Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಮ್ಮು ಕಾಶ್ಮೀರ ರಾಜ್ಯದ ಚೆನಾಬ್ ಸೇತುವೆ ಹೃದಯಗಳನ್ನು ಜೋಡಿಸುವ ಸೇತುಬಂಧ: ಟಿ.ಜಿ. ಸೀತಾರಾಂ

ನವದೆಹಲಿ: ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (AICTE) ಅಧ್ಯಕ್ಷರಾದ ಪ್ರೊ. ಟಿ.ಜಿ. ಸೀತಾರಾಂ ಅವರು ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ರೈಲ್ವೆ ಯೋಜನೆಯಾದ ‘ಚೆನಾಬ್ ಸೇತುವೆ’ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಇದನ್ನು “ಹೊಸ ಭಾರತದ ಅದ್ಭುತ ಸಾಧನೆ” ಎಂದು ಬಣ್ಣಿಸಿದ್ದಾರೆ. ನವದೆಹಲಿಯ ರೈಲ್ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅವರು ಸೇತುವೆ ನಿರ್ಮಾಣದ ಹಿನ್ನೆಲೆ ಮತ್ತು ತಮ್ಮ ಪಾತ್ರದ ಬಗ್ಗೆ ವಿವರವಾಗಿ ಹಂಚಿಕೊಂಡರು.


“ಚೆನಾಬ್ ಸೇತುವೆ ಅನೇಕ ಎಂಜಿನಿಯರ್‌ಗಳು, ಕಾರ್ಮಿಕರು ಹಾಗೂ ವಿಜ್ಞಾನಿಗಳ ಶ್ರಮದ ಫಲವೇ ಅಲ್ಲದೆ, ಅದು ಪ್ರತಿಯೊಬ್ಬ ಭಾರತೀಯನ ಕನಸು ಮತ್ತು ಕೊಡುಗೆಯ ಫಲವಾಗಿದೆ. ಇದು ನಮ್ಮ ಎಲ್ಲರ ಜತೆಗೆ ನುಡಿಯುವ ರಾಷ್ಟ್ರೀಯ ಕನಸು,” ಎಂದು ಅವರು ಹೇಳಿದರು.


ಸ್ಮೃತಿ ಚಿಹ್ನೆಯಂತಿರುವ ಈ ಸೇತುವೆಯ ಪ್ರಯಾಣವನ್ನು ಅವರು ಹೀಗೆ ಸ್ಮರಿಸಿದರು. ನಾನು 2005ರಲ್ಲಿ ಮೊದಲ ಬಾರಿಗೆ ಚೆನಾಬ್ ಕಣಿವೆಗೆ ಹೋದಾಗ, ನಾನು ಇತಿಹಾಸದ ಭಾಗವಾಗುತ್ತಿದ್ದೇನೆ ಎಂಬುದು ನನಗೆ ಸ್ಪಷ್ಟವಾಗಿರಲಿಲ್ಲ. ಭೂಗೋಳಿಕವಾಗಿ ಇದು ಅತೀ ಕಷ್ಟದ ಪ್ರದೇಶವಾಗಿದ್ದು ಭೂಮಿಯ ಸ್ಥಿರತೆ ಏನೇನೂ ಖಚಿತವಿರಲಿಲ್ಲ. ಆದರೂ ನಮ್ಮ ದೃಷ್ಟಿಕೋನ ಸ್ಪಷ್ಟವಾಗಿತ್ತು – ನಾವು ಕೇವಲ ಮೂಲಸೌಕರ್ಯವನ್ನು ಕಟ್ಟುತ್ತಿರಲಿಲ್ಲ ಅದು ರಾಷ್ಟ್ರಗೌರವವನ್ನು ರೂಪಿಸುತ್ತಿದ್ದೆವು.


ಚೆನಾಬ್ ನದಿಯಿಂದ 359 ಮೀಟರ್ ಎತ್ತರದಲ್ಲಿರುವ ಈ ಸೇತುವೆ ಇಂದಿಗೆ ಜಾಗತಿಕ ಇಂಜಿನಿಯರಿಂಗ್‌ನ ಚಿಹ್ನೆಯಾಗಿದೆ. ವಿಜ್ಞಾನ, ಮನೋಬಲ ಮತ್ತು ರಾಷ್ಟ್ರೀಯ ಚೈತನ್ಯದ ಸಂಕಲನವಾಗಿತ್ತು ಈ ಎರಡೂ ದಶಕಗಳ ಪ್ರಯಾಣ ಎಂದು ಅವರು ಸಾವಿರಾರು ಎಂಜಿನಿಯರ್‌ಗಳ ಮತ್ತು ತಜ್ಞರ ತ್ಯಾಗವನ್ನು ಪ್ರಶಂಸಿಸಿದರು.


ಭೂಮಿಯ ಭೂಕಂಪ ಸಂವೇದನಾಶೀಲತೆ ಮತ್ತು ಕಠಿಣ ಭೂಭಾಗಕ್ಕೆ ತಕ್ಕಂತೆ ‘ಡಿಸೈನ್-ಅಸ್-ಯು-ಗೋ’ ಎಂಬ ನವೀನ ತಂತ್ರವನ್ನು ಐಐಎಸ್‌ಸಿ (IISc) ತಂಡದ ಜೊತೆ ಜಾರಿಗೆ ತಂದ ಬಗ್ಗೆ ಅವರು ವಿವರಿಸಿದರು. ಪ್ರತಿ ರಿವೆಟ್, ಪ್ರತಿಯೊಂದು ಅಡಿಪಾಯ, ಪ್ರತಿಯೊಂದು ಸ್ತಂಭ – ಕೇವಲ ತಾಂತ್ರಿಕತೆಯಲ್ಲ ಅದು ನಂಬಿಕೆಯ ಕೃತ್ಯವಾಗಿತ್ತು ಎಂದು ಅವರು ಹೇಳಿದರು.


ಇದನ್ನು ನಿರ್ಣಯಿಸುತ್ತಾ ಅವರು ಯುವಜನತೆಗೆ ಸಂದೇಶವೊಂದನ್ನು ನೀಡಿದರು. ಎಂಜಿನಿಯರಿಂಗ್ ಎಂದರೆ ಪ್ರಯೋಗಾಲಯಗಳಲ್ಲಿ ಮಾತ್ರವಲ್ಲ. ಚೆನಾಬ್ ಸೇತುವೆ ಈ ದೇಶಕ್ಕೆ ಪ್ರೀತಿ, ಪ್ರಾಮಾಣಿಕತೆ ಮತ್ತು ಶ್ರದ್ಧೆ ಇದ್ದರೆ ಅಸಾಧ್ಯವೇನು ಇಲ್ಲ ಎನ್ನುವ ಸಾಕ್ಷಿಯಾಗಿದೆ. ನಮ್ಮ ಯುವಕರು ತಮ್ಮ ಮೇಲೆಯೇ ನಂಬಿಕೆ ಇಡಬೇಕು. ನಾವು ಚೆನಾಬ್ ನದಿಗೆ ಸೇತುವೆ ನಿರ್ಮಿಸಬಲ್ಲರೆಂದರೆ, ನಮ್ಮ ಯುವಜನತೆ ಯಾವುದೇ ಎತ್ತರವನ್ನೂ ತಲುಪಬಹುದಾಗಿದೆ.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*