ಮೂಡಲಗಿ - ಶ್ರೀ ಸತ್ಯ ಸಾಯಿ ಬಾಲ ವಿಕಾಸ ತರಗತಿಗಳನ್ನು ಮೂಡಲಗಿ ವಲಯದಲ್ಲಿ ಬರುವ ೧ ರಿಂದ ೧೦ನೇ ತರಗತಿಯ ಮಕ್ಕಳಿಗೆ ಬೋಧಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ ಅವರಿಗೆ ಶ್ರೀ ಸತ್ಯಸಾಯಿ ಸಮಿತಿ ಸದಸ್ಯರು ಗುರುವಾರ ಮನವಿ ಸಲ್ಲಿಸಿದರು.
ಮೂಡಲಗಿಯಲಿ ಸತ್ಯಸಾಯಿ ಶಿರಡಿ ಸಾಯಿ ಭವ್ಯವಾದ ಮಂದಿರ ದೇವಸ್ಥಾನ ಕಟ್ಟಲಾಗಿದೆ, ಅದರ ಅಡಿಯಲ್ಲಿ ಸಾಯಿ ಭಕ್ತರು ಆಧ್ಯಾತ್ಮಿಕ, ಶೈಕ್ಷಣಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಅರಳಿಸುವ ಸದುದ್ದೇಶದಿಂದ ಶ್ರೀ ಸತ್ಯ ಸಾಯಿ ಬಾಲ ವಿಕಾಸ ಕಾರ್ಯಕ್ರಮವು ೧೯೬೯ ರಿಂದ ಭಗವಾನರಿಂದ ಅಧಿಕೃತವಾಗಿ ಪ್ರಾರಂಭವಾಗಿದೆ ಮೂಡಲಗಿಯಲ್ಲಿ ಕಳೆದ ೨೦ ವ?ದಿಂದ ಪ್ರಾರಂಭವಾಗಿದೆ. ಪ್ರಪಂಚದಲ್ಲಿ ೧೨೦ ದೇಶಗಳಲ್ಲಿ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಇವೆ. ಸದರಿ ೨೦೨೬-೨೭ ಶೈಕ್ಷಣಿಕ ವ?ದಿಂದ ಕರ್ನಾಟಕ ಸರ್ಕಾರ ತರಗತಿ ೧ ರಿಂದ ೧೦ ನೇ ತರಗತಿಯವರೆಗೆ ಮಕ್ಕಳಿಗೆ ಮೌಲ್ಯ ಶಿಕ್ಷಣ ಪ್ರಾರಂಭಿಸಿದೆ. ಅದಕ್ಕೆ ಪೂರಕ ಅಭ್ಯಾಸವಾಗಿ ತಾವು ತಮ್ಮ ಅಧೀನದಲ್ಲಿ ಬರುವ ಎಲ್ಲಾ ಶಾಲೆಗಳಲ್ಲಿ ಶ್ರೀ ಸತ್ಯ ಸಾಯಿ ಬಾಲ ವಿಕಾಸ ತರಗತಿಗಳನ್ನು ಕಲಿಸಲು ಅನುಮತಿಸಬೇಕಾಗಿ ಶ್ರೀ ಸತ್ಯ ಸಾಯಿ ಸಮಿತಿ ಸದಸ್ಯರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಬದಲ್ಲಿ ಸಮಿತಿ ಸದಸ್ಯರಾದ ಹನುಮಂತ ಸೊರಗಾಂವಿ, ಕೆ.ಬಿ.ನಾವಳ್ಳಿ, ಬಿ.ಎಮ್.ನಂದಿ, ಐ.ಎ.ಪಾಟೀಲ, ಕೆ.ಆರ್.ಕೊತ್ತಲ, ಎ.ಜಿ.ಶರಣಾರ್ಥಿ ಉಪಸ್ಥಿತರಿದ್ದರು.