ಯರಗಟ್ಟಿ :ಜಿಲ್ಲಾಧಿಕಾರಿ ಮಹಮ್ಮದರೋಶನ ಯರಗಟ್ಟಿ ತಾಲ್ಲೂಕಿಗೆ ಶನಿವಾರ ಭೇಟಿ ನೀಡಿ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತ ಪ್ರಜಾಸೌಧ ಸ್ಥಳ ಪರಿಶೀಲನೆ ನಡೆಸಿದರು.
ಯರಗಟ್ಟಿಯಲ್ಲಿ ೮.೬೦ ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ದೊರೆತಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಮಾತನಾಡಿ,ಎರಡು ವಾರಗಳ ನಂತರ ಕಾಮಗಾರಿ ಅನುಷ್ಠಾನ ಸಂಬಂಧ ತ್ವರಿತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ನೂತನ ತಾಲೂಕಿಗೆ ಶೀಘ್ರದಲ್ಲೇ ಸರ್ವೇ ಆಫೀಸ್ ಪ್ರಾರಂಭಿಸಲಾಗುವುದು ಎಂದರು.
ಈ ವೇಳೆ ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ, ಲೋಕೋಪಯೋಗಿ ಇಲಾಖೆ ಅಧಿಕಾರಿ ಪ್ರಕಾಶ ಪಾಟೀಲ, ಎ.ಡಿ.ಎಲ್.ಆರ್ ಎಂ. ಆಯ್. ಬೆನಕಟ್ಟಿ, ಸರ್ವೇ ಅಧಿಕಾರಿ ಶ್ರೀಮಂತ ಬಡಿಗೇರ, ಶೀರಸ್ತದಾರ ಎಸ್. ಬಿ. ಕುಲಕರ್ಣಿ, ಗ್ರಾಮದ ಆಡಳಿತಾಧಿಕಾರಿಗಳಾದ ಯಲ್ಲಪ್ಪ ಭಾಂಗಿ, ಎಲ್. ಬಿ. ದಳವಾಯಿ, ಗ್ರಾಮ ಸಹಾಯಕರ ಮಡಿವಾಳಪ್ಪ ವನ್ನೂರ ಸೇರಿದಂತೆ ಅನೇಕರು ಇದ್ದರು.


