Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೀಟ್-2026: ಕಲ್ಯಾಣ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದ ಬಳ್ಳಾರಿಯ ಸಾಯಿ ಶ್ರಾವ್ಯ

ಬಳ್ಳಾರಿ, ಜು.21:: ನೀಟ್ (NEET-UG)-2026 ಫಲಿತಾಂಶದಲ್ಲಿ ಬಳ್ಳಾರಿ ನಾರಾಯಣ ಪಿಯು ಮತ್ತು ಪ್ಲಸ್-2 ಕಾಲೇಜಿನ ವಿದ್ಯಾರ್ಥಿನಿ ಎನ್. ಸಾಯಿ ಶ್ರಾವ್ಯ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ನಗರದ ನಾರಾಯಣ ಕಾಲೇಜಿನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಮೊಹಮ್ಮದ್ ಗೌಸ್ ಬಾಷಾ ಈ ಮಾಹಿತಿ ನೀಡಿದರು. ಸಾಯಿ ಶ್ರಾವ್ಯ 720 ಅಂಕಗಳಿಗೆ 687 ಅಂಕ ಗಳಿಸಿ ಅಖಿಲ ಭಾರತ ಮಟ್ಟದಲ್ಲಿ 150ನೇ ರ‍್ಯಾಂಕ್ ಪಡೆದಿದ್ದಾಳೆ ಎಂದು ತಿಳಿಸಿದರು.
ನಿಯೋಜಿತ ತರಬೇತಿ, ಪರಿಣಿತ ಶಿಕ್ಷಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿ ಕೇಂದ್ರಿತ ಬೋಧನಾ ವಿಧಾನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ಹೇಳಿದರು. ಈ ಬಾರಿ ನೀಟ್‌ನಲ್ಲಿ ಕಾಲೇಜಿನ ಹಲವು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಇದು ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ ಎಂದರು.
ನೀಟ್-2026ರಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ನಾರಾಯಣ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ. ಪಿ. ನಾರಾಯಣ, ನಿರ್ದೇಶಕರಾದ ಡಾ. ಪಿ. ಸಿಂಧುರಾ, ಬೆಂಗಳೂರು ದಕ್ಷಿಣ ವಲಯದ ಪ್ರಮುಖ ಡೀನ್ ಸುರೇಂದರ್ ರೆಡ್ಡಿ, ದಕ್ಷಿಣ ವಲಯದ ಎಜಿಎಂ ರೂಪಾ ಜಿ. ಬಾಷಾ, ಬಾಬು, ವಿಭಾಗೀಯ ಡೀನ್‌ಗಳಾದ ಜಗದೀಶ್ ಹಾಗೂ ಅನಂತ ರಾವ್, ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಅಭಿನಂದಿಸಿದರು.
ಸುದ್ದಿಗೋಷ್ಠಿಯಲ್ಲಿ ಬಾಷಾ, ರಜನಿಕಾಂತ್, ಜಗದೀಶ್, ನಾರಾಯಣ ರೆಡ್ಡಿ, ದೇವರಾಜ್ ಸಿಬ್ಬಂದಿ ವರ್ಗ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ಕುಲಗೊಡ ಮಾರ್ಗವಾಗಿ ಹುಕ್ಕೇರಿ-ಬಾಗಲಕೋಟೆ ಬಸ ಸಂಚಾರ ಪ್ರಾರಂಭಿಸಲು ಮನವಿ"ಎಸ್ಐಆರ್ ಪ್ರಕ್ರಿಯೆಯಲ್ಲಿ ಎಲ್ಲ ಮತದಾರರೂ ಭಾಗಿಯಾಗಬೇಕು: ಮಾಜಿ ಮೇಯರ್ ಎಂ.ರಾಜೇಶ್ವರಿಬರಪೀಡಿತ ರಾಜ್ಯ ಎಂದು ಘೋಷಿಸಿಮಹಿಳಾ ಮೀಸಲಾತಿ ತಕ್ಷಣ ಜಾರಿಗೊಳಿಸಿ: ಜೆಎಂಎಸ್ ಆಗ್ರಹಬೆಳಗಾವಿ ಜಿಲ್ಲಾ ಲೇಖಕಿಯರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಬೆಳ್ಳಿ ಮಹೋತ್ಸವದತ್ತ ಸಾಗಲಿ ಕ್ರಾಂತಿ ಮಹಿಳಾ ಮಂಡಳ: ಜಿತೇಶ್ ಕಬ್ಬೂರ್ಹೈಕಮಾಂಡ್ ತೀರ್ಮಾನವೇ ಅಂತಿಮ; ಯಾರಿಗೆ ಸಚಿವ ಸ್ಥಾನ ಸಿಕ್ಕರೂ ನಮ್ಮವರೇ: ಸತೀಶ್ ಜಾರಕಿಹೊಳಿ263ನೇ ದಿನದಲ್ಲಿ ಬಲ್ದೋಟ ಹಟಾವೋ, ಮಾಲಿನ್ಯ ವಿರೋಧಿ ಹೋರಾಟ ಯಶಸ್ವಿ ಅಂಬೇಡ್ಕರ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಎಸ್‍ಐಆರ್ ಪ್ರಕ್ರಿಯೆ ಶೀಘ್ರದಲ್ಲಿಯೇ ಪೂರ್ಣಗೊಳಿಸಿ: ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್