*ಶಾಂತಿ ನಗರದಲ್ಲಿ ಬೆಂಕಿ ಅವಘಡ – ಬಣವೆ ಸಂಪೂರ್ಣ ದಹನ, ₹11,000 ಧನಸಹಾಯ*

MK HasiruKranti
*ಶಾಂತಿ ನಗರದಲ್ಲಿ ಬೆಂಕಿ ಅವಘಡ – ಬಣವೆ ಸಂಪೂರ್ಣ ದಹನ, ₹11,000 ಧನಸಹಾಯ*
WhatsApp Group Join Now
Telegram Group Join Now
ಬಳ್ಳಾರಿ  ಏ 18: ನಗರದ ಶಾಂತಿ ನಗರ ಪ್ರದೇಶದಲ್ಲಿ ದುರ್ಘಟನೆ ಸಂಭವಿಸಿದ್ದು, ರಾಮಾಂಜಿನೆಮ್ಮ ಅವರಿಗೆ ಸೇರಿದ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ತೀವ್ರತೆಯಿಂದ ಬಣವೆಯಲ್ಲಿದ್ದ ಸಾಮಗ್ರಿಗಳು ಸಂಪೂರ್ಣ ಸುಟ್ಟುಹೋಗಿದ್ದು, ಕುಟುಂಬಕ್ಕೆ ನಷ್ಟ ಉಂಟಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ವಾರ್ಡ್ ನಂ. 34ರ ಸದಸ್ಯರು ಹಾಗೂ ಮಾಜಿ ಮಹಾಪೌರರಾದ ರಾಜೇಶ್ವರಿ ಸುಬ್ಬರಾಯುಡು ಅವರು ಸ್ಥಳಕ್ಕೆ ಭೇಟಿ ನೀಡಿ, ಪೀಡಿತರಿಗೆ ಸಾಂತ್ವನ ಹೇಳಿದರು. ಈ ವೇಳೆ ಅವರು ತಮ್ಮ ವತಿಯಿಂದ ₹11,000 ಧನಸಹಾಯ ನೀಡಿ, ಮುಂದಿನ ದಿನಗಳಲ್ಲಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಬ್ಬರಾಯುಡು, ಯೋಗಾನಂದ, ವಿಷ್ಣು ಸೇರಿದಂತೆ ಹಲವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article