LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಸತತ ಬಾರಿ  ಮಳೆ: ಬಳ್ಳಾರಿ ನಾಲಾದ ಅತಿಕ್ರಮಣದಿಂದ ರೈತರಲ್ಲಿ ಮೂಡಿದ  ಆತಂಕ

ಬೆಳಗಾವಿ. ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿಯ ಬಳ್ಳಾರಿ ನಾಲಾ  ಹಳ್ಳ ಉಕ್ಕಿ ಹರಿಯುತ್ತಿದ್ದು, ಹಳ್ಳದ ದಡದಲ್ಲಿರುವ ವಡಗಾವಿ ಮತ್ತು ಸುತ್ತಮುತ್ತಲ ರೈತರು ಕಂಗಾಲಾಗಿದ್ದಾರೆ. ಹಳ್ಳದಲ್ಲಿ ತುಂಬಿಕೊಂಡಿರುವ ಜಲಪರ್ಣಿ, ಹೂಳು ಮತ್ತು ತ್ಯಾಜ್ಯ ನೀರು ಹರಿದು ಕೃಷಿ ಜಮೀನುಗಳಿಗೆ ನುಗ್ಗುತ್ತಿರುವುದರಿಂದ ಬೆಳೆಗಳು ನಾಶವಾಗುವ ಆತಂಕ ಎದುರಾಗಿದೆ.
ಬಳ್ಳಾರಿ ಹಳ್ಳದಲ್ಲಿ ಪ್ರತಿವರ್ಷವೂ ಮಳೆಗಾಲದಲ್ಲಿ ಪ್ರವಾಹ ಉಂಟಾಗುವುದು ಸಾಮಾನ್ಯವಾಗಿದೆ. ಆದರೆ, ಈ ಬಾರಿ ಹಳ್ಳದಲ್ಲಿ ಬೆಳೆದಿರುವ ಜಲಪರ್ಣಿ ಮತ್ತು ಸಂಗ್ರಹವಾಗಿರುವ ತ್ಯಾಜ್ಯದಿಂದಾಗಿ ನೀರು ಸುಲಭವಾಗಿ ಹರಿಯದಂತಾಗಿದೆ. ಈ ಕಲುಷಿತ ನೀರು ರೈತರ ಫಲವತ್ತಾದ ಜಮೀನುಗಳಿಗೆ ನುಗ್ಗುತ್ತಿದ್ದು, ರೈತರು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುವ ಭೀತಿಯಲ್ಲಿದ್ದಾರೆ. ಇದರಿಂದ ಮುಂಗಾರು ಮತ್ತು ಹಿಂಗಾರು ಎರಡೂ ಹಂಗಾಮುಗಳ ಫಸಲು ಹಾಳಾಗುತ್ತಿದ್ದು, ಮಾಡಿದ ವೆಚ್ಚವೂ ಕೈ ಸೇರದ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯ ರೈತರ ತೀವ್ರ ವಿರೋಧದ ನಡುವೆಯೂ ನಡೆಯುತ್ತಿರುವ ಬೈಪಾಸ್ ಕಾಮಗಾರಿಯು ರೈತರ ಪಾಲಿಗೆ ಶಾಪವಾಗಿದೆ. ಈ ಕಾಮಗಾರಿಯು ಅವೈಜ್ಞಾನಿಕವಾಗಿದ್ದು, ಇದರಿಂದ ನೀರು ಹರಿಯಲು ಅಡಚಣೆಯಾಗಿದೆ. ಧಾಮಣೆ, ಸುಳ್ಯ, ಮಚ್ಛೆ ಮತ್ತು ಮಜಗಾಂವ್ ಪ್ರದೇಶಗಳಿಂದ ಬರುವ ನೀರು ಬೈಪಾಸ್ ಕಾಮಗಾರಿಯಿಂದಾಗಿ ಶೇತಭೂಮಿಯಲ್ಲೇ ನಿಂತು, ಬೆಳೆಗಳು ಕೊಳೆಯುವಂತಾಗಿದೆ.
ಈ ಕಾಮಗಾರಿಯ ವಿರುದ್ಧ ನ್ಯಾಯಾಲಯದಲ್ಲಿ ಮೂರು ದಾವೆಗಳು ಬಾಕಿ ಇದ್ದರೂ, ಆಡಳಿತಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರು ಮೊಂಡುತನದಿಂದ ಕೆಲಸ ಮುಂದುವರೆಸಿದ್ದಾರೆ. ಈ ಹಿಂದೆ ನ್ಯಾಯಾಲಯವು ರೈತರ ಪರವಾಗಿ ತೀರ್ಪು ನೀಡಿದ್ದರೂ, ಕಾಮಗಾರಿಯನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಇತ್ತ, ಜುಲೈ 3 ರಂದು ನಡೆಯಬೇಕಿದ್ದ ವಿಚಾರಣೆಯು ಜುಲೈ 20ಕ್ಕೆ ಮುಂದೂಡಲ್ಪಟ್ಟಿರುವುದು ರೈತರ ಹತಾಶೆಗೆ ಕಾರಣವಾಗಿದೆ.
ಶಹಪುರ, ವಡಗಾವಿ, ಅನಗೋಳ, ಮಾಧವಪುರ, ಹಳೆ ಬೆಳಗಾವಿ, ಬೆಳಗಾವಿ ಮತ್ತು ಹಲಗಾ ಪ್ರದೇಶಗಳ ರೈತರು ಈ ಸಮಸ್ಯೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಳ್ಳದ ನೀರು ಜಮೀನುಗಳಲ್ಲಿ ಹೆಚ್ಚು ಕಾಲ ನಿಲ್ಲುತ್ತಿರುವುದರಿಂದ ಮಣ್ಣಿನ ಫಲವತ್ತತೆಯೂ ಹಾಳಾಗುತ್ತಿದೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಬಳ್ಳಾರಿ ಹಳ್ಳದ ಹೂಳು ತೆಗೆಸಿ, ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 *ಕಾರ್ಯಕ್ರಮದಲ್ಲಿ ಡಾ. ರಾಮಕೃಷ್ಣ ರೆಡ್ಡಿಯವರಿಗೆ ಗೌರವ, ಸನ್ಮಾನ,,* 15 ವರ್ಷಗಳ ಬಳಿಕ ಮಾರಿಹಾಳದಲ್ಲಿ ಮಹಾಲಕ್ಷ್ಮಿ ಜಾತ್ರೆ: ಜಾತ್ರೆಯ ಸಿದ್ಧತೆ, ಭಕ್ತರ ಅನುಕೂಲಕ್ಕೆ ಅಗತ್ಯ ವ್ಯವಸ್ಥೆ ಕುರಿತು ಲಕ್ಷ್ಮೀ ಹೆಬ್ಬಾಳಕರ್ ಸಭೆನಾಳೆ ಶ್ರೀ ದ್ಯಾಮವ್ವ, ದುರಗಮ್ಮ ದೇವಿಯರ ಅದ್ದೂರಿ ಮೇರವಣಿಗೆ: ರಾಜು ಖಾನಪ್ಪನವರಮಾಧ್ಯಮ ಮಿತ್ರರು ಕ್ರೀಡೆಯಲ್ಲಿ ಭಾಗವಹಿಸಿದ್ದು ಉತ್ತಮ ಬೆಳವಣಿಗೆಕೊಪ್ಪಳ ತಾ.ಪಂ. ಇಒ ಎತ್ತಂಗಡಿಗೆ ಆಗ್ರಹಿಸಿ ಆ. 31ಕ್ಕೆ ಬೃಹತ್ ಪ್ರತಿಭಟನೆಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳಸಪ್ಟೆಂಬರ್ 23 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ: ಜಿಲ್ಲೆಯಲ್ಲಿ 13,53,946 ಮತದಾರರ ಕರಡು ಪಟ್ಟಿ ಪ್ರಕಟ30ರಂದು  ಶ್ರೀ ಬಾಳುಮಾಮಾ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿತ್ಯ ನೇಮ ಉಪಾಷಣೆಯಿಂದ ನೆಮ್ಮದಿ ಜೀವನ.....ಪ್ರಭುಜಿ   ಮಹಾರಾಜ.ಮಳೆ ದೇವರು ಕೊಡುತ್ತಾನೆ, ಅದರ ಹಂಚಿಕೆ ಸರ್ಕಾರ ಮಾಡಬೇಕು  : ಮಹಾಂತೇಶ ದೊಡ್ಡಗೌಡರ