ಇಂಡಿ,ಏ.೧೭ : ಕರ್ನಾಟಕ ರಾಜ್ಯ ಇಂಡಿ ತಾಲೂಕಿನ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದಿಂದ ತಮ್ಮ ವಿವಿಧ ಬೇಡಿಕೆ ಆಗ್ರಹಿಸಿ ಆಡಳಿತಸೌಧದಲ್ಲಿ ಪ್ರತಿಭಟನೆ ನಡೆಸಿದರು.
ಇಂಡಿ ತಾಲೂಕಾ ಹಾಸ್ಟೇಲ್ ಮತ್ತು ವಸತಿ ಶಾಲೆ ಹೊರ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ದಾನಮ್ಮ ಹೂಗಾರ ಮಾತನಾಡಿ ಹಿಂದುಳಿದ ವರ್ಗಗಳ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಹಾಸ್ಟೆಲ ಹಾಗೂ ವಸತಿ ನಿಲಯಗಳಲ್ಲಿ ಕೆಲಸ ಮಾಡುವ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಚತಾಗಾರರು ಕಾವಲುಗಾರರು ಜವಾನರು ನರ್ಸಗಳು ಕಂಪ್ಯೂಟರ ಅಪರೇಟರಗಳು ಡಾಟಾ ಎಂಟ್ರಿ ಅಪರೇಟರಗಳು , ಸುಮಾರು ಹದಿನೈದು ವರ್ಷದಿಂದ ಇಪ್ಪತ್ತು ವರ್ಷಗಳ ವರೆಗೆ ಕೆಲಸ ಮಾಡುತ್ತಿದ್ದಾರೆ.
ಅವರಿಗೆ ಕನಿಷ್ಠ ವೇತನ ಜಾರಿ ಆಗಬೇಕು ಎಲ್ಲಾ ಹೊರಗುತ್ತಿಗೆ ನೌಕರರಿಗೂ ಸೇವಾ ಭದ್ರತೆ ನೀಡಿ ಖಾಯಂ ಮಾಡಬೇಕು. ಏಪ್ರೀಲ ಮತ್ತು ಮೇ ತಿಂಗಳ ಅವಧಿಯಲ್ಲಿ ಹಾಸ್ಟೆಲ ನೌಕರರಿಗೆ ರಜಾ ಸಹಿತ ವೇತನ ನೀಡಬೇಕು ಎಂದರು.
ತಾಲುಕಾ ಪ್ರಧಾನ ಕಾರ್ಯದರ್ಶಿ ರಜನಿ ಬನಸೋಡೆ, ಕಲಾವತಿ ಕಾಳೆ, ಯಲ್ಲಮ್ಮ ಮದಭಾವಿ ಶಾರದಾ ಬಿರಾದಾರ, ಪ್ರೇಮಾವತಿ ಬಜಂತ್ರಿ ರೇಣುಕಾ ಬಾರಾಸೆ ಶಶಿಕಲಾ ಕಮತಿ ಗೀರಿಜಾ ಮದಭಾವಿ ಸುಮಂಗಲಾ ಕುಂಬಾರುವಮ್ಮ ಕಾಪಸೆ ಶೋಭಾ ಬಾರಿಕಾಯಿ, ಪ್ರಕಾಶ ದೇಸಾಯಿ, ದಾವಲಸಾಬ ಕಸ್ಸಾಬ ಮತ್ತಿತರಿದ್ದರು.
ತಹಸೀಲ್ದಾರ ಬಿ.ಎಸ್ ಕಡಕಬಾವಿ ಇವರಿಗೆ ಮನವಿ ಅರ್ಪಿಸಿದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರ ಪ್ರತಿಭಟನೆ


