ಐನಾಪುರ-ಕ್ಷೇತ್ರದ ರಸ್ತೆ, ಕುಡಿಯುವ ನೀರು, ಶಾಲಾ ಕಟ್ಟಡ, ಗಟಾರೀಕರಣ ಕಾಮಗಾರಿ ಗಳಂತಹ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಅನುದಾನಗಳನ್ನು ಬಿಡುಗಡೆಗೊಳಿಸುವುದಾಗಿ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
Also read
ಅವರು ಗುರುವಾರ ದಿನಾಂಕ 16 ರಂದು ಐನಾಪುರದ ಇಂದಿರಾನಗರ ಬಡಾವಣೆಯಲ್ಲಿ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ 50 ಲಕ್ಷ ರೂ ಸಿಸಿ ರಸ್ತೆ ಹಾಗೂ ಗಠಾರಿಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷವು ಜನರ ಪರವಾಗಿ ಕೆಲಸ ಮಾಡುತ್ತಿದ್ದು ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಜನರಿಗೆ ಲಾಭವಾಗಿದೆ ಇದನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗುತ್ತೇವೆ , ಡಾ ಅಂಬೇಡ್ಕರ್ ರವರು ಎಲ್ಲರಿಗೂ ಸಮಾನ ಹಕ್ಕು ಕೊಟ್ಟಿದ್ದಾರೆ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಮೇಶ್ ಸಿಂದಗಿ, ಮುಖ್ಯಾಧಿಕಾರಿ ಮಹಾಂತೇಶ್ ಕೌಲಾಪುರೆ, ಸಚಿನ್ ಬುಟಾಳಿ, ಉಮೇಶ್ ಪಾಟೀಲ್, ಸುದರ್ಶನ್ ಜಂತನ್ನವರ್, ಸುರೇಶ್ ಗಾಣಿಗೇರ್, ದಾದಾ ಜಂತಣ್ಣವರ್, ಅಭಿಯಂತರರಾದ ಸದಾಶಿವ್ ಗುರವ್, ವೀರೇಶ್ ಬಿಸ್ತಗೌಡ, ಸಿದ್ದಾರೂಡ ನ್ಯಾಮಗೌಡ, ಶುಭಂ ಪಾಟೀಲ್, ರಮೇಶ್ ಪೂಜಾರಿ, ಪರಶುರಾಮ ನಾಯಕ್, ಸಹದೇವ ನಾಯಕ್, ಉದಯ್ ನಾಯಕ್, ಹನುಮಂತ ನಾಯಕ್, ಸತ್ಯಪ್ಪ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಫೋಟೋ ಶೀರ್ಷಿಕೆ 16 ಐನಾಪುರ 1 ಐನಾಪುರ್ ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಸಿಸಿ ರಸ್ತೆ ಗಠಾರಿಕರಣ ಕಾಮಗಾರಿಗೆ ಚಿಕ್ಕೋಡಿ ಸಂಸದರಾದ ಪ್ರಿಯಾಂಕ ಜಾರಕಿಹೊಳಿ ಗುದ್ದಲಿ ಪೂಜೆ ನೆರವೇರಿಸಿದರು, ಈ ವೇಳೆ ರಮೇಶ್ ಸಿಂದಗಿ, ಮಹಾಂತೇಶ್ ಕೌಲಾಪುರೆ, ಉಮೇಶ್ ಪಾಟೀಲ್, ಸುದರ್ಶನ ಜಂತನ್ನವರ್ ಅವರನ್ನು ಚಿತ್ರದಲ್ಲಿ ಕಾಣಬಹುದು