ಟೌನ್ ಪೋಸ್ಟ್ ಮತ್ತೆ ಪುನರಾರಂಭ ಮಾಡುವ ಭರವಸೆ : ಪ್ರತಿಭಟನೆ ಹಿಂದಕ್ಕೆ

Pratibha Boi
ಟೌನ್ ಪೋಸ್ಟ್ ಮತ್ತೆ ಪುನರಾರಂಭ ಮಾಡುವ ಭರವಸೆ : ಪ್ರತಿಭಟನೆ ಹಿಂದಕ್ಕೆ
WhatsApp Group Join Now
Telegram Group Join Now

ರಾಮದುರ್ಗ: ಪಟ್ಟಣದ ತೇರಬಜಾರನಲ್ಲಿರುವ ಟೌನ್ ಪೋಸ್ಟ್ ಅಂಚೆ ಕಛೇರಿಯನ್ನ ಮುಖ್ಯ ಕಛೇರಿಯ ಜೊತೆ ವೀಲಿನ ಮಾಡುವ ಪ್ರಕ್ರಿಯರ ವಿರೋಧಿಸಿ ಕಳೆದ ಮೂರು ದಿನಗಳಿಂದ ಹೋರಾಟ ನಡೆಸಿದ ವಿಜಯ ಸೇನಾ ಸಮೀತಿ ಹಾಗೂ ಸಾರ್ವಜನಿಕರಿಗೆ ಅಂಚೆ ಇಲಾಖೆ ಅಧಿಕಾರಿಗಳು ಟೌನ್ ಪೋಸ್ಟ್ ಮತ್ತೆ ಪುನರಾರಂಭ ಮಾಡಲು ಭರವಸೆ ನೀಡಿದರು.
ಪಟ್ಟಣ ಮುಖ್ಯ ಅಂಚೆ ಕಛೇರಿ ಎದುರುಗಡೆ ಕಳೆದ ಮೂರು ದಿನಗಳಿಂದ ವೀಲಿನ ಪ್ರಕ್ರಿಯೆಯನ್ನು ವಿರೋಧಿಸಿ ವಿಜಯ ಸೇನಾ ಸಮಿತಿ ಅನಿರ್ಧಿಷ್ಠಾವದಿ ಸತ್ಯಾಗ್ರಹ ನಡೆಸಿತ್ತು. ಮೂರನೇ ದಿನವಾದ ಇಂದು ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ತೆರಳಿ ಅಂಚೆ ಅಧಿಕ್ಷಕರಾದ ಬಸವರಾಜ ಅವರು ಪತ್ರದ ಮೂಲಕ ಟೌನ ಕಛೇರಿ ಮತ್ತೆ ಪುನರಾರಂಭ ಮಾಡುವ ಭರವಸೆ ನೀಡಿದ ಹಿನ್ನಲೆ ಇಂದು ವಿಜಯ ಸೇನಾ ಸಮೀತಿ ಪ್ರತಿಭಟನೆಯನ್ನ ಹಿಂಪಡೆದರು.
ಈಗಾಗಲೇ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅವರು ವೀಲಿನ ಪ್ರಕ್ರಿಯೆ ನಡೆಸದಂತೆ ಕೇಂದ್ರ ಸಚಿವರಿಗೆ ಪತ್ರ ಬರೆದ ಹಿನ್ನಲೆಯಲ್ಲಿ ಈ ಟೌನ್ ಕಛೇರಿ ಪ್ರಾರಂಭವಾಗುವ ಸಾಧ್ಯತೆ ಇದೆ ಈ ನಿಟ್ಟಿನಲ್ಲಿ ಮತ್ತೆ ಪ್ರಾರಂಭವಾಗುವ ಲಕ್ಷಣಗಳಿದ್ದು ಹೀಗಾಗಿ ಪ್ರತಿಭಟನೆ ಹಿಂಪಡೆಯುವಂತೆ ಪ್ರತಿಭಟನಾ ನಿರತರಿಗೆ ಅಧಿಕಾರಿಗಳು ಮನವಿ ಮಾಡಿದರು.
ಜೋತೆಗೆ ಈಗಾಗಲೇ ಈ ಅಂಚೆ ಕಛೇರಿ ಮುಖ್ಯ ಅಂಚೆ ಕಛೇರಿಗೆ ವರ್ಗಾವಣೆ ಮಾಡಿದರೆ ವೃದ್ದರಿಗೆ ಅಂಗವಿಕಲರಿಗೆ ತೊಂದರೆಯಾಗುತ್ತೆ ಎಂಬ ಪ್ರತಿಭಟನಾ ನಿರತರ ಭೇಡಿಕೆ ಸ್ಪಂದಿಸಿದ ಅಧಿಕಾರಿಗಳಿಗೆ ಟೌನ್ ಅಂಚೆ ಕಛೇರಿ ಬಳಿ ಒಂದು ಜಾಗ ಗುರುತಿಸಿ ಆ ಸ್ಥಳದಲ್ಲಿ ಹಣ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಹಾಗೂ ಅಂಗವಿಕಲರಿಗೆ ಮನೆಗೆ ತೆರಳಿ ಪೋಸ್ಟಮನ್ ಮೂಲಕ ಹಣ ಕೊಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯ ಸೇನಾ ಸಮೀತಿ ಸಂಸ್ಥಾಪಕ ಅಧ್ಯಕ್ಷ ವಿಜಯ ನಾಯ್ಕ, ತಾಲೂಕು ಅಧ್ಯಕ್ಷ ಮಾರುತಿ ಮಾದರ, ಪ್ರಶಾಂತ ಅಂಗಡಿ, ಕರವೇ ಶಿವರಾಮೇಗೌಡ ಬಣದ ವಿನಯ ಚಂದರಗಿ, ಸುಭಾಸ ಬಾರ್ಕಿ ಸೇರಿದಂತೆ ಮಹಿಳೆಯರು ವಿಜಯ ಸೇನಾ ಸಮೀತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article