ಘಟಪ್ರಭಾ: ಸ್ಥಳೀಯ ನಿವಾಸಿ ಹಾಗೂ ಕನ್ನಡ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆಂಪಣ್ಣ ಚೌಕಶಿ ವಕೀಲರು ಹಾಗೂ ಕನ್ನಡಪರ ಹೋರಾಟಗಾರರು ಇವರ ಸಾಮಾಜಿಕ ಸೇವೆ ಗುರುತಿಸಿ ಬೆಂಗಳೂರಿನ ಸದಾಶಿವನಗರದಲ್ಲಿ ” ಹೈಡ್ ಪಾರ್ಕ್ ಆರ್ಚಡ್ಸ್ ಹೋಟೆಲ್” ನಲ್ಲಿ ದಿನಾಂಕ 16-4-2026 ರಂದು ನಡೆದ ಸಮಾರಂಭದಲ್ಲಿ “ಚಿತ್ರ ಸಂತೆ” ಸಂಸ್ಥೆಯವರು “ವರ್ಷದ ಕನ್ನಡಿಗ 2026” ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಖ್ಯಾತ ಚಿತ್ರನಟಿ ಸಂಜನಾ ಗಲ್ರಾಣಿ, ಚಿತ್ರ ಸಂತೆಯ ವ್ಯವಸ್ಥಾಪಕ ನಿರ್ದೇಶಕರಾದ ಗಿರೀಶ್ ಪಿ ಗೌಡ, ಇವರು ರಾಜ್ಯ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದರು.


