ಇಂಡಿ : ಸೊನಕನಳ್ಳಿ, ಹಡಲಸಂಗ, ಜಿಗಜಣಗಿ, ಸಾತಾಲಗಾಂವ ಹೀಗೆ ಹಲವಾರು ಗ್ರಾಮದ ರೈತರು ನೀರಿಗಾಗಿ, ವಿದ್ಯುತಗಾಗಿ, ಶಿಕ್ಷಣಕ್ಕಾಗಿ ವಂಚಿತರಾಗಿದ್ದು, ಇದನ್ನು ಗಮನದಲ್ಲಿಟ್ಟು ಇವತ್ತು ಪದವಿ ಕಾಲೇಜು, ೧೧೦/೧೧ ಕೆ. ವಿ ವಿದ್ಯುತ್ ವಿತರಣಾ ಕೇಂದ್ರ, ರಾಷ್ಟ್ರೀಯ ಹೆದ್ದಾರಿಯಿಂದ ಸಂಚರಿಸಲು ಸುಗಮ ದಾರಿ ಇದು ನನ್ನ ಜನರ ಅಸೆ ಅದನ್ನು ಈಡೇರಿಸುವದು ನನ್ನ ಕರ್ತವ್ಯ ಅದನ್ನು ಇವತ್ತು ಕಾರ್ಯ ರೂಪಕ್ಕೆ ದಂದಿದ್ದೇನೆ ಎಂದು ಇಂಡಿ ಶಾಸಕರು ಯಶವಂತರಾಯಗೌಡ ಪಾಟೀಲ ಮಾತನಾಡಿದರು.
ಇಂಡಿ ತಾಲೂಕಿನ ಹಡಲಸಂಗ ಗ್ರಾಮದಲ್ಲಿ ೧೧೦/೧೧ಕೆವಿ ವಿದ್ಯುತ್ ಉಪಕೇಂದ್ರ ಕಾಮಗಾರಿ ಚಾಲನಾ ಸಮಾರಂಭ, ಹಡಲಸಂಗದಿAದ ಸೊನಕನಹಳ್ಳಿ ರಸ್ತೆ ಸುಧಾರಣೆ ಲೋಕಾರ್ಪಣೆ ಸಮಾರಂಭ, ಶ್ರೀ ಸಾಬರಭದ್ರ ದೇವಸ್ಥಾನದ ಹತ್ತಿರ ಸಭಾ ಭವನದ ನಿರ್ಮಾಣ ಶಂಕುಸ್ಥಾಪನೆ ಸಮಾರಂಭ, ಹಡಲಸಂಗ ಗ್ರಾಮದ ಶ್ರೀ ವಿಠಲ ದೇವಸ್ಥಾನ ಹತ್ತಿರ ಸಭಾ ಭವನದ ನಿರ್ಮಾಣ ಶಂಕುಸ್ಥಾಪನೆ ಸಮಾರಂಭ, ನೂತನ ಸರಕಾರಿ ಪಿಯು ಕಾಲೇಜು - ಉದ್ಘಾಟನಾ ಸಮಾರಂಭ, ಹಡಲಸಂಗ ಗ್ರಾಮದ ಜನುಗು ಕೆರೆ ದುರಸ್ತಿ/ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಸಮಾರಂಭ, ೧೧೦/೧೧ ಕೆ.ವಿ. ಹಡಲಸಂಗ ವಿದ್ಯುತ್ ವಿತರಣಾ ಕೇಂದ್ರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ತಮ್ಮ ಜಮೀನಿನಲ್ಲಿ ಉಳುಮೆ ಮಾಡಿ, ಬಿತ್ತನೆ ಮಾಡೋದಕ್ಕೆ ಸಾಲ ಸೋಲ ಮಾಡುತ್ತೀರಿ, ಅದೇ ರೀತಿಯಾಗಿ ರೈತರು ಎಲ್ಲ ಕಾರ್ಯಗಳ ಜ್ಯೋತೆ ಇನ್ಶೂರೆನ್ಸ್ ತುಂಬುವದನ್ನು ರೂಢಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ದಯಾನಂದ ಮಠ, ವಿದ್ಯುತ್ ಪ್ರಸಾರ ಅಧಿಕಾರಿಗಳು ರಮೇಶ ಪವಾರ, ಗ್ರಾಮದ ಹಿರಿಯರು ಮಾತನಾಡಿ ಎಲ್ಲ ಯೋಜನೆಗಳು ಇಲ್ಲಿನ ಜನರಿಗೆ ಹೊಸ ಜೀವನ ನೀಡಿದೆ, ಎಲ್ಲ ಮೂಲ ಭೂತ ಸೌಲಭ್ಯ ನೀಡಿದ್ದಕ್ಕೆ ಧನ್ಯವಾದಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ದಿವ್ಯ ಸನಿಧ್ಯ ವಿಜಯನಗರ ಪ್ರಕಾಶ ಮಹಾರಾಜ, ಧರ್ಮ ಮಹಾರಾಜ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಬ್ಯುಸಿ. ಎಸ್. ಕವಲಗಿ, ಗ್ಯಾರಂಟಿ ಯೋಜನೆ ಅಧ್ಯಕ್ಷರು ಪ್ರಶಾಂತ್ ಕಾಳೆ, ರಮೇಶ ಪವಾರ, ಬಿ. ಸಿ. ಸಾವಕಾರ, ಶಿವಯೋಗೇಪ್ಪ ಚನಗೊಂಡ, ಸಿದ್ದಪ್ಪ, ಎಸ್. ಎ. ಬಿರಾದಾರ, ಜಗದೀಶ ಜಾಧವ, ದಯಾನಂದ ಮಠ ಸರ, ಎಸ್. ಎಸ್. ಪಾಟೀಲ, ಎ. ಈ. ಈ. ಸಂದೀಪ, ಗುತ್ತಿಗೆದಾರ ಗಚ್ಚಿನಮಠ, ಭೀಮಣ್ಣ ಗಡ್ಡದ, ಕಾಂತಾ ರೀಸಲ್ದಾರ, ಸಂತೋಷಗೌಡ ಪಾಟೀಲ, ಮೆಲ್ಲೆಷ ದೋಣಗಿ, ರಾಜು ಗೂಗವಾಡ, ಭೀಮ ಪವಾರ, ಶೇಖರ ನಾಯಕ, ವಿನೋದ ಶಹಾಪುರ, ವಿದ್ಯುತ್ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.