ಧಾರವಾಡ ನಗರದ ಮರಾಠಾ ಮಂಡಳದ ಭಾರತ ಹೈಸ್ಕೂಲ್ ಆವರಣದಲ್ಲಿ ಭಾನುವಾರ ನಡೆದ ಮರಾಠಾ ವಿದ್ಯಾಪ್ರಸಾರಕ ಮಂಡಳದ ಆಡಳಿತ ಮಂಡಳಿಯ ತೈವಾರ್ಷಿಕ ಚುನಾವಣೆ ಮತದಾನ ಪ್ರಕ್ರಿಯೆ ಶಾಂತ ರೀತಿಯಿಂದ ನಡೆಯಿತು.
ಭಾರತ ಹೈಸ್ಕೂಲ್ನಲ್ಲಿ ನಿಗದಿಪಡಿಸಿದ್ದ ಮತಗಟ್ಟೆಗಳ ಮುಂದೆ ಬೆಳಗ್ಗೆಯಿಂದಲೇ ಮತ ಚಲಾಯಿಸಲು ಹಿರಿಯರು, ಯುವಕರು ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಮರಾಠಾ ವಿದ್ಯಾಪ್ರಸಾರಕ ಮಂಡಳದ ಆಡಳಿತ ಮಂಡಳಿ ಚುನಾವಣೆಯಲ್ಲಿ ನಗರದ ಒಟ್ಟು 13 ವಾರ್ಡ್ಗಳ ವ್ಯಾಪ್ತಿಗೆ ಬರುವ ಮರಾಠಾ ಸಮಾಜದ ಮತದಾರರು ಮಂಡಳದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ 13 ನಿರ್ದೇಶಕ ಸ್ಥಾನಗಳಿಗೆ ತಮ್ಮ ಮತವನ್ನು ಚಲಾಯಿಸಿದರು
ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು ಸಂಜೆ ಮತದಾನ ಪ್ರಕ್ರಿಯೆ ಮುಗಿದ ನಂತರ ಮತ ಎಣಿಕೆ ಆರಂಭವಾಗಿ ತಡರಾತ್ರಿವರೆಗೂ ನಡೆಯಿತು
ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪುನರಾಯ್ಕೆಯಾದ ಮರಾಠಾ ಸಮಾಜದ ಹಿರಿಯರಾದ ಶ್ರೀ ಮನೋಹರ ಮೊರೆ ಮತ್ತು ಉಪಾಧ್ಯಕ್ಷರಾಗಿ ಪ್ಪಕಾಶ ಘಾಟಗೆ ಹಾಗೂ ನಿರ್ದೇಶಕರಾಗಿ ಹಿಂದಿನ ಟಿಮ್ ಮತ್ತೆ ಆಯ್ಕೆಯಾಗಿದೆ ನಂತರ ಅಭಿಮಾನಿಗಳು ಮತ್ತು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
