Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕ್ಷೇತ್ರ ಪುನರ್​ವಿಂಗಡನೆ; ತುರ್ತು ಸಭೆಗೆ ಸಮಯ ಕೋರಿ ಸ್ಟಾಲಿನ್‌ ಮೋದಿಗೆ ಪತ್ರ


ಚೆನ್ನೈ (ತಮಿಳುನಾಡು): ಕ್ಷೇತ್ರ ಪುನರ್​ವಿಂಗಡನೆ ಕುರಿತು ಆರಂಭದಿಂದಲೂ ಧ್ವನಿ ಎತ್ತಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್​, ಇದೀಗ ಈ ಕುರಿತು ಚರ್ಚೆಗೆ ತುರ್ತು ಸಭೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದ್ದಾರೆ. ರಾಜ್ಯದ ವಿವಿಧ ಪಕ್ಷದ ಸಂಸದರ ಜೊತೆ ಭೇಟಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.


ಪ್ರಧಾನಿ ಭೇಟಿಗೆ ಮನವಿ ಕೋರಿ ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಗೌರವಾನ್ವಿತ ಪ್ರಧಾನಿಗಳು ಕ್ಷೇತ್ರ ವಿಂಗಡನೆಗೆ ಸಂಬಂಧಿಸಿದ ನಮ್ಮ ಕಳವಳ ಕುರಿತು ಜ್ಞಾಪಕ ಪತ್ರವನ್ನು ಮಂಡಿಸಲು ರಾಜ್ಯಗಳ ವಿವಿಧ ಪಕ್ಷದ ಸಂಸದರೊಂದಿಗೆ ನಿಮ್ಮ ಜೊತೆಗೆ ಸಭೆ ಮಾಡಲು ಕೋರುತ್ತೇನೆ ಎಂದಿದ್ದಾರೆ. ಅಲ್ಲದೇ, ಈ ಸಭೆಯಲ್ಲಿ ಕಳೆದ ವಾರ ಚೆನ್ನೈನಲ್ಲಿ ನ್ಯಾಯಸಮ್ಮತ ಡಿಲಿಮಿಟೇಶನ್​ ಕುರಿತು ವಿವಿದ ರಾಜ್ಯದ ನಾಯಕರ ಜೊತೆ ನಡೆದ ಜಂಟಿ ಕ್ರಿಯಾ ಸಮಿತಿಯ ನಿರ್ಣಯವನ್ನು ತಿಳಿಸಲಾಗುವುದು. ಈ ಹಿಂದೆ ಹೇಳಿದಂತೆ. ನಮ್ಮ ಜನರ ಬಗ್ಗೆ ಒಗ್ಗಟ್ಟಿನ ನಿಲುವಿನ ಕುರಿತು ನಿಮಗೆ ತಿಳಿಸುವ ಉದ್ದೇಶದಿಂದ ತುರ್ತು ಸಮಯಕ್ಕೆ ಕೋರುತ್ತಿದ್ದೇನೆ ಎಂದಿರುವ ಅವರು, ಪ್ರತಿಕ್ರಿಯೆಗೆ ಕಾದಿರುವುದಾಗಿ ತಿಳಿಸಿದ್ದಾರೆ.


ಈ ಹಿಂದೆ ಮಾರ್ಚ್​ 27ರಂದು ಕೂಡ ಸಿಎಂ ಸ್ಟಾಲಿನ್​ ಪ್ರಧಾನಿಗೆ ಪತ್ರ ಬರೆದು ಭೇಟಿಗೆ ಸಮಯ ಕೋರಿದ್ದರು.


ಮಾರ್ಚ್​ 22ರಂದು ಚೆನ್ನೈನಲ್ಲಿ ನಡೆದ ನ್ಯಾಯಸಮ್ಮತ ಕ್ಷೇತ್ರ ಪುನರ್​ವಿಂಗಡನೆಗೆ ಆಗ್ರಹಿಸಿ ನಡೆದ ಜಂಟಿ ಕ್ರಿಯಾ ಸಮಿತಿಯ ಕಾರ್ಯಕ್ರಮದಲ್ಲಿ ಕೈಗೊಂಡ ನಿರ್ಣಯವನ್ನು ತಿಳಿಸುವುದಾಗಿ ಸ್ಟಾಲಿನ್​ ಹೇಳಿದ್ದಾರೆ. ಈ ಸಭೆಯಲ್ಲಿ ಕರ್ನಾಟಕ, ತೆಲಂಗಾಣ ಸೇರಿದಂತೆ ದೇಶದ ವಿವಿಧ ರಾಜ್ಯದ ಕೆಲವು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಪ್ರಮುಖ ಗಣ್ಯರು ಭಾಗಿಯಾಗಿದ್ದರು.





ನಮ್ಮ ಚರ್ಚೆಯಿಂದ ಹೊರಹೊಮ್ಮುವ ಧ್ವನಿಗಳು ರಾಜಕೀಯ ಗಡಿಗಳನ್ನು ಮೀರಿ, ನಮ್ಮ ಸಂಸದೀಯ ಪ್ರಜಾಪ್ರಭುತ್ವದಲ್ಲಿ ನ್ಯಾಯಯುತ ಪ್ರಾತಿನಿಧ್ಯ ಬಯಸುವ ಕುರಿತು ಸಿಎಂ ಸ್ಟಾಲಿನ್​ ಪತ್ರದಲ್ಲಿ ತಿಳಿಸಿದ್ದಾರೆ.



Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ