ಜಾತ್ರೆ, ಹಬ್ಬ, ಹರಿದಿನಗಳು ಭಾರತೀಯ ಸೌಹಾರ್ದ ಸಂಸ್ಕೃತಿ ಪ್ರತೀಕ : ಪಾಟೀಲ

Pratibha Boi
ಜಾತ್ರೆ, ಹಬ್ಬ, ಹರಿದಿನಗಳು ಭಾರತೀಯ ಸೌಹಾರ್ದ ಸಂಸ್ಕೃತಿ ಪ್ರತೀಕ : ಪಾಟೀಲ
WhatsApp Group Join Now
Telegram Group Join Now

ಯರಗಟ್ಟಿ: ಜಾತ್ರೆ, ಹಬ್ಬ, ಹರಿದಿನಗಳು ಭಾರತೀಯ ಸೌಹಾರ್ದ ಸಂಸ್ಕೃತಿ ಪ್ರತೀಕದಂತಿವೆ ದೇವರ ಜಾತ್ರೆಗಳು, ಗ್ರಾಮಗಳ ಒಂದು ಪ್ರಮುಖ ಪರಂಪರೆ. ಸಾಮಾನ್ಯವಾಗಿ ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಒಂದುಗೂಡುವಿಕೆಯನ್ನು ಜಾತ್ರೆ ಎಂದು ಪರಿಗಣಿಸಲಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಹೇಳಿದರು.

ಪಟ್ಟಣದ ಮರಡಿ ಬಸವೇಶ್ವರ ಜಾತ್ರಾ ನಿಮಿತ್ಯ ಹಮ್ಮಿಕೊಂಡಿದ್ದ ತತ್ವಪದಗಳ ಭಜನಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವವರು ಮೂಲಕ ಉದ್ಘಾಟಿಸಿ ಮಾತನಾಡಿದರು.

ಶೆರೆವಾಡಿ ಬಸವೇಶ್ವರ ಭಜನಾ ಸಂಘದ ಶಿದ್ಲಿಂಗೇಶ ಹಾಗೂ ಕನಕೂರ ಗ್ರಾಮದ ರಾಮಲಿಂಗೇಶ್ವರ ಭಜನಾ ಸಂಘದ ಈಶ್ವರ ಇವರಿಂದ ತತ್ವಪದಗಳ ಭಜನಾ ಕಾರ್ಯಕ್ರಮ ಜರುಗಿದವು.

ಈ ವೇಳೆ ಮಹಾದೇವ ವಾಲಿ, ಸಂತೋಷ ಹಾದಿಮನಿ, ಮಹಾಂತೇಶ ಜಕಾತಿ, ಶಿವಶಂಕರ ಪಟ್ಟೇದ, ರಾಮೇಗೌಡ ದೇವರಡ್ಡಿ, ಮೋಹನ ಹಾದಿಮನಿ, ವೀರುಪಾಕ್ಷಪ್ಪ ಮದ್ದಾನಿ, ಬಸಯ್ಯ ಹಿರೇಮಠ, ಕಾಶೀಮಬೇಗ ಜಮಾದಾರ, ಬಸಲಿಂಗಪ್ಪ ಪಟ್ಟಣಶೆಟ್ಟಿ, ಮಾರುತಿ ಬನ್ನೂರ, ತುಕಾರಾಮ ಕಮತಗಿ, ಲಕ್ಕಪ್ಪ ಜಗದಾರ, ಮಹಾಂತ ಕರ್ಜಿಗಿಮಠ, ದುಂಡಯ್ಯ ಹಿರೇಮಠ, ಸದಾನಂದ ಹಣಬರ, ಮಹಾಂತೇಶ ಅಲ್ಲನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article