ಇಂಡಿ,ಜು,೧೧ : ಈ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವು ಧರ್ಮವನ್ನು ಆಶ್ರಯಿಸಿದೆ. ಆದರಿಸಿದೆ.ನಮ್ಮ ಕಣ್ಣಿನ ಕಾಣುವ ವಿಶಾಲವಾದ ವಿಶ್ವವಾಗಲಿ ಅದರ ಸೌಂದರ್ಯವಾಗಲಿ ಎಲ್ಲವೂ ಧರ್ಮದ ಮೇಲೆ ನಿಂತಿದೆ. ಒಂದು ಸುಂದರ ಹೂ ಅರಳುತ್ತದೆ. ಸುವಾಸ ಹರಡುತ್ತದೆ. ಒಂದು ದೀಪ ಉರಿಯುತ್ತದೆ. ಸುತ್ತಮುತ್ತೆಲ್ಲ ಬೆಳಕು ಚಲ್ಲುತ್ತದೆ. ಅರಳುವದು ಹೂವಿನ ಧರ್ಮ,ಬೆಳಗುವದು ದೀಪದ ಧರ್ಮ ಎಂದು ಸಂಸ್ಥಾನ ಗವಿಮಠ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ತಾಲೂಕಿನ ಬೊಳೆಗಾಂವ ಗ್ರಾಮದಲ್ಲಿ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ನೂತನ ದೇವಸ್ಥಾನದ ಲೋಕಾರ್ಪಣೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಳಸಾಹರೋಹಣ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಣ್ಣು ಸ್ಟೀಲ ಬೆಳ್ಳಿ ಬಂಗಾರ ಪಾತ್ರೆಯಲ್ಲಿ ರೋಟ್ಟಿ ಬಡಸಿದರೆ ರೊಟ್ಟಿ ಒಂದೇ ಎಂಬ ಭಾವವಿರಬೇಕು.ಬೆಳ್ಳಿ ಬಂಗಾರ ಕಡೆಗೆ ಲಕ್ಷ್ಯ ಇರಬಾರದು, ದೇವರು ಕೊಟ್ಟಿದ್ದು ಲಕ್ಷ ಇರಬೇಕು,ನಮ್ಮ ನೋಡುವ ದೃಷ್ಠಿಕೋನ ಬದಲಾಗಬೇಕು ಎಂದರು.
ಮೆಚ್ಚಿಗೆಯ ಮಾತು ಚುಚ್ಚು ಮಾತು, ನೋವು ನಲಿವು, ಕಷ್ಟ ಸುಖ,ಸೋಲು ಗೆಲವು ಬಡತನ ಶ್ರೀಮಂತಿಕೆ ಲಾಭ ಹಾನಿ ಮಧ್ಯೆ ಬದುಕಲು ಕಲಿಯಬೇಕು.ಕೆಲಸ ಮಾಡುವದು ಕಲಿಯಬೇಕು ಎಂದರು. ಆಕಾಸಕ್ಕೆ ಕಂಬಗಳಿಲ್ಲ,ತಾಯಿಯ ಹಾಲು ಅಮೃತಕ್ಕೆ ಸಮಾನ, ದೇಹಕ್ಕೆ ಒಂಬತ್ತು ರಂಧ್ರಗಳಿವೆ ಇವೆಲ್ಲ ದೇವರ ಕೊಟ್ಟ ಕೊಡುಗೆ.
ಪತ್ರಿ ಬಲ್ವಾರ್ಚನೆ ಗಿಡದಿಂದ ಬರುತ್ತವೆ,ಅನ್ನ ನೀರು ಭೂಮಿಯಿಂದ ಪಡೆಯುತ್ತೇವೆ, ಇದರಲ್ಲಿ ನಮ್ಮದೇನು ಇಲ್ಲ,ಅಭಿಷೇಕ ಮಾಡಿ ಸಂಪತ್ತು ಬೆಳ್ಳಿ ಬಂಗಾರ ವಸ್ತು ಮಕ್ಕಳು ವಡವೆ ಬೇಡುವ ಬದಲಾಗಿ ದೇವರು ಕೊಟ್ಟಿದ್ದಕ್ಕೆ ಧನ್ಯತಾ ಭಾವ ಇರಬೇಕು ಎಂದರು.
ಸಾಲೋಟಗಿ ಶ್ರೀ ಸಿದ್ದೇಶ್ವರ ಆಶ್ರಮದ ಸಂಗಮೇಶ್ವರ ಶ್ರೀಗಳು ಮಾತನಾಡಿ ಹೂಗಳಲ್ಲಿ ಹತ್ತಿ ಹೂ ಶ್ರೇಷ್ಠ, ತಾಯಿಯ ಹಾಲು ಶ್ರೇಷ್ಠ, ಚುಕ್ಕೆಗಳಲ್ಲಿ ಬೆಳ್ಳಿ ಚುಕ್ಕೆ ಶ್ರೇಷ್ಠ , ಹಾಗೆಯೇ ಪ್ರಾಣಿಗಳಲ್ಲಿ ಮಾನವ ಜನ್ಮ ಶ್ರೇಷ್ಠ ಅದರ ಸದುಪಯೋಗ ಪಡೆಯಬೇಕು ಎಂದರು.
ಶಿರಶ್ಯಾಡದ ಅಭಿನವ ಮುರಗೇಂದ್ರ ಶ್ರೀಗಳು ಮಾತನಾಡಿ ಈ ಜಗತ್ತಿನಲ್ಲಿ ಬಾಳಿ ಬದುಕಿದವರು ಋಷಿಮುನಿಗಳು ತತ್ವಜ್ಞಾನಿಗಳು ದಾರ್ಶನಿಕರು ದಾಸರು ಸಂತರು ಶರಣರು ಮಹಾಂತರು ಕಣ್ಣಿಗೆ ಕಾಣುವ ಈ ವಿಶಾಲವಾದ ವಿಶ್ವವು ದೇವನ ಅಭಿವ್ಯಕ್ತ ರೂಪವೆಂದರು.
ಈರಣ್ಣ ಹುಣಸಗಿ, ಆನಂದ ಹುಣಸಗಿ, ಆನಂದ ಮೋರೆ, ಪ್ರಶಾಂತ ತಳವಾರ ಪ್ರಭು ಹ್ಯಾಳದ ಮಾತನಾಡಿದರು.
ವೇದಿಕೆಯ ಮೇಲೆ ವೀರಭದ್ರೇಶ್ವರ ದೇವಸ್ಥನ ಸಮಿತಿ ಅಧ್ಯಕ್ಷ ಆನಂದಪ್ಪ ಹುಣಸಗಿ, ಬಸವಂತರಾಯಗೌಡ ಪಾಟೀಲ, ಶ್ರೀಮಂತ ಇಂಡಿ, ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಡಾ|| ಸುಶೀಲಕುಮಾರ ಹೂನಸಗಿ, ಬಾಬು ಸಾವಕಾರ ಮೇತ್ರಿ ಇದ್ದರು.
