ಹಸಿರು ಕ್ರಾಂತಿ ವರದಿ ಬೆಳಗಾವಿ
ಉದ್ಯಮೋನ್ಮುಖ ತಾಂತ್ರಿಕ ಶಿಕ್ಷಣವನ್ನು ಬಲಪಡಿಸುವ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಆಧುನಿಕ ತಯಾರಿಕಾ ಕೌಶಲ್ಯಗಳನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿ ಕೆಎಲ್ಎಸ್ ಗೋಗಟೆ ತಾಂತ್ರಿಕ ಸಂಸ್ಥೆ (ಕೆಎಲ್ಎಸ್ ಜಿಐಟಿ) ಬೆಳಗಾವಿಯಲ್ಲಿ ಪ್ರಿಸಿಷನ್ ಎಂಜಿನಿಯರಿಂಗ್ ಶ್ರೇಷ್ಠತಾ ಕೇಂದ್ರ (ಪಿಇ-ಸಿಒಇ)ವನ್ನು Factory on Campus ಉಪಕ್ರಮದಡಿ ಉದ್ಘಾಟಿಸಲಾಯಿತು.
ಈ ಕೇಂದ್ರವನ್ನು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ತನ್ನ ಸಿಎಸ್ಆರ್ ಯೋಜನೆಯಡಿ ನೀಡಿದ ಆರ್ಥಿಕ ಸಹಾಯದಿಂದ ಸ್ಥಾಪಿಸಲಾಗಿದೆ. ಕ್ಯಾಂಪಸ್ನಲ್ಲೇ ತಯಾರಿಕಾ ವಾತಾವರಣ ನಿರ್ಮಿಸುವ ಮೂಲಕ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಶಿಕ್ಷಣದ ಆರಂಭದಿಂದಲೇ ಕೈಗಾರಿಕಾ ಅನುಭವ ಪಡೆಯುವ ಅವಕಾಶವನ್ನು ಈ ಕೇಂದ್ರ ಒದಗಿಸುತ್ತದೆ.
ಈ ಶ್ರೇಷ್ಠತಾ ಕೇಂದ್ರವು ವೇಗವಾಗಿ ಬೆಳೆಯುತ್ತಿರುವ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ ಉದ್ಯಮ, ವಿಶೇಷವಾಗಿ ಅಡ್ವಾನ್ಸ್ ಏರೋಸ್ಪೇಸ್ ಘಟಕಗಳು ಹಾಗೂ ಇತರ ಹೈ-ಪ್ರಿಸಿಷನ್ ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಸೇವೆ ಸಲ್ಲಿಸುವಂತೆ ರೂಪಿಸಲಾಗಿದೆ. ಎಐ ಸಕ್ರಿಯಗೊಳಿಸಿದ ಕೈಗಾರಿಕಾ ಮಟ್ಟದ ತಯಾರಿಕಾ ವ್ಯವಸ್ಥೆಗಳು, ಡಿಜಿಟಲ್ ಎಂಜಿನಿಯರಿಂಗ್ ಸಾಧನಗಳು ಹಾಗೂ ನೈಜ ಉತ್ಪಾದನಾ ಪದ್ಧತಿಗಳ ಮೂಲಕ ವಿದ್ಯಾರ್ಥಿಗಳಿಗೆ ಅನುಭವಾಧಾರಿತ ಕಲಿಕೆ ದೊರೆಯಲಿದೆ.
ಪ್ರಾಂಶುಪಾಲರಾದ ಡಾ.ವಿ.ಎ.ಅಥವಲೆ ಸಂಸ್ಥೆಯ ದೃಷ್ಟಿಕೋನ ವಿವರಿಸಿ, ಕೈಗಾರಿಕಾ ಹಾಗೂ ತಾಂತ್ರಿಕ ಸಹಭಾಗಿತ್ವಗಳ ಮೂಲಕ ಉದ್ಯಮಸಿದ್ಧ ಪದವೀಧರರನ್ನು ತಯಾರಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಅವರು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಹಾಗೂ Dassault Systèmes Foundation, India ಅವರ ಬೆಂಬಲಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಕರ್ನಾಟಕ ಬ್ಯಾಂಕ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಶ್ರೀನಿವಾಸ್ ಭಟ್ ಮಾತನಾಡಿ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯ ಮೂಲಕ ರಾಷ್ಟ್ರ ನಿರ್ಮಾಣದ ಬದ್ಧತೆಯನ್ನು ಹೈಲೈಟ್ ಮಾಡಿದರು.
ಕಾರ್ಯಕ್ರಮದ ಪ್ರಮುಖ ಅಂಶವಾಗಿ Dassault Systèmes Foundation, India ಬೆಂಬಲಿತ Enabling Precision Manufacturing Skill Development in Aerospace and Allied Industries for Tier-2 Cities’ Talent ಯೋಜನೆಯ ಘೋಷಣೆ ನಡೆಯಿತು.
ಈ ಯೋಜನೆಯಡಿ ಬೆಳಗಾವಿ ಹಾಗೂ ಸುತ್ತ-ಮುತ್ತಲಿನ ಪ್ರದೇಶದ ಏರೋಸ್ಪೇಸ್ ಪರಿಸರಕ್ಕೆ ಭವಿಷ್ಯಸಿದ್ಧ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಕಾರ್ಯಬಲವನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈ ಸಂದರ್ಭದಲ್ಲಿ Dassault Systèmes Foundation, India ಮತ್ತು KLS GIT ನಡುವಿನ ಒಪ್ಪಂದವನ್ನು ಪುಣೆಯ ಡಸಾಲ್ಟ್ ಸಿಸ್ಟಮ್ಸ್ ಸೊಲ್ಯೂಷನ್ಸ್ ಲ್ಯಾಬ್ನ ಸಿಇಒ ಸುದರ್ಶನ್ ಮೊಗಸಾಲೆ ಹಾಗೂ ಕೆಎಲ್ಎಸ್ ಜಿಐಟಿಯ ಜಿಸಿ ಅಧ್ಯಕ್ಷ ಆರ್.ಕೆ.ಬೆಳಗಾಂವ್ಕರ್ ನಡುವೆ ವಿನಿಮಯ ಮಾಡಿಕೊಳ್ಳಲಾಯಿತು.
ಬೆಳಗಾವಿ ಏಕಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ರಾಜೀವ್ ಕೌಲ್ ಅವರು, ಸಂಸ್ಥೆಯ ದೃಷ್ಟಿಕೋನವನ್ನು ಮೆಚ್ಚಿ, ಕ್ಯಾಂಪಸ್ನಲ್ಲೇ ಕಾರ್ಖಾನೆ ಮಾದರಿಯನ್ನು ನಿರ್ಮಿಸಿರುವುದನ್ನು ಶ್ಲಾಘಿಸಿದರು.
ಕೆಎಲ್ಎಸ್ ಜಿಐಟಿಯ ಜಿಸಿ ಅಧ್ಯಕ್ಷ ಆರ್.ಕೆ.ಬೆಳಗಾಂವ್ಕರ್ ಅವರು Factory on Campus ಮಾದರಿಯು ವಿದ್ಯಾರ್ಥಿಗಳಿಗೆ ನಿರಂತರ ಕೈಗಾರಿಕಾ ಅನುಭವ ನೀಡುವುದರ ಮೂಲಕ ಅವರನ್ನು ಉದ್ಯೋಗ ಜೀವನದ ಮೊದಲ ದಿನದಿಂದಲೇ ಪರಿಣಾಮಕಾರಿಯಾಗಿ ಕೊಡುಗೆ ನೀಡುವಂತೆ ಸಿದ್ಧಗೊಳಿಸುತ್ತದೆ ಎಂದು ತಿಳಿಸಿದರು.
ಕೆಎಲ್ಎಸ್ನ ಅಧ್ಯಕ್ಷ ಪ್ರದೀಪ ಸಾವ್ಕಾರ್ ಅವರು ಕೌಶಲ್ಯಾಭಿವೃದ್ಧಿ ಗುಣಮಟ್ಟದ ಉನ್ನತ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ ಎಂದು ವಿವರಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಲಾ ಸೊಸೈಟಿ ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ಕೈಗಾರಿಕಾ ನಾಯಕರು, ಅಧ್ಯಾಪಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಆಹ್ವಾನಿತ ಅತಿಥಿಗಳು ಭಾಗವಹಿಸಿ, ಕೆಎಲ್ಎಸ್ ಜಿಐಟಿ ಸಂಸ್ಥೆಯ ಇಂಜಿನಿಯರಿಂಗ್ ಶಿಕ್ಷಣ, ನವೀನತೆ ಹಾಗೂ ಉದ್ಯಮೋನ್ಮುಖ ಕೌಶಲ್ಯಾಭಿವೃದ್ಧಿಯ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲು ನಿರ್ಮಿಸಲಾಯಿತು.
ಮೆಕ್ಯಾನಿಕಲ್ ವಿಭಾಗದ ವಿಭಾಗಾಧ್ಯಕ್ಷರಾದ ಡಾ.ಹರ್ಷಿತ್ ಕುಲಕರ್ಣಿ ಸಲಹಾ ಮಂಡಳಿ ಸದಸ್ಯರ ಹೆಸರುಗಳನ್ನು ಘೋಷಿಸಿ, ಧನ್ಯವಾದದ ಪ್ರಸ್ತಾವನೆ ಸಲ್ಲಿಸಿದರು.
