ಮುದ್ದೇಬಿಹಾಳ: ತಾಲೂಕಿನ ರಕ್ಕಸಗಿ ಗ್ರಾಮ ಪಂಚಾಯತಿಗೆ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಂಗನಗೌಡ ಬಿರಾದಾರ VB G RAM G ಯೋಜನೆಯಡಿ ಪ್ರಗತಿಯಲ್ಲಿದ್ದ ಕ್ಯಾನಲ್ ಹೂಳು ಎತ್ತುವುದು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ ಯೋಜನೆಯಡಿ ರಕ್ಕಸಗಿ ಗ್ರಾಮ ಪಂಚಾಯತಿಯ ಬಲದಿನ್ನಿ ಹಾಗೂ ಕಾರಕೂರ ಗ್ರಾಮದ ವಿಬಿಜಿ ರಾಮ್ ಜಿ ಯೋಜನೆಯ ಕೂಲಿಕಾರರು ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿದ್ದರು. ಕಾರಕೂರ ಗ್ರಾಮದ ಅಮರೇಶ ಗಾದಿ ಇವರ ಹೊಲದಿಂದ ಬಸಪ್ಪ ಸಂ ಹುದ್ದಾರ ಇವರ ಹೊಲದವೆರೆಗೆ ಕಾಲೂವೆ ಹೂಳು ಎತ್ತುವುದು ಕಾಮಗಾರಿಯಲ್ಲಿ NMR ತೆಗೆದು ಕೆಲಸ ಹಂಚಿಕೆ ಮಾಡಲಾಗಿದೆ.
ಜುಲೈ-1 ರಿಂದ ನರೇಗಾ ಯೋಜನೆ ಬದಲಾಗಿ ವಿಕಸಿತ ಭಾರತ ವಿಬಿಜಿ ರಾಮ್ ಜಿ ಯೋಜನೆ ಜಾರಿಗೆ ಬಂದಿದ್ದು, 100 ದಿನಗಳ ಬದಲಾಗಿ 125 ಮಾನವ ದಿನಗಳನ್ನು ನೀಡಲಾಗಿದೆ. ಅಲ್ಲದೆ ಒಂದು ದಿನದ ಕೂಲಿ ದರ ರೂ. 382 ಹೆಚ್ಚಾಗಿದ್ದು, ಕೂಲಿಕಾರರ ಜೀವನ ನಿರ್ವಹಣೆಗೆ ಆರ್ಥಿಕವಾಗಿ ಸಹಕಾರಿಯಾಗಲಿದೆ ಎಂದು ಇಒ ಅವರು ತಿಳಿಸಿದರು.
ಕೃಷಿ ಹಂಗಾಮ ಹೊರತುಪಡಿಸಿ ಕೂಲಿಕಾರರಿಗೆ ನಿರಂತರ ಕೆಲಸ ನೀಡಲಾಗುವುದು. ರೈತರು ಕೃಷಿಹೊಂಡ, ದನದ ಶೆಡ್, ಮೇಕೆ, ಕುರಿ ಶೆಡ್ ನಿರ್ಮಾಣ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಗ್ರಾ.ಪಂ. ಗರ ಭೇಟಿ ನೀಡಿ ಬೇಡಿಕೆ ಅರ್ಜಿಗಳನ್ನು ಸಲ್ಲಿಸಿ ಎಂದು ಸಲಹೆ ನೀಡಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಎಂ.ವೈ. ಅಮ್ಮನ್ನವರ, ವಿಬಿಜಿ ರಾಮ್ ಜಿ ತಾಲೂಕು ಐಇಸಿ ಸಂಯೋಜಕ ಪರಮೇಶ ಹೊಸಮನಿ, ತಾಂತ್ರಿಕ ಸಹಾಯಕ ಉಮೇಶ ಕಣ್ಣಿ ಇದ್ದರು.
