Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆಂಪೇಗೌಡರ ಆಡಳಿತ ಮಂತ್ರವು ಇಂದಿಗೂ ಇಡೀ ಜಗತ್ತಿಗೆ ಮಾದರಿಯಾಗಿದೆ : ಬಂಡೆ

ಇಂಡಿ: ೧೬ನೇ ಶತಮಾನದಲ್ಲೇ ಬೆಂಗಳೂರನ್ನು ಭವಿಷ್ಯದ ಜಾಗತಿಕ ನಗರವಾಗಿ ಕಲ್ಪಿಸಿಕೊಂಡಿದ್ದ ಕೆಂಪೇಗೌಡರ ಸಮಗ್ರ ನಗರಾಭಿವೃದ್ಧಿ, ಪರಿಸರ ಕಾಳಜಿ, ಜನಪರ ಆಡಳಿತ ಮಂತ್ರವು ಇಂದಿಗೂ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
         ಶನಿವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಉದ್ಧೇಶಿಸಿ ಅವರು ಮಾತನಾಡಿದರು.
        ಕೆಂಪೇಗೌಡರು ತಮ್ಮ ದಾರ್ಶನಿಕ ಯೋಜನೆಗಳ ಜತೆಗೆ ವಿವಿಧ ಕುಲಕಸುಬಿನವರಿಗೆ ನೆಲೆಸಲು ೬೪ ಪೇಟೆ ಕಟ್ಟಿ ಬೆಂಗಳೂರು ಕುಶಲತೆಯ ತವರಾಗಿಸಿ ಅಭಿವೃದ್ಧಿಗೆ ಅಂದೇ ಪೀಠಿಕೆ ಹಾಕಿದರು.ಸಾವಿರ ಕೆರೆ ನಿರ್ಮಿಸಿದ ಕೀರ್ತಿ ಇವರದು. ಎಲ್ಲ ಜಾತಿ-ಧರ್ಮದ ಜನರನ್ನು ಒಟ್ಟಿಗೆ ಕರೆದೊಯ್ಯುವ ಮೂಲಕ ಸರ್ವಜನಾಂಗದ ಶಾಂತಿಯ ತೋಟಕ್ಕೆ ಭದ್ರ ಅಡಿಪಾಯ ಹಾಕಿದರು ಎಂದು ಹೇಳಿದರು.
       ಅಂತರ್ಜಲ ಕುಸಿಯುತ್ತಿರುವ ಮತ್ತು ನೀರಿನ ಅಭಾವದ ಇಂದಿನ ದಿನಗಳಲ್ಲಿ, ಕೆಂಪೇಗೌಡರ ನೀರು ನಿರ್ವಹಣಾ ತಂತ್ರಗಳು ಇಡೀ ಜಗತ್ತಿಗೆ ಮಾದರಿ ಆಗಿವೆ. ಕೆರೆ ನಿರ್ಮಿಸಿ, ಮರ ನೆಡು ಎಂಬ ಅವರ ಮಂತ್ರ ಪರಿಸರ ಕಾಳಜಿಯ ಪ್ರತೀಕವಾಗಿದೆ ಎಂದು ಹೇಳಿದರು.
          ಮುಖ್ಯ ಶಿಕ್ಷಕ ಕೆ ಐ ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಂಗಳೂರು ಇಂದು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡಲು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆಗೆ ಆಕರ್ಷಕ ತಾಣವಾಗಲು ಕೆಂಪೇಗೌಡರು ಅಂದು ಬಿತ್ತಿದ ವಾಣಿಜ್ಯ ಸ್ನೇಹಿ ವಾತಾವರಣವೇ ಕಾರಣ ಎಂದು ಹೇಳಿದರು.
        ಶಿಕ್ಷಕರಾದ ಎಸ್ ಎಸ್ ಅರಬ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕ ಅಫ್ತಾಬ್ ಮುಲ್ಲಾ ಸೇರಿದಂತೆ ಮಕ್ಕಳು ಹಾಜರಿದ್ದರು.

 

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭಡಾ. ಪುಷ್ಪಲತಾ ಅವರ ವರ್ಗಾವಣೆಗೆ ಸಾರ್ವಜನಿಕರ ಆಕ್ರೋಶ"ಪೋಲಿಯೋ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿ" ಕೆಂಪೇಗೌಡರ ಆಡಳಿತ ಮಂತ್ರವು ಇಂದಿಗೂ ಇಡೀ ಜಗತ್ತಿಗೆ ಮಾದರಿಯಾಗಿದೆ : ಬಂಡೆ ಪೊಲೀಯೋ ಲಸಿಕಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಕೈಜೋಡಿ ಯಶಸ್ವಿಗೊಳಿಸಬೇಕು : ಪ್ರದೀಪಕುಮಾರ ಹಿರೇಮಠ*ಬಳ್ಳಾರಿ: ಜೂ.28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ*"ಸಂಘದ ತರಬೇತಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ."  ಹಿಂದೂಗಳ ಮನೆಯಲ್ಲಿ ಮೊಹರಂ, ಪಾಂಜಾಗಳನ್ನು ಪ್ರತಿಷ್ಠಾಪನೆ. ಭಾವೈಕ್ಯತೆ ಸಾರಿದ ಮುಧೋಳ ಕುಟುಂಬ*ಯರಗಟ್ಟಿ ತಾಲೂಕು ಆಡಳಿತ ಕೇಂದ್ರ ಕಟ್ಟಡಕ್ಕೆ ಶಂಕುಸ್ಥಾಪನೆ*ನನ್ನ ಸಚಿವ ಸಂಪುಟದಲ್ಲಿ ಅಪ್ಪಾಜಿ ಇರಬೇಕೆಂಬುವುದು ನನ್ನ ಆಸೆ