ಬಳ್ಳಾರಿ. ಸೆ. 29..: ಶರನ್ ನವರಾತ್ರಿ ವಿಜಯ ದಶಮಿ ಪ್ರಯುಕ್ತ ನಗರದ ಸೀತಾರಾಮ ಆಶ್ರಮದಲ್ಲಿ ಭಾನುವಾರ ರಂದು ಇಂದಿನ ಅಲಂಕಾರ ಮಹಾಲಕ್ಷ್ಮಿ ದೇವಿಗೆ,ನವದುರ್ಗೆಯರಲ್ಲಿ ಕಾತ್ಯಾಯನಿ ಅಲಂಕಾರವನ್ನು ಮಾಡಲಾಗಿತ್ತು.
ದಶಮಹಾ ವಿದ್ಯೆಗಳಲ್ಲಿ ಷೋಡಶೀ ದೇವಿ ಹಾಗೆಯೇ ಮಹಾಕಾಳಿ, ಮಹಾಲಕ್ಷ್ಮಿ, ಮಹಾ ಸರಸ್ವತಿ ತ್ರಿಶಕ್ತಿ ರೂಪಗಳಿಗೆ ಕುಂಕುಮಾರ್ಚನೆ ಸಹಸ್ರನಾಮ ಹಾಗೆಯೇಮಹಾಲಕ್ಷ್ಮಿದೇವಿ ಗೆ ಹಣದೊಂದಿಗೆ ಅಲಂಕಾರ. ಕಾತ್ಯಾಯನಿ ಮತ್ತು ಮಹಾಲಕ್ಷ್ಮಿ ದೇವಿಗೆ ತಾವರೆ ಹೂವುಗಳಿಂದ ವಿಶೇಷ ಪೂಜೆಗಳನ್ನು ನಿರ್ವಹಿಸಿದರು.ಈ ಪೂಜೆಗಳಲ್ಲಿ ಸೀತಾರಾಮ ಆಶ್ರಮಮ್ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದಾರೆ.


