ಹುನಗುಂದ; ಬಸವಪ್ರಿಯ ಅಪ್ಪಣ್ಣ ಸ್ವಾಮೀಜಿ ಎಲ್ಲ ಸಮುದಾಯದ ಸ್ವಾಮೀಜಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ನಮ್ಮ ಸಮುದಾಯದ ಯುವಕರರು ಉಚಿತ ಕ್ಷೌರ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು., ಬಸವಪ್ರಿಯ ಅಪ್ಪಣ್ಣ ಸ್ವಾಮೀಜಿ ದೂರದೃಷ್ಟಿ ಹೊಂದಿದ್ದರು. ಕರ್ನಾಟಕ, ಮಹಾರಾ?, ಗೋವಾದಲ್ಲಿ ಚದುರಿ ಹೋದ ಸಮುದಾಯದ ಬಾಂಧವರನ್ನು ಸಂಘಟಿಸಿದ ಕೀರ್ತಿ ನಮ್ಮ ಸ್ವಾಮೀಜಿಗೆ ಸಲ್ಲುತ್ತದೆ. ಸಮಾಜದ ಯುವಕರನ್ನು ಶಿಕ್ಷಣವಂತರನ್ನಾಗಿ ಹಾಗೂ ಉದ್ಯೋ-ಗದಾತರನ್ನಾಗಿ ಮಾಡಲು ಶ್ರಮಿಸಿದ್ದಾರೆ ಸೂಳೆಭಾವಿ ಕಿತ್ತೂರು ರಾಣಿ ಚೆನ್ನಮ ವಸತಿ ನಿಲಯದ ಪ್ರಾಚಾರ್ಯ ಮಲ್ಲಿಕಾರ್ಜುನ ಹಡಪದ ಹೇಳಿದರು. ಇಲ್ಲಿನ ಶ್ರೀ ವಿಮವಿವ ಸಂಘ ಮತ್ತು ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಸಹಯೋಗದಲ್ಲಿ ಅಪ್ಪಣ್ಣನವರ ೧೮ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡುತ್ತ ಬಸವಪ್ರಿಯ ಅಪ್ಪಣ್ಣ ಸ್ವಾಮೀಜಿ ಅವರ ೧೮ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ನಗರದ ಕ್ಷೌರಿಕ ಸಮಾಜದ ೧೫ ಜನರಿಂದ ಇಲ್ಲಿನ ಉಚಿತ ಪ್ರಸಾದ ನಿಲಯದ ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಉಚಿತ ಕ್ಷೌರ (ಕಟಿಂಗ್) ಸೇವೆ ನಡೆಯಿತು.
ಸಮಾಜದ ಮುಖಂಡ ಎಚ್.ಡಿ. ವೈದ್ಯ ಮಾತನಾಡಿ ಅಪ್ಪಣ್ಣ ಸ್ವಾಮೀಜಿ ಅವರು ಸಂಗೀತ ಕಲಾವಿದರಾಗಿದ್ದರು. ಸಮಾಜದ ಶರಣ ಸಂಸ್ಕೃತಿಯಲ್ಲಿ ನಡೆಯಿತ್ತಿದ್ದು, ಶರಣರ ಆದರ್ಶಗಳೊಂದಿಗೆ ನಾವು ಮುಂದುವರಿಯಬೇಕು. ಸ್ವಾಮೀಜಿ ತಮ್ಮ ಜೀವನದ ಕೊನೆಯುಸಿರಿರುವವರೆಗೂ ಸಮುದಾಯದ ಪ್ರಗತಿಗೆ ಶ್ರಮಿಸಿದ್ದಾರೆಂದು ವೈಧ್ಯ ಹೇಳಿದರು. ವಿಜಯ ಮಹಾಂತೇಶ ವಿವ ಸಂಘದ ಆಡಳಿತ ಮಂಡಳಿ ಸದಸ್ಯರಾದ ವೀರಣ್ಣ ಬಳೂಟಗಿ ಹಾಗೂ ಅರುಣ್ ದುದ್ದಗಿ ಮಾತನಾಡಿದರು.
ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಣ್ಣ ಚೋಳಚಗುಡ್ಡ, ಸಂಗಣ್ಣ ಚಿನಿವಾಲರ, ರಾಚಪ್ಪ ರಾಜಮನಿ, ಮಂಜು ಕಿರಸೂರ ಹಾಗೂ ಸಮುದಾಯದ ಮುಖಂಡರು ಇದ್ದರು.
