ಬಳ್ಳಾರಿ, ಏ.15.: ಬಾಬಾ ಸಾಹೇಬ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸುವ ಮೂಲಕ ತಮ್ಮ ಸಮ ಸಮಾಜದ ಚಿಂತನೆಯ ಮಹಾನ್ ವ್ಯಕ್ತಿಯಾಗಿದ್ದರು ಎಂದು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್ ತಿಳಿಸಿದರು. ಅವರಿಂದು ಅಂಬೇಡ್ಕರ್ ಜಯಂತಿ ಪ್ರಯುಕ್ತ ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ನಗರದ ಫಸ್ಟ್ ಗೇಟ್ ಬಳಿಯಿರುವ ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಜಿ ಗೋವರ್ಧನ, ವೆಂಕಟೇಶ್, ನಟರಾಜ, ಸಣ್ಣ ನಾಗರಾಜ, ಫೋಟೊರಾಜ, ಗುರುದೇವ, ಪೆದ್ದ ಎರಿಸ್ವಾಮಿ, ಹೊನ್ನೇಶ್ ಬಿ ಗೋನಾಳ್, ಶ್ರೀನಿವಾಸ್ ಎಸ್, ಅರುಣ್ ಕುಮಾರ್ ಮುಂಡ್ರಿಗಿ, ಹುಲುಗೇಶ್ ಹೆಗಡೆ, ನಾಗರಾಜ್ ಹೊಗಡೆ, ಪ್ರಹ್ಲಾದ್ ತೆಗ್ಗಿನಬೂದಿಹಾಳ್, ಮಹೇಂದ್ರ ಮುಂತಾದವರು ಉಪಸ್ಥಿತರಿದ್ದರು.


