ರಾಮದುರ್ಗ: ಜುಲೈ ೧ ವೈದ್ಯರ ದಿನಾಚರಣೆ. ಆ ದಿನಾಚರಣೆಯನ್ನು ನಿವೃತ್ತ ಅಂಚೆ ನೌಕರರೊಬ್ಬರು ಪಟ್ಟಣದ ಎಲ್ಲ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಸನ್ಮಾನಿಸುವ ಮೂಲಕ ವೈದ್ಯರ ದಿನಾಚರಣೆಯನ್ನು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸಿದರು.
ದಿನಾಚರಣೆಯ ವೈಶಿಷ್ಟ್ಯತೆಗೆ ಕಾರಣವಾದ ನಿವೃತ್ತ ಅಂಚೆ ನೌಕರ ಹಾಗೂ ೮೨ ವರ್ಷದ ಹಿರಿಯ ಜೀವಿ ತಾಲೂಕಿನ ಹಲಗತ್ತಿ ಗ್ರಾಮದ ಬಸಪ್ಪ ಮುಳ್ಳೂರ. ಇವರು ನಿವೃತ್ತಿಗೊಂಡರು ಸದಾ ಯಾವುದೇ ದಿನಾಚರಣೆಗಳಿರಲಿ ಅಂತಹ ಸಂದರ್ಭದಲ್ಲಿ ಅವರ ಸೇವೆಯನ್ನು ಸ್ಮರಿಸುವ ಕೆಲಸ ಸದಾ ಮಾಡುತ್ತಿರುತ್ತಾರೆ. ಆ ನಿಟ್ಟಿನಲ್ಲಿ ಜು. ೧ ರ ವೈದ್ಯರ ದಿನಾಚರಣೆ ಅಂಗವಾಗಿ ರಾಮದುರ್ಗ ಪಟ್ಟಣದಲ್ಲಿರುವ ಶ್ರೀನಿವಾಸ ಆಸ್ಪತ್ರೆಯ ಡಾ| ಆರ್.ಎ. ಕಣಬೂರ ಹಾಗೂ ಪುತ್ರ ಡಾ| ವಿಶ್ವನಾಥ, ರಾಮದುರ್ಗದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ| ಐ.ಪಿ. ದೊಡ್ಡಮನಿ ಹಾಗೂ ಡಾ| ನಿರ್ಮಲಾ ಹಂಜಿ, ಡೆಂಟಲ್ ಆಸ್ಪತ್ರೆಯ ತಜ್ಞ ಡಾ| ಎಸ್.ಎ. ಅಲ್ಲಿಸಾಬಣ್ಣವರ ದಂಪತಿ, ವರ್ಣಿಕಾ ಕಣ್ಣಿನ ಆಸ್ಪತ್ರೆ ಡಾ| ರೇಣುಕಾ ಸುಲ್ತಾನಪೂರ, ಲಕ್ಷ್ಮಿ ಹಾಸ್ಪಿಟಲ್ನ ಡಾ| ಲಕ್ಷ್ಮಿ ಲಿಂಗಾರೆಡ್ಡಿ ಇವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ವೈದ್ಯ ದಿನಾಚರಣೆ ಶುಭ ಕೋರಿ ತಮ್ಮ ಸೇವೆ ಸದಾ ಜನರಿಗೆ ಮುಡಿಪಾಗಿರಲಿ ಎಂದು ಹೇಳಿ ವೈದ್ಯ ದಿನಾಚರಣೆಯನ್ನು ಸ್ಮರಿಸುವ ಕಾರ್ಯ ಮಾಡಿದರು.
