ಇಂಡಿ,ಜು,೨೧ : ಬಳ್ಳೊಳ್ಳಿ ಗ್ರಾಮದ ನಾಡಕಛೇರಿಯ ಹೊಸದಾಗಿ ನೇಮಕಗೊಂಡ ಉಪತಹಶೀಲ್ದಾರ ಎಚ್. ಎಚ್. ಗುನ್ನಾಪುರ ಇವರಿಗೆ ಬಳ್ಳೊಳ್ಳಿ ಮತ್ತು ಗುಂದವನ ಗ್ರಾಮದ ಗ್ರಾಮಸ್ಥರಿಂದ ಸ್ವಾಗತ ಕೋರಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಬಳ್ಳೊಳ್ಳಿ ಗ್ರಾಮದ ಯುವ ನೇತಾರ ಈರಣ್ಣ ವಾಲಿ, ಹಜರತ ಮುಲ್ಲಾ, ಗುಂದವನ ಗ್ರಾಮದ ಅಕ್ಬರ ಖಾನಾಪುರ, ತುಕಾರಾಮ ಹರಳಯ್ಯ, ಮೈನುದ್ದಿನ ಬಿರಾದಾರ, ಮಲ್ಲಿಕಾರ್ಜುನ ಭೋಸಗಿ, ಅನಿಲಕುಮಾರ ದ್ಯಾಮುಗೋಳ, ಮಂಜುನಾಥ್ ಬನಸೋಡೆ, ಎಸಣ್ಣಾಗೌಡ ಪಾಟೀಲ, ಶೋಭಾ ವಾಲಿಕಾರ, ಚೈತನ್ಯ ವಾಲಿಕಾರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.