ಅಥಣಿ : ಇಂದು ಮಕ್ಕಳು ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ಮೂಲಕ ಪರಿಸರದ ಬಗ್ಗೆ ಜವಾಬ್ದಾರಿ ಹೊಂದಿದ್ದಾರೆ ಎಂಬುದನ್ನು ತೋರಿಸಿದ್ದಾರೆ. ಒಂದೊಂದು ಕುಂಡವು ಮಗುವಿನ ಶ್ರಮ ಮತ್ತು ಸೃಜನಶೀಲತೆಗೆ ಸಾಕ್ಷಿಯಾಗಿದೆ. ಇಂತಹ ಚಟುವಟಿಕೆಗಳಿಂದ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಪರಿಸರ ಪ್ರಜ್ಞೆ ಬೆಳೆಯುತ್ತದೆ" ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಅರಣ್ಯ ಅಧಿಕಾರಿ ಮಲ್ಲಪ್ಪ ತೇಲಿ ಅವರು ಅಭಿಪ್ರಾಯಪಟ್ಟರು.
ಅವರು ಪರಿಸರ ಸಂರಕ್ಷಣೆಯ ಮಹತ್ವವನ್ನು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಮೂಡಿಸುವ ಉದ್ದೇಶದಿಂದ ಸ್ಥಳೀಯ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ರಂದು "ತ್ಯಾಜ್ಯದಿಂದ ಅತ್ಯುತ್ತಮ - Best Out of Waste"_ಎಂಬ ವಿಶೇಷ ಸೃಜನಶೀಲ ಕುಂಡ ತಯಾರಿಕೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಾ "ತ್ಯಾಜ್ಯವನ್ನು ಕಡಿಮೆ ಮಾಡೋಣ - ಭೂಮಿಯನ್ನು ಹಸಿರಾಗಿಸೋಣ" ಎಂಬ ಘೋಷವಾಕ್ಯದೊಂದಿಗೆ ನಡೆದ ಈ ಕಾರ್ಯಕ್ರಮಕ್ಕೆ 1 ರಿಂದ 5 ನೇ ತರಗತಿಯವರೆಗಿನ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷ ಎಂದರು.
ಅನಂತರ ಸಂಸ್ಥೆಯ ಆಡಳಿತ ಅಧಿಕಾರಿ ಸಂತಾಒಷ ಬಡಕಂಬಿ ಮಟತನಾಡಿ ಮಕ್ಕಳಿಗೆ ಮನೆಯಲ್ಲಿರುವ ಹಳೆಯ ಪ್ಲಾಸ್ಟಿಕ್ ನೀರಿನ ಬಾಟಲಿಗಳು, ನೀರಿನ ಕ್ಯಾನ್, ಎಣ್ಣೆಯ ಕ್ಯಾನ್, ಹಳೆಯ ಬಕೆಟ್ ಮತ್ತು ಇತರೆ ತ್ಯಾಜ್ಯ ವಸ್ತುಗಳನ್ನು ಬಳಸಿ ಸುಂದರ ಮತ್ತು ಉಪಯುಕ್ತವಾದ _ಗಿಡದ ಕುಂಡ_ ತಯಾರಿಸುವ ಸವಾಲನ್ನು ನೀಡಲಾಗಿತ್ತು. ಮಕ್ಕಳು ತಮ್ಮ ಕಲ್ಪನಾಶಕ್ತಿಯಿಂದ ಆ ಬಾಟಲಿಗಳಿಗೆ ಬಣ್ಣ ಹಚ್ಚಿ, ಪ್ರಾಣಿ-ಪಕ್ಷಿಗಳ ಆಕಾರ ನೀಡಿ, ಬಣ್ಣದ ಟೇಪ್ ಮತ್ತು ಇತರೆ ವಸ್ತುಗಳಿಂದ ಆಕರ್ಷಕವಾಗಿ ಅಲಂಕರಿಸಿದರು. ತಳಭಾಗದಲ್ಲಿ ನೀರು ಹರಿದು ಹೋಗಲು ರಂಧ್ರ ಮಾಡಿ, ಅದರಲ್ಲಿ ಮಣ್ಣು ತುಂಬಿ _ಪುದೀನಾ, ಮನಿ ಪ್ಲಾಂಟ್, ಅಲೋವೆರಾ, ಗುಲಾಬಿ, ಸೂರ್ಯಕಾಂತಿ_ ಸೇರಿದಂತೆ ವಿವಿಧ ಗಿಡಗಳನ್ನು ನೆಟ್ಟು ಶಾಲೆಗೆ ತಂದಿದ್ದು ಶ್ಲಾಘನೀಯ ಎಂದರು.
ಅನಂತರ ಪಾಲಕರ ಪ್ರತಿನಿಧಿ ಗೀತಾ ಮಡ್ಡಿ ಅವರು ಮಾತನಾಡಿ ವಿಶೇಷವಾಗಿಮಕ್ಕಳಲ್ಲಿ ಪರಿಸರ ಕಾಳಜಿ ಉಂಟು ಮಾಡುವ ಸ್ಪರ್ಧೆ ಆಯೋಜನೆ ವಿಶೇಷ ಎಂದರು, ಈ ವೇಳೆ ಮುಖ್ಯೊಪಾಧ್ಯಾಯ ಮಲ್ಲಿಕಾರ್ಜುನ ನಿಗಡಿ, ಪಾಲಕರ ಪ್ರತಿನಿಧಿ ಬಸವರಾಜ ನಾವಿ ಸೇರಿದಂತೆ ಶಿಕ್ಷಕ ವೃಂದ, ಪೋಷಕರು ಹಾಗೂ ಹಾಸ್ಟೇಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ತಯಾರಿಸಿದ ಕುಂಡಗಳನ್ನು ಶಾಲಾ ಆವರಣದಲ್ಲಿ ಪ್ರದರ್ಶಿಸಿ "Green Gallery" ರೂಪಿಸಲಾಗಿತ್ತು. ಇದು ಎಲ್ಲರ ಮೆಚ್ಚುಗೆ ಪಾತ್ರವಾಯಿತು. ಸಮಸ್ತ ಶಿಕ್ಷಕ ವೃಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಿತು.
