ಬಾಗಲಕೋಟೆ, ಜೂನ್ ೨೯ : ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನದ ಅಂಗವಾಗಿ ಜಿಲ್ಲಾಧಿಕಾರಿ ಸಂಗಪ್ಪ ಅವರು ನವನಗರದಲ್ಲಿರುವ ಮನೆಗಳಿಗೆ ಭೇಟಿ ನೀಡಿ ಎನ್ಯೂಮರೇಷನ್ ಫಾರಂಗಳನ್ನು ಮಂಗಳವಾರ ವಿತರಣೆ ಮಾಡಿದರು.
ನವನಗರದ ಸೆಕ್ಟರ ನಂ.೩೩ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಷ್ಕೃತ ವೆಂಕಣ್ಣ ಸುಗತೇಕರ ಮನೆ ಸೇರಿದಂತೆ ಇತರೆ ಮನೆಗಳಿಗ ಭೇಟಿ ನೀಡಿ ಎನ್ಯೂಮರೇಷನ್ ಫಾರಂಗಳನ್ನು ವಿಗತರಣೆ ಮಾಡಿದರು. ಈ ವೇಳೆ ಮತದಾರರಿಗೆ ಫಾರಂ ಭರ್ತಿ ಮಾಡುವ ವಿಧಾನ, ಅಗತ್ಯ ದಾಖಲೆಗಳ ಕುರಿತು ಮಾಹಿತಿ ನೀಡಿದರು. ನಿಗದಿತ ಅವಧಿಯೊಳಗೆ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸುವಂತೆ ಮನವಿ ಮಾಡಿಕೊಂಡರು.
ಎಸ್.ಐ.ಆರ್ ಅಭಿಯಾನದಲ್ಲಿ ಸಾರ್ವಜನಿಕರು ಸಹಕರಿಸಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶಿಲಿಸಿ ಅಗತ್ಯವಿದ್ದಲ್ಲಿ ತಿದ್ದುಪಡಿ, ಸೇರ್ಪಡೆ ಅಥವಾ ಬದಲಾವಣೆಗಾಗಿ ಸಂಬಂಧಿಸಿದ ಫಾರಂಗಳನ್ನು ಭರ್ತಿ ಮಾಡಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಮನೆ ಮನೆ ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎನ್ಯೂಮರೇಷನ್ ಕಾರ್ಯವೈಖರಿಯನ್ನು ಪರಿಶೀಲಸಿ, ಪ್ರತಿ ಅರ್ಹ ಮತದಾರರಿಗೂ ನಮೂನೆ ತಲುಪುವಂತೆ ಹಾಗೂ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ತಹಶೀಲ್ದಾರ ವಾಸುದೇವ ಸ್ವಾಮಿ, ಚುನಾವಣಾ ಶಿರಸ್ತೇದಾರ ನಾಗರಾಜ ಕುಲಕರ್ಣಿ, ಬೂತ ಮಟ್ಟದ ಅಧಿಕಾರಿ ಸರಸ್ವತಿ ಬಿ.ಎಸ್, ಮೇಲ್ವಿಚಾರಕಿ ಸುರೇಖಾ ರಾಟಿ ಸೇರಿದಂತೆ ಇತರರು ಇದ್ದರು.
