ಹುನಗುಂದ: ನಗರದ ವಿಮವಿವ ಸಂಘದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯದ ಹತ್ತು ವಿದ್ಯಾರ್ಥಿಗಳು ಅಗ್ನಿವೀರರಾಗಿ ಅಯ್ಕೆಯಾಗಿರುವದು ಬಹಳ? ಸಂತೋಷ ತಂದಿದೆ. ದೇಶ ಸೇವೆ ಮಾಡಲು ಇದೊಂದು ಸುವರ್ಣ ಅವಕಾಶವಾಗಿದೆ ಎಂದು ಪದವಿ ಪ್ರಾಚಾರ್ಯ ಶ್ರೀಶೈಲ ಗೋಲಗೊಂಡ ಹೇಳಿದರು.
ಇಲ್ಲಿನ ಕಲಾ, ವಿ.ಎಂ.ಎಸ್.ಆರ್.ವಸ್ತ್ರದ ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಎನ್ಸಿಸಿ ವಿಭಾಗದ ಅಡಿಯಲ್ಲಿ ಅಗ್ನಿವೀರರಾಗಿ ಆಯ್ಕೆಯಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತ
ದೇಶಕ್ಕಾಗಿ ಉತ್ತಮ ಸೇವೆ ಸಲ್ಲಿಸಿ ತಂದೆ ತಾಯಿಗಳ ಹಾಗೂ ಮಹಾವಿದ್ಯಾಲಯದ ಗೌರವ ಹೆಚ್ಚಿಸಬೇಕು ಎಂದು ಹೇಳಿದರು.
ಕ್ರೀಡಾ ನಿರ್ದೇಶಕ ಎಸ್.ಬಿ ಚಳಗೇರಿ ಮಾತನಾಡಿ ಅಗ್ನಿವೀರ ಅಯ್ಕೆಯಾದವರಿಗೆ ನಾಲ್ಕು ವ?ಗಳಲ್ಲಿ ಸುಮಾರ ರೂ. ೨೭.೩೦ ಲಕ್ಷ ವೇತನ ಸಿಗಲಿದ್ದು, ಶೇ.೨೫ರ? ಅಭ್ಯರ್ಥಿಗಳಿಗೆ ಸೇವೆಯಲ್ಲಿ ಮುಂದುವರೆಯುವ ಅವಕಾಶವಿದೆ. ಯಾವದೇ ಕೆಲಸದಲ್ಲಿ ಯಶಸ್ಸು ಸಿಗಬೇಕಾದರೆ ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆ ಇರಬೇಕು ಎಂದರು. ಪದವಿ ಪೂರ್ವ ಪ್ರಾಚಾರ್ಯ ಎಚ್.ಎಸ್.ಬೋಳಿಶೆಟ್ಟರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಗ್ನಿ ವೀರರಾಗಿ ಆಯ್ಕೆಯಾದ ದರ್ಶನ ಕುಣಬೆಂಚಿ, ದ್ಯಾಮಣ್ಣ ಅಂಟರದಾನಿ, ಧರ್ಮಪ್ಪ ಚಿತ್ತವಾಡಗಿ, ಮಂಜುನಾಥ ಬನ್ನಿ, ನವೀನ ಗೂಳಿ, ಶಿವಪ್ಪ ಪವಾಡಿಗೌಡರ, ವಿಶ್ವನಾಥ ಮೊಕಾಶಿ, ಮಂಜುನಾಥ ತಳವಾರ, ಆನಂದ ಹೆಳವರ, ಶಿವರುದ್ರಪ್ಪ ಗೂಳಿ ಅವರನ್ನು ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಅಗ್ನಿ ವೀರರಾಗಿ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು. ಲೆಫ್ಟಿನೆಂಟ್ ವಿರೇಶ ರಾಯರ ನಿರೂಪಿಸಿದರು. ಪ್ರಾಧ್ಯಪಕ ಡಿ.ಎಸ್. ತಿಪ್ಪೇಸ್ವಾಮಿ ವಂದಿಸಿದರು.
