ತಾಳಿಕೋಟೆ, ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪುರಸಭೆ ತಾಳಿಕೋಟೆ ವತಿಯಿಂದ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆ, ನೈರ್ಮಲ್ಯ ಹಾಗೂ ಆರೋಗ್ಯ ಜಾಗೃತಿ ಮೂಡಿಸುವ ಕುರಿತು ಮಾಹಿತಿ, ಶಿಕ್ಷಣ ಮತ್ತು ಸಂವಹನ (ಆಯ್ಇಸಿ) ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಳೆನೀರು ಕೊಯ್ಲು ಹಾಗೂ ಜಲ ಸಂಪನ್ಮೂಲಗಳ ರಕ್ಷಣೆಯನ್ನು ಉತ್ತೇಜಿಸುವ "ಅಚಿಣಛಿh ಣhe ಖಚಿiಟಿ" ಜಲಾಂದೋಲನ ಮತ್ತು ಡಯೇರಿಯಾ (ಅತಿಸಾರ ಭೇದಿ) ತಡೆಗಟ್ಟುವಿಕೆ ಅಭಿಯಾನದ ಕುರಿತು ವಿದ್ಯಾರ್ಥಿಗಳಿಗೆ ವಿಸ್ತೃತ ಮಾಹಿತಿ ನೀಡಲಾಯಿತು. ಇದೇ ವೇಳೆ, ೨೦೨೬-೨೭ ನೇ ಸಾಲನ್ನು "ತ್ಯಾಜ್ಯ ವಿಂಗಡಣೆ ವರ್ಷ" (ಙeಚಿಡಿ oಜಿ Wಚಿsಣe Segಡಿegಚಿಣioಟಿ) ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಮೂಲದಲ್ಲೇ ತ್ಯಾಜ್ಯ ಬೇರ್ಪಡಿಸುವ ಪ್ರಾಮುಖ್ಯತೆಯನ್ನು ಪುರಸಭೆ ಆರೋಗ್ಯ ನಿರಿಕ್ಷಕ ಶಿವಾನಂದ ಜುಮನಾಳ ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಪಟ್ಟಣದ ಸ್ವಚ್ಛತೆ ಹಾಗೂ ಜಲ ಸಂರಕ್ಷಣೆಗೆ ಪ್ರತಿಜ್ಞೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಎಸ್ ಬಿ ಸಾವಳಸಂಗ, ಭೀಮನಗೌಡ ಚೌಧರಿ, ಶ್ರೀಮತಿ ಸುಮಂಗಲಾ ಬಿರಾದಾರ, ಶ್ರೀಮತಿ ಭಾಗ್ಯಶ್ರೀ ಬಡಿಗೇರ, ಶ್ರೀಮತಿ ಭುವನೇಶ್ವರಿ ಹಿರೇಮಠ, ಶ್ರೀಮತಿ ಅಶ್ವಿನಿ ಮಾನೆ, ಅಕ್ಷತಾ ಬಿರಾದಾರ ಹಾಗೂ ನಟರಾಜ ಮಂಕಣಿ, ಪುರಸಭೆ ಆರೋಗ್ಯ ನಿರಿಕ್ಷಕ ಫಿರೋಜ ಮುಲ್ಲಾ. ರಂಗನಾಥ ಅಜಮನಿ, ಕಂದಾಯ ನಿರಿಕ್ಷಕ ಶರಣಗೌಡ ಪಾಟೀಲ, ಭೀಮಣ್ಣ ಬೋಳಿ, ಮೊದಲಾದವರು ಉಪಸ್ಥಿತರಿದ್ದರು.
