ಪ್ರಾಣಿ ಪಕ್ಷಿಗಳಿಗೆ ನಿರುಣಿಸಲು ಪ್ರತಿ ಗ್ರಾಮಗಲ್ಲಿ ನೀರಿನ ತೊಟ್ಟಿ ನಿರ್ಮಾಣ ಸಂತೋಷದ ವಿಷಯ : ತಳವಾರ

Pratibha Boi
ಪ್ರಾಣಿ  ಪಕ್ಷಿಗಳಿಗೆ  ನಿರುಣಿಸಲು ಪ್ರತಿ ಗ್ರಾಮಗಲ್ಲಿ ನೀರಿನ ತೊಟ್ಟಿ ನಿರ್ಮಾಣ ಸಂತೋಷದ ವಿಷಯ : ತಳವಾರ
WhatsApp Group Join Now
Telegram Group Join Now

ಇಂಡಿ : ಭೂಮಿಯ ಮೇಲೆ ಬದುಕಲು ಕೇವಲ ಆಹಾರ ಇದ್ದರಸ್ಟೆ ಸಾಕಾಗೋಲ್ಲ, ಜೀವನ ಸಾಗಿಸಲು ಮುಖ್ಯವಾಗಿ ನೀರು ಬಹಳ ಮುಖ್ಯ, ನೀರಿಲ್ಲದೆ ಏನು ಇಲ್ಲಾ ಎಂದು ಝಳಕಿ ಗ್ರಾಮದ ಕಾಂಗ್ರೆಸ್ ಎಸ್ಸಿ/ಎಸ್. ಟಿ ರಾಜ್ಯ ಉಪಾಧ್ಯಕ್ಷರು ಸಣ್ಣಪ್ಪ ತಳವಾರ ಮಾತನಾಡಿದರು.
ಝಳಕಿ ಗ್ರಾಮದಲ್ಲಿ ಯಶವಂತರಯಗೌಡ ಪಾಟೀಲ ಫೌಂಡೇಶನ್ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಗ್ರಾಮದಲ್ಲಿನ ಮರ/ಗಿಡಗಳಿಗೆ ಪಕ್ಷಿ ಗಳಿಗೆ ನೀರಿನ ತೊಟ್ಟಿಗಳನ್ನು ಕಟ್ಟುವ ಕಾರ್ಯಕ್ರಮ ಚಡಚಣ ತಹಶೀಲ್ದಾರ್ ಸಂಜಯ ಇಂಗಳೇ ಇವರ ನೇತೃತ್ವದಲ್ಲಿ ಚಾಲನೆ ಕೊಡಲಾಯಿತು.
ಚಡಚಣ ತಹಶೀಲ್ದಾರ್ ಸಂಜಯ ಇಂಗಳೇ ಮಾತನಾಡಿ ಮಾನವ ಮಾತನಾಡಬಲ್ಲ ಪ್ರಾಣಿ, ತನ್ನ ಗೋಳನ್ನು ತಿಳಿಸಬಲ್ಲ, ಆದರೆ ಮೂಗ ಪ್ರಾಣಿ, ಪಕ್ಷಿಗಳು ತಮ್ಮ ಹಸಿವು, ದಣಿವು ಹೇಳಲು ಸಾಧ್ಯವಿಲ್ಲ, ಅದನ್ನು ಮಾನವರಾದ ನಾವುಗಳೇ ಅರಿತುಕೊಂಡು ಸಹಾಯ ಮಾಡೋದು ಮಾನವ ನಿಜವಾದ ಧರ್ಮ, ಅದನ್ನು ಅರಿತು ಯಶವಂತರಾಯಗೌಡ ಪಾಟೀಲ ಫೌಂಡೇಶನ ರವರು ಪ್ರತಿ ಗ್ರಾಮಗಲ್ಲಿ ನೀರಿನ ತೊಟ್ಟಿಯನ್ನು ಕಟ್ಟಿ ಪಕ್ಷಿಗಳಿಗೆ ನಿರುಣಿಸುವ ಕಾರ್ಯಕ್ರಮ ಮಾಡೋದು ಬಹಳ ಸಂತೋಷದ ವಿಷಯ ಎಂದರು.
ಈ ಸಂದರ್ಭದಲ್ಲಿ ಹಣಮಂತ ಖಡೆಖಡೆ, ಸಂತೋ? ದಾಯಗೋಡೆ, ಸುರೇಶ ನಾಯಕ, ಚಂದ್ರಕಾಂತ ಕೋಳಿ, ಸಾಹೇಬಗೌಡ ಬಿರಾದಾರ, ಉಮೇಶ ಕಾರಕಲ, ಅಮಸಿದ್ಧ ಢಾಳೆ, ಅಕ್ಬರ ಖಾನಾಪುರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article