ಅಂಬೆಡ್ಕರವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು :ಗುರುಸ್ವಾಮಿ

Pratibha Boi
ಅಂಬೆಡ್ಕರವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು :ಗುರುಸ್ವಾಮಿ
WhatsApp Group Join Now
Telegram Group Join Now

ಇಂಡಿ: ಭಾರತ ಕಂಡ ಶ್ರೇಷ್ಟ ವ್ಯಕ್ತಿಯಾದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ: ಬಾಬಾಸಾಹೇಬ ಅಂಬೆಡ್ಕರವರನ್ನು ದೇಶ ವಿದೇಶಗಳಲ್ಲಿ ಕೂಡಾ ಶ್ರೇಷ್ಟ ವ್ಯಕ್ತಿ ಎಂದು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಹೇಳಿದರು.
ಅವರು ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕಾ ಆಡಳಿತ ಮತ್ತು ತಾಲೂಕಾ ಪಂಚಾಯತ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡ ಡಾ:ಬಿ.ಆರ್.ಅಂಬೇಡ್ಕರವರ ೧೩೫ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತ ದೇಶ ವಿವಿಧ ಜಾತಿ, ಧರ್ಮ ಆಚರಣೆಗಳ ನಡುವೆಯು ಪ್ರಾದೇಶಿಕವಾಗಿ ಸಾಕಷ್ಟು ಭಿನ್ನತೆ ಒಳಗೊಂಡಿದ್ದರು ವಿವಿದ್ಯತೆಯಲ್ಲಿ ಏಕತೆ ಸಾರುವ ರಾಷ್ಟ್ರ ಯಾವುದಾದರು ಇದ್ದರೆ ಅದು ಭಾರತ ದೇಶವಾಗಿದೆ. ಇದಕ್ಕೆ ಮೂಲ ಕಾರಣ ಬಾಬಾಸಾಹೇಬ ಅಂಬೆಡ್ಕರವರು ೨ವರ್ಷ ೧೧ತಿಂಗಳು ೧೮ದಿನಗಳ ಕಾಲ ವಿವಿಧ ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಸುದಿರ್ಘವಾಗಿ ಶ್ರಮವಹಿಸಿ ಸಂವಿಧಾನ ರಚನೆ ಮಾಡಿದ್ದಾರೆ. ಅವರ ಈ ನಿರಂತರ ಪರಿಶ್ರಮದ ಫಲವಾಗಿ ಇಂದು ವಿಶ್ವಕ್ಕೆ ಮಾದರಿಯಾಗಿ ಯಶಶ್ವಿ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಕಾರಣವಾಗಿದೆ. ಆದ್ದರಿಂದ ನಾವೂಗಳು ಅವರ ಜೀವನ ಶೈಲಿ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನ್ಯಾಯವಾದಿ ಪ್ರತಿಭಾ ಹೊಸಮನಿ ಉಪನ್ಯಾಸ ನೀಡಿ ತಹಸಿಲ್ದಾರ ಬಿ.ಎಸ್.ಕಡಕಬಾವಿ ಸಂವಿಧಾನ ಪೀಠಿಕೆಯನ್ನು ವಾಚನಮಾಡಿ ಮಾತನಾಡಿದರು. ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ, ತಾಲೂಕಾ ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ, ಭೀಮಾಶಂಕರ ಸಹಕಾರಿ ಸಕ್ಕರೆ ಕಾರಖಾನೆ ನಿರ್ದೇಶಕ ಜಟ್ಟೆಪ್ಪ ರವಳಿ, ಸುರೇಶ ನಡಗಡ್ಡಿ ಮಾತನಾಡಿದರು.
ಲಿಂಬೆ ಅಭೀವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ ಅವರು ಡಾ:ಬಿ.ಆರ್.ಅಂಬೇಡ್ಕರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವಿದ್ಯುಕ್ತವಾಗಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾಜ ಕಲ್ಯಾಣಾಧಿಕಾರಿ ಉಮೇಶ ಲಮಾಣಿ ಸ್ವಾಗತಿಸಿದರು.
ಕಾರ್ಯಕ್ರಮಕ್ಕೂ ಮುಂಚೆ ನಗರದ ಪ್ರವಾಸಿ ಮಂದಿರದಿಂದ ಡಾ:ಬಿ.ಆರ್.ಅಂಬೇಡ್ಕರವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಗೊಂಬೆ ಕುಣಿತ, ವಿವಿಧ ಕಲಾತಂಡಗಳಿಂದ ಭವ್ಯವಾಗಿ ಮೇರವಣಿಗೆ ಹೊರಟು ಪ್ರಮುಖ ವೃತ್ತಗಳ ಮೂಲಕ ಹಾದು ಕಾರ್ಯಕ್ರಮ ಸ್ಥಳವಾದ ಮಿನಿ ವಿಧಾನಸೌಧಕ್ಕೆ ತಲುಪಿ ನಂತರ ಸಮಾರಂಭ ಜರುಗಿತು.
ವೇದಿಕೆ ಮೇಲೆ ಡಿವೈಎಸ್‌ಪಿ ಸದಾಶಿವ ಕಟ್ಟಿಮನಿ, ತಾಪಂ ಇಓ ಭಿಮಾಶಂಕರ ಕನ್ನೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್.ಮುಜಾವರ, ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ, ನಗರ ಠಾಣೆ ಸಿಪಿಐ ಬೀಸೆ, ಗ್ರಾಮೀಣ ಸಿಪಿಐ ಸನೀಲ ಪಾಟೀಲ, ಸದಾಶಿವ ಪ್ಯಾಟಿ, ಧರ್ಮರಾಜ ವಾಲಿಕಾರ, ರಮೇಶ ನಿಂಬಾಳಕರ, ಸಂಜು ನಾಯ್ಕೊಡಿ, ಸಂಜು ಚವ್ಹಾಣ, ಬಾಬು ಗುಡಮಿ, ಧರ್ಮರಾಜ ಸಾಲೋಟಗಿ, ಪರಸು ಕಟ್ಟಿಮನಿ, ಯಲ್ಲಪ್ಪ ಬಂಡೆನವರ ಇತರರು ಇದ್ದರು.
ಮೇರವಣಿಗೆಯಲ್ಲಿ ಪಿಡಬ್ಲುಡಿ ಅಧಿಕಾರಿ ದಯಾನಂದ ಮಠ, ತೋಟಗಾರಿಕೆ ಅಧಿಕಾರಿ ಎಚ್.ಎಸ್.ಪಾಟೀಲ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್.ನಡುಗಡ್ಡಿ, ಅರಣ್ಯಾಧಿಕಾರಿಗಳಾದ ಮಂಜುನಾಥ ಧೂಳೆ, ಸಂಗಾಲಕ, ಸರ್ವೇ ಅಧಿಕಾರಿ ಕಾಂಬಳೆ, ಸಿಡಿಪಿಒ ಗೀತಾ ಗುತ್ತರಗಿಮಠ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article