ಮುಗಳಖೋಡ [೨೨] ಪಟ್ಟಣದ ಶ್ರೀ ಕಕ್ಕಯ್ಯಾ ಡೋರ ಸಮಾಜದವರಿಂದ ಶ್ರೀ ವಿಠ್ಠಲ ರುಕ್ಮಾಯಿ ಜಾತ್ರಾಮಹೋತ್ಸವ ನಿಮಿತ್ಯ ಗುರುವಾರ ದಿ 20 ರಿಂದ 22 ವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು . ಪ್ರತಿ ನಿತ್ಯ ಬೆಳಗ್ಗೆ 7 ಗಂಟೆಗೆ ಅಭಿಷೇಕ ಸಾಯಂಕಾಲ ವೀಣೆ ನಿಲ್ಲಿಸುವುದು ಕೀರ್ತನಕಾರರಾದ ವಿಠ್ಠಲ ಮಾ ದೇವಮಾನೆ ,ಮಹಾದೇವ ವೀರಣ್ಣವರ,ಸಿದ್ದಪ್ಪ ರಾಜಾಪೂರ ಇವರಿಂದ ರಾತ್ರಿ 8 ಗಂಟೆಯಿಂದ 10 ರವರೆಗೆ ಕೀರ್ತನೆ ನಂತರ ಕಪ್ಪಲಗುದ್ದಿ,ಖಣದಾಳ,ಸಪ್ತಸಾಗರ ,ಏಕನಾಥ ತುಕಾರಾಮ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು . ಶನಿವಾರ 22 ರಂದು ಶ್ರೀ ವಿಠ್ಠಲ ರುಕ್ಮಾಯಿ ಮಂದಿರದಿಂದ ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ ಭೃಹ್ನ ಮಠದವರೆಗೆ ಪ್ರಮುಖ ಬೀದಿಗಳಲ್ಲಿ ವಾರಿಕರರು, ಸಂತರು, ಕುಂಬಾರೂತಿ ಹೊತ್ತ ಸುಮಂಗಲೇಯರು ವಿಠ್ಠಲ ರುಕ್ಮಾಯಿ ಅಭಂಗ ಹಾಡುತ್ತಾ ಮೆರವಣಿಗೆಯೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು ನಂತರ ಶ್ರೀ ಫಲ ಸವಾಲ ವಿತರಣೆಯೊಂದಿಗೆ ಶ್ರಾವಣ ಮಾಸದ ವಿಠ್ಠಲ ರುಕ್ಮಾಯಿ ಜಾತ್ರಾಮಹೋತ್ಸವ ಸಂಪನ್ನಗೊಂಡಿತು ಸಂಪನ್ನಗೊಂಡಿತು .ಈ ಕಾರ್ಯಕ್ರಮದಲ್ಲಿ ಪಟ್ಟಣದ ಹಿರಿಯರು ರಾಜಕೀಯ ಮುಖಂಡರು ಅತಿಥಿಗಳಾಗಿ ಆಗಮಿಸುವರು.ಗುರುವಾರ ವೀಣಾ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಸಂತ ಮಹಾಂತರಾದ ಅಶೋಕ ಕದಮ್ಮ ,ಸಮಿತಿ ಅಧ್ಯಕ್ಷ ಸಂಜು ಕದಮ್ಮ, ಲಕ್ಷ್ಮಣ್ಣ ಜೊಗದಂಡೆ ,ಭರಮಾ ಕದಮ್ಮ, ಪ್ರವೀಣ ಕದಮ್ಮ, ಅಶೋಕ ಮಾವರಕರ ,ಪ್ರದೀಪ ಕದಮ್ಮ, ಸಿದ್ದರಾಮ ಪೋಳ, ಏಕನಾಥ ಕದಮ್ಮ, ನಾರಾಯಣ ಕಲ್ಲೋಳಿ, ಮಾರುತಿ ಕದಮ್ಮ, ಗುರು ತೈಕಾರ, ಸಿದ್ದರಾಮ ಕದಮ್ಮ ವಿರುಪಾಕ್ಷಿ ತಿಳಗಂಜಿ, ಯಮನಪ್ಪಾ ಕದಮ್ಮ, ದ್ರೌಪದಿ ತೈಕಾರ, ಪಾರವ್ವಾ ಮೇತ್ರಿ ,ಸುನಿಲವ್ವಾ ಐದಮನಿ,ಶೋಭಾ ಮೇತ್ರಿ, ಯಂಕವ್ವಾ ಗೋಕಾಕ ಹಾಗೂ ಭಕ್ತರು ಭಾಗವಹಿಸಿದ್ದರು.