ಇಂಡಿ,ಜೂ,೩೦: ಇಂಡಿ ನಗರ ಸೇರಿದಂತೆ ಇಂಗಳಗಿ ಆಳೂರ, ಲಚ್ಯಾಣ ಎಲ್ಲ ಗ್ರಾಮಗಳಲ್ಲಿ ಸೋಮವಾರರಂದು ಕಾರಹುಣ್ಣಿಮೆಯನ್ನು ಸಂಭ್ರಮ ಸಡಗರದಿಂದ ತಾಲೂಕಿನಾದ್ಯಂತ ಆಚರಿಸಲಾಯಿತು.
ಎತ್ತುಗಳಿಗೆ ಬಣ್ಣ ಬಳಿದು ಬಣ್ಣ ಬಣ್ಣದ ಶೃಂಗರಿಸಿ ನಗರದಲ್ಲಿ ಹಾಗೂ ಗ್ರಾಮಗಳಲ್ಲಿ ಬಾಜಾ ಬಜಂತ್ರಿಯೊಂದಿಗೆ ಗುಂಪು ಗುಂಪಾಗಿ ಎತ್ತುಗಳ ಮೇರವಣಿಗೆ ವಿಜ್ರಂಭಣೆಯಿಂದ ಮಾಡಿದರು. ನಂತರ ಜೊಡು ಎತ್ತುಗಳ ಕಾಲು ಬಂಡಿ ಹಾಗೂ ಬಂಡಿಗಳ ಓಡಿಸುವ ಮೂಲಕ ರೈತರು ಯುವಕರು ಸಂಭ್ರಮಿಸುತ್ತಿರುವುದು ನೋಡುಗರಿಗೆ ಮನರಂಜಿಸಿದರು.
ಸಂಜೆಯಾಗುತ್ತಿದಂತೆ ನಗರ ಹಾಗೂ ಗ್ರಾಮದ ಅಗಸಿಯಿಂದ ಎತ್ತು ಹಾಗೂ ಬಂಡಿ ಓಡಿಸುವ ಮೂಲಕ ಕರಿ ಹರಿದರು. ಇದರಿಂದ ಹಿಂಗಾರು ಮುಂಗಾರು ಬೆಳೆಗಳ ಬಗ್ಗೆ ತಿಳಿದುಕೊಂಡರು. ನಂತರ ಹಿಂಗಾರು ಮುಂಗಾರು ಕಲ್ಲು ಬಂಡಿಯನ್ನು ಎತ್ತಿ ಮಳೆ ಬೆಳೆ ಬಗ್ಗೆ ಅಲೋಕನ ಮಾಡಿದರು. ಬಳಿಕ ಊರ ಅಗಸಿ ಬಳಿ ಭಾರ ಎತ್ತುವ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಯುವಕರು, ರೈತರು ಭಾರವಾದ ಕಲ್ಲು ಎತ್ತಿ ತಮ್ಮ ತಮ್ಮ ಬಲ ಪ್ರದರ್ಶಿಸಿದರು.
ಪೊಟೋ ಕ್ಯಾಪ್ಸನ್ ೨೯ ಇಂಡಿ ೦೧: ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಎತ್ತುಗಳಿಗೆ ಬಣ್ಣ ಬಳಿದು ಬಣ್ಣ ಬಣ್ಣದ ಶೃಂಗರಿಸಿ ನಗರದಲ್ಲಿ ಹಾಗೂ ಗ್ರಾಮಗಳಲ್ಲಿ ಬಾಜಾ ಬಜಂತ್ರಿಯೊಂದಿಗೆ ಗುಂಪು ಗುಂಪಾಗಿ ಎತ್ತುಗಳ ಮೇರವಣಿಗೆ ವಿಜ್ರಂಭಣೆಯಿಂದ ಮಾಡಿದರು.
