ್ಥಿತರಿದ್ದರು.
