ಹುನಗುಂದ; ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಇಲಾಖಾವಾರು ಸಚಿವರುಗಳ ಹಾಗೂ ಶಾಸಕರನ್ನೊಳಗೊಂಡು ಹೆಚ್ಚಿನ ನಿವೇಶನ ಸೇರಿದಂತೆ ನಿಮ್ಮೆಲ್ಲ ಬೇಡಿಕೆಗಳನ್ನು ಇಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಬಾಗಲಕೋಟ ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು. ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಯೋಜನಾಭಾದಿತ ಸಂತ್ರಸ್ಥರು ವಿವಿದ ಬೇಡಿಕೆಗಳ ಇಡೇರಿಕೆಗೆ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದಾಗ ಸಂತ್ರಸ್ಥರು ನೀಡಿದ ಮನವಿ ಸವೀಕರಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಅವಿಭಕ್ತ ಕುಟುಂಬ, ಕೃಷಿ ಚಟುವಟಿಕೆಗೆ ಬೇಕಾಗುವ ದನಕರುಗಳನ್ನು ಜೊತೆಗೆ ಇಟ್ಟುಕೊಂಡು ಜೀವನ ನಡೆಸಬೇಕಾಗುತ್ತದೆ. ಈಗಾಗಲೆ ಸಂಸ್ರಸ್ಥರಿಗೆ ನೀಡಿದ ಕೇವಲ ೧ಗುಂಟೆ ಸ್ಥಳದ ಅವೈಜ್ಞಾನಿಕವಾಗಿದೆ. ಇಷ್ಟರಲ್ಲಿ ಬದುಕು ಸಾಗದೆ ಸಂತ್ರಸ್ಥಿಗೆ ಕನಿಷ್ಠ ೪ಗುಂಟೆ ಸ್ಥಳವನ್ನು ಕಲ್ಪಿಸಿ ಜೀವನಕ್ಕೆ ಬೇಕಾಗುವ ವಿವಿದ ಸೌಕರ್ಯಗಳನ್ನು ಒದಗಿಸಬೇಕು. ಈ ಕಾರ್ಯ ಯಾವಾಗೊ ಆಗಬೇಕಿತ್ತು. ಅಧಿಕಾರಿಗಳ ನಿರ್ಲಕ್ಷವೊ ಅಥವಾ ಜನಪ್ರತಿನಿಧಿಗಳ ನಿರ್ಲಕ್ಷವೊ ತಿಳಿಯದು. ಈಗ ಇದರ ಜವಾಬ್ದಾರಿಯನ್ನು ಸರ್ಕಾರವೆ ನಿಭಾಯಿಸಬೇಕು. ರಾಜ್ಯದಲ್ಲಿ ಸಿಎಂ ಬದಲಾವಣೆ ಮತ್ತು ಸಚಿವರುಗಳ ಬದಲಾವಣೆ ಹೀಗೆಲ್ಲ ತೊಂದರೆಯಿಂದ ಈ ಧರಣಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತ ೪೫ದಿನಗಳಿಂದ ಹೋರಾಟ ನಡೆಸುತ್ತಿದೆ. ನಿಮ್ಮ ಪ್ರಾಮಾಣಿಕ ಬೇಡಿಕೆ ಇಡೇರಿಕೆಗೆ ನಿಮ್ಮೊಂದಿಗೆ ನಾನು ಶ್ರನಿಸುತ್ತೇನೆಂದು ಸಂಸದ ಗದ್ದಿಗೌಡರ ಸಂತ್ರಸ್ಥರಿಗೆ ತಿಳಿಸಿದರು. ಬಿಜೆಪಿ ಮುಖಂಡರಾದ ಡಾ. ಮಹಾಂತೇಶ ಕಡಪಟ್ಟಿ, ವೀರೇಶ ಉಂಡೋಡಿ, ವಿಠ್ಠಲ ತಿಮ್ಮಾಪೂರ, ಅಜ್ಜಪ್ಪ ನಾಡಗೌಡ, ಬಸವರಾಜ ಬಡ್ಡಿ, ಮಹಾಂತೇಶ ನಾಡಗೌಡ, ಮಲ್ಲಪ್ಪ ಹಳಪೇಟಿ, ಸಂಗಪ್ಪ ಆನೇಹೊಸುರ, ಹಸನಸಾಬ ಪಿಂಜಾರ, ಶರಣಪ್ಪ ಮುಳ್ಳೂರ, ವೀರಪ್ಪ ಆನೇಹೊಸೂರ, ಬಸವರಾಜ ತಿಮ್ಮಾಪೂರ, ಕಲ್ಲಪ್ಪ ಆನೇಹೊಸೂರ, ಮೀನಾಕ್ಷಿ ಗಂಜಿಹಾಳ, ಶಂಕ್ರವ್ವ ವಾಲೀಕಾರ ಇತರರು ಇದ್ದರು.
